ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ

Public TV
1 Min Read
MYSURU WIFE MURDER

ಮೈಸೂರು: ತವರು ಮನೆ ಸೇರಿದ್ದ ಪತ್ನಿಯನ್ನು ಪತಿ ಭೀಕರವಾಗಿ ಕೊಂದ ಘಟನೆ ಮೈಸೂರಿನ (Mysuru) ಕುಂಬಾರಕೊಪ್ಪಲಿನಲ್ಲಿ ನಡೆದಿದೆ.

ಹರ್ಷಿತಾ (21)ವರ್ಷ ಮೃತ ದುರ್ದೈವಿ. ಈಕೆಯನ್ನು ಪತಿ ಮಾದೇಶ್ (30) ಕೊಲೆ ಮಾಡಿದ್ದು, ಈತ ಗುಂಡ್ಲುಪೇಟೆ ತಾಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ.

MYSURU MURDER

ವರ್ಷದ ಹಿಂದೆ ಹರ್ಷಿತಾ, ಮಾದೇಶ್ ಇಬ್ಬರು ಮದುವೆಯಾಗಿದ್ದರು. ಪ್ರಾರಂಭದ ದಿನಗಳಲ್ಲಿ ಅನ್ಯೋನತೆಯಿಂದ ಇದ್ದ ದಂಪತಿ ನಡುವೆ ಕ್ರಮೇಣ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಬೇಸರಗೊಂಡ ಹರ್ಷಿತಾ ತವರು ಮನೆ ಸೇರಿದ್ದಳು. ಹೀಗಾಗಿ ಹರ್ಷಿತಾಳನ್ನ ಕರೆದುಕೊಂಡು ಹೋಗಲೆಂದು ಮಾದೇಶ್ ಬಂದಿದ್ದನು.

ಆಗ ಹರ್ಷಿತಾ ಮೇಲೆ ಮಾದೇಶ್ ಮನಸ್ಸೋ ಇಚ್ಛೆ ಚಾಕುವಿನಲ್ಲಿ ಚುಚ್ಚಿ ಕೊಲೆ ಮಾಡಿದ್ದಾನೆ. ಇತ್ತ ಅಡ್ಡ ಬಂದ ಅತ್ತೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಘಟನೆಯ ಮಾಹಿತಿ ಅರಿತ ಕೂಡಲೇ ಮೇಟಗಳ್ಳಿ ಪೊಲೀಸರು (Metagalli Police Station) ಸ್ಥಳಕ್ಕಾಗಿಮಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Web Stories

Share This Article