ನವದೆಹಲಿ: ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಎರಡು ಬಾರಿ ಆಕಸ್ಮಿಕ ಮುಖ್ಯಮಂತ್ರಿಯಾದವರು. ಸಿಎಂ ಆಗಿ ಅಧಿಕಾರ ಎಂಜಾಯ್ ಮಾಡಿದ್ದಾರೆ. ಈಗ ಜೆಡಿಎಸ್ ಕಥೆ ಮುಗಿಯುತ್ತಿದೆ. ಹೀಗಾಗಿ ಹತಾಶರಾಗಿ ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ವ್ಯಂಗ್ಯ ಮಾಡಿದ್ದಾರೆ.
ಬ್ರಾಹ್ಮಣ (Brahmin) ಸಿಎಂ ಹೇಳಿಕೆ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಕೆಲವೇ ದಿನಗಳಲ್ಲಿ ಜೆಡಿಎಸ್ (JDS) ಇಬ್ಭಾಗ ಆಗಲಿದೆ. ಕುಮಾರಸ್ವಾಮಿ ಬಣ, ಭವಾನಿ ರೇವಣ್ಣ ಬಣವಾಗಿ ಒಡೆದು ಚೂರಾಗಲಿದೆ. ನಿಮ್ಮ ಪಕ್ಷ ನಿಮ್ಮ ಕಂಟ್ರೋಲ್ ನಲ್ಲಿ ಇಲ್ಲ, ಇತರೆ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಸ್ತ್ರಕ್ಕೆ ಪ್ರತ್ಯಾಸ್ತ್ರ – ಡಿಕೆಶಿ ವಿರುದ್ಧ CBI ದೂರಿಗೆ ಪ್ರಯತ್ನಿಸಿದ್ದ ರಮೇಶ್ ಜಾರಕಿಹೊಳಿ ಮೇಲೆ ಕಾಂಗ್ರೆಸ್ ಕಂಪ್ಲೆಂಟ್
ಕರ್ನಾಟಕದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬರಲಿದೆ, ಯಾರು ಸಿಎಂ ಆಗಲಿದ್ದಾರೆ ಎನ್ನುವುದು ಅಪ್ರಸ್ತುತ. ಪ್ರಹ್ಲಾದ್ ಜೋಶಿ ಸಿಎಂ ಆಗಬಾರದಾ? ಅವರು ಪಕ್ಷದ ರಾಜಧ್ಯಕ್ಷರಾಗಿದ್ದರು, ಸಂಘಟನೆ ಮಾಡಿದವರು, ಬೇರೆ ರಾಜ್ಯಗಳಿಗೆ ಉಸ್ತುವಾರಿಯಾಗಿದ್ದಾರೆ, ಕೇಂದ್ರ ಸಚಿವರಾಗಿದ್ದಾರೆ ಪ್ರಹ್ಲಾದ್ ಜೋಶಿ (Pralhad Joshi) ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬ್ರಾಹ್ಮಣ ಸಮಾಜಕ್ಕೆ ಅವಹೇಳನ ಮಾಡಿಲ್ಲ- ಭಾರೀ ವಿರೋಧದ ಬಳಿಕ ಹೆಚ್ಡಿಕೆ ಸ್ಪಷ್ಟನೆ
ನರೇಂದ್ರ ಮೋದಿ (Narendra Modi) ಹಿಂದುಳಿದ ವರ್ಗದವರು ಪ್ರಧಾನಿಯಾಗಿದ್ದಾರೆ. ಹಾಗೆಯೇ ಅರ್ಹತೆ ಇದ್ದವರು ಸಿಎಂ ಆಗಲಿದ್ದಾರೆ ನಮ್ಮ ಪಕ್ಷದ ಬಗ್ಗೆ ಮಾತನಾಡುವುದಕ್ಕೆ ನೀವ್ಯಾರು? ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k