ವಿಜಯಪುರ: ನಾವು ಹಿಂದೂಗಳ ಪರವಾಗಿಯೇ ಇದ್ದೇವೆ. ಯಾರದೇನು ಅಂಜಿಕೆ, ಪಂಜಿಕೆಯಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಕೊಟ್ಟ ಪರಿಹಾರ ಹಣವನ್ನು ಮುಸ್ಲಿಂ ಮಹಿಳೆ ಎಸೆದ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಅವರು, ಅವರು ಸಿದ್ದರಾಮಯ್ಯ ಬಂಧುಗಳು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಕರೆಂಟ್ ನಾಪತ್ತೆ – ವಿದ್ಯುತ್ ಇಲ್ಲದೆ ಪರದಾಡಿದ ಸುಳ್ಯದ ಜನತೆ
ಅವರಿಗೂ ಗೊತ್ತಾಗಿದೆ, ಪರಿಹಾರ ಕೊಟ್ಟಷ್ಟೇ ಒಗಿತಾರೆ ಅಂತ. ಶಾಶ್ವತವಾಗಿ ನಮಗೆ ಪರಿಹಾರ ಕೊಡಲ್ಲ ಅಂತಾ ಮುಸ್ಲಿಮರಿಗೆ ಗೊತ್ತಾಗಿದೆ. ಬಿಜೆಪಿಯವರು ಮುಸ್ಲಿಂ ಮಹಿಳೆಗೆ ಕುಮ್ಮಕ್ಕು ಯಾಕೆ ಕೊಡ್ತಾರ್ರೀ. ರೊಕ್ಕ ಒಗೆದವರು ಬಿಜೆಪಿಯವರ ಮಾತು ಕೇಳ್ತಾರೇನ್ರಿ ಎಂದು ಪ್ರಶ್ನಿಸಿದ್ದಾರೆ.
ನಾಳೆ ಅವರಿಗೆ ಮಕ್ಕಳು ಆಗದಿದ್ರೆ ಬಿಜೆಪಿ ಕುಮ್ಮಕ್ಕು ಅಂತಾರೆ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ. ಹಿಂದೂಗಳಿಗೆ ಅನ್ಯಾಯ ಆಗೈತಿ, ಅದಕ್ಕೆ ಹಿಂದೂಗಳಿಗೆ ಪರಿಹಾರ ಕೊಟ್ಟಿದ್ದೀವಿ. ಅದಕ್ಕೆ ಅಂಜಿಕೆಯೇನು? ಕೆರೂರು ಗಲಭೆ ಪ್ರಕರಣದಲ್ಲಿ ಬಿಜೆಪಿ ಸಚಿವರು, ಶಾಸಕರು ಹಿಂದೂ ಗಾಯಾಳುಗಳಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ ಎಂದು ಯತ್ನಾಳ್ ತಿಳಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಹಿಜಬ್ ಕಿಚ್ಚು – ವಿವಾದಿತ ವಿದ್ಯಾರ್ಥಿನಿಯರ ಮೂಲಕ CFI ಗರ್ಲ್ಸ್ ಕಾನ್ಫರೆನ್ಸ್
ಅನ್ಯಾಯ ಆಗಿರೋದು ಹಿಂದೂಗಳಿಗೆ. ನೀವೂ ಸುಮ್ಮನೆ ಇದ್ದವರಿಗೆ (ಹಿಂದೂ) ಹೊಡೆದಿರಿ. ಅವರಿಗೇಕೆ ಪರಿಹಾರ ಕೊಡ್ತಾರೆ, ನಮಗೇನು ತಲೆ ಕೆಟ್ಟಿದೆಯಾ? ದೇಶದ್ರೋಹಿ ಕೆಲಸ ಮಾಡ್ತೀರಿ. ನೀವೂ ಚಾಕು ಹಾಕುತ್ತೀರಿ. ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ? ನಾವು ಹಿಂದೂಗಳ ಪರವಾಗಿಯೇ ಇದ್ದೇವೆ. ಯಾರ ಅಂಜಿಕಿ, ಪಂಜಿಕೆಯಿಲ್ಲ ಎಂದಿದ್ದಾರೆ.