Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ನಿಮ್ಮ ವಕ್ಫ್‌ಗೆ ಒಬ್ಬ ಮುಸ್ಲಿಮೇತರರೂ ಬರುವುದಿಲ್ಲ – ಅಮಿತ್ ಶಾ

Public TV
Last updated: April 2, 2025 11:34 pm
Public TV
Share
3 Min Read
Amit Shah
SHARE

ನವದೆಹಲಿ: ವಕ್ಫ್ ಆಸ್ತಿಯನ್ನು ತಪ್ಪಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ವಕ್ಫ್ ಬೋರ್ಡ್ ಮತ್ತು ವಕ್ಫ್ ಕೌನ್ಸಿಲ್‌ನ ಕೆಲಸ. ಹಾಗಾಗಿ ವಕ್ಫ್‌ ಕಾನೂನು (Waqf Law) ಅಡಿಯಲ್ಲಿ ಯಾರಾದ್ರೂ ದಾನ ಮಾಡಿದ ಆಸ್ತಿಯ ಆಡಳಿತವನ್ನು ಮಾತ್ರ ಮುಸ್ಲಿಮೇತರ ಸದಸ್ಯರು ನೋಡಿಕೊಳ್ತಾರೆ. ಇನ್ನುಳಿದಂತೆ ಧಾರ್ಮಿಕ ವ್ಯವಹಾರ ನಿರ್ವಹಣೆ ಮಾಡುವಲ್ಲಿ ಮುಸ್ಲಿಮೇತರ ಸದಸ್ಯರು ಯಾವುದೇ ಪಾತ್ರ ನಿರ್ವಹಿಸಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದ ವೇಳೆ ವಕ್ಫ್ ಬಿಲ್ (Waqf Amendment Bill) ಮಂಡನೆಗೆ ಬಗ್ಗೆ ತಡವಾಗಿ ಸಂಸದರಿಗೆ ಮಾಹಿತಿ ಬಂದಿದೆ, ಸಂಸದರಿಗೂ ಅವಕಾಶ ನೀಡಬೇಕು, ತಿದ್ದುಪಡಿ ಪ್ರತಿಯನ್ನು ಅಧ್ಯಯನಕ್ಕೆ ಸರಿಯಾಗಿ ನೀಡಿಲ್ಲ. ನಾವು ಚರ್ಚೆ ಮಾಡಲು ಹೇಗೆ ಸಾಧ್ಯ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಗೃಹಸಚಿವ ಅಮಿತ್‌ ಶಾ, ವಿಪಕ್ಷಗಳ ಆಗ್ರಹದ ಮೇರೆಗೆ ವಕ್ಫ್‌ ತಿದ್ದುಪಡಿ ಮಸೂದೆಯನ್ನ ಜೆಪಿಸಿಗೆ ಕಳುಹಿಸಲಾಗಿತ್ತು. ಈಗ ಅಲ್ಲಿಂದ ಬಂದ ಬಳಿಕ ಸಚಿವ ಸಂಪುಟದ ಅನುಮೋದನೆ ಪಡೆದು ಈಗ ಬಿಲ್ ಮಂಡಿಸಿದೆ. ಕಾಂಗ್ರೆಸ್ ಅವಧಿಯ ರೀತಿಯಲ್ಲಿ ಜೆಪಿಸಿ ಕೆಲಸ ಮಾಡಲ್ಲ, ವ್ಯವಸ್ಥಿತ ಚರ್ಚೆಯ ಮೂಲಕ ಪರಿಶೀಲನೆಗೆ ಒಳಪಟ್ಟಿದೆ ಎಂದು ಉತ್ತರಿಸಿದರು.

ನಂತರ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಚರ್ಚೆ ವೇಳೆ ಮಾಣಿಪ್ಪಾಡಿ ವರದಿ ಉಲ್ಲೇಖಿಸಿ ಅಮಿತ್‌ ಶಾ ಮಾತನಾಡಿದರು. 29,000 ಎಕರೆ ವಕ್ಫ್‌ ಆಸ್ತಿಯನ್ನ ದೇಶದ ಕೆಲಸಗಳಿಗೆ ಬಾಡಿಗೆ ನೀಡಲಾಗಿದೆ ಅಂತಿದ್ದಾರೆ. ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆಯನ್ನ ವಕ್ಫ್‌ ಆಸ್ತಿ ಎಂದು ಘೋಷಿಸಿ ವಿವಾದ ಮಾಡಲಾಯ್ತು. ಈ ವಿವಾದಿತ ಭೂಮಿ 5,000 ಕೋಟಿ ಬೆಲೆ ಬಾಳುತ್ತದೆ. ಎಕ್ರೆಗೆ 12,000 ರೂಪಾಯಿಯಂತೆ ಬಾಡಿಗೆ ನೀಡಲಾಗಿದೆ. ಆದ್ರೆ ಇದರ ಲೆಕ್ಕಾಚಾರ ಮಾಡ್ಬೇಡಿ, ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಾರೆ. ಈ ಹಣ ದೇಶದ ಬಡ ಮುಸ್ಲಿಮರದ್ದು, ಈ ಹಣ ಕಳ್ಳತನ ಮಾಡಲಿಕ್ಕೆ ಇರೋದಲ್ಲ ಅಂತ ಹೇಳಿದ್ದಾರೆ.

ಕರ್ನಾಟಕದ ದತ್ತ ಪೀಠದ ಮೇಲೂ ಹಕ್ಕು ಸ್ಥಾಪನೆ ಮಾಡಿದ್ದಾರೆ. ಬೇರೆ ಬೇರೆ ಸಮುದಾಯದ ಭೂಮಿಯನ್ನ ಅತಿಕ್ರಮಿಸಿಕೊಳ್ಳಲಾಗಿದೆ. ಕ್ರೈಸ್ತರೂ ವಕ್ಫ್‌ ಬಿಲ್‌ಗೆ ಸಹಮತ ನೀಡಿದ್ದಾರೆ. ಈ ಬಿಲ್ ಮುಸ್ಲಿಮರ ಲಾಭಕ್ಕೆ ಇದೆ ಎಂದು ಮುಂದೆ ಗೊತ್ತಾಗಲಿದೆ, ದಕ್ಷಿಣದ ಸಂಸದರು ಇದನ್ನ ವಿರೋಧಿಸುವ ಮೂಲಕ ಕ್ರಿಶ್ಚಿಯನ್ನರ ವಿರೋಧ ಕಟ್ಟಿಕೊಳ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೂ ವಕ್ಫ್‌ ಮಸೂದೆಯ ಬಗ್ಗೆ ವಿಪಕ್ಷ ನಾಯಕರು ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದಾರೆ. ಈ ಮಸೂದೆಯೂ ಯಾವುದೇ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವುದಿಲ್ಲ. ಪಾರದರ್ಶಕತೆ ಮತ್ತು ವಕ್ಫ್ ಆಸ್ತಿಗಳ ದುರುಪಯೋಗವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಯಾವುದೇ ಮುಸ್ಲಿಮೇತರರು ವಕ್ಫ್‌ ಮಂಡಳಿಗೆ ಬರುವುದಿಲ್ಲ. ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸುವವರಲ್ಲಿ ಯಾವುದೇ ಮುಸ್ಲಿಮೇತರರನ್ನು ಸೇರಿಸುವ ನಿಬಂಧನೆ ಇಲ್ಲ, ಹಾಗೆ ಮಾಡಲು ನಾವೂ ಬಯಸೋದಿಲ್ಲ. ತಮ್ಮ ವೋಟ್‌ಬ್ಯಾಂಕ್‌ಗಾಗಿ ಅಲ್ಪ ಸಂಖ್ಯಾತರಲ್ಲಿ ಭಯ ಹುಟ್ಟಿಸಲು ಈ ರೀತಿಯ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಮುಸ್ಲಿಮೇತರ ಸದಸ್ಯರ ಕೆಲವು ವಕ್ಫ್ ಕಾನೂನಿನ ಆಡಳಿತ ಮತ್ತು ದೇಣಿಗೆಗಾಗಿ ನೀಡಿದ ನಿಧಿಗಳು ಉದ್ದೇಶಗಳಿಗಾಗಿ ಬಳಕೆಯಾಗುತ್ತಿವೆಯೇ (ಇಸ್ಲಾಂ ಧರ್ಮಕ್ಕಾಗಿ, ಬಡವರ ಅಭಿವೃದ್ಧಿಗಾಗಿ) ಅಥವಾ ಇಲ್ಲವೇ ಎಂಬುದನ್ನು ಮೇಲ್ವಿಚಾರಣೆ ಮಾಡುವುದು ಅಷ್ಟೇ, ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಲ್ಲ. ಅದನ್ನು ಬಿಟ್ಟು ವಕ್ಫ್‌ಗೆ ಒಬ್ಬ ಮುಸ್ಲಿಮೇತರನೂ ಬರುವುದಿಲ್ಲ ಅನ್ನೋದನ್ನ ಈ ಸದನದ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಬಿಲ್.. ಪ್ರಮುಖಾಂಶ
* ಇನ್ಮುಂದೆ ಹೊಸ ಆಸ್ತಿಗಳ ಘೋಷಣೆಗೆ ತಡೆ
* ಸೂಕ್ತ ದಾಖಲೆಗಳಿದ್ದರೆ ಮಾತ್ರ ಹಕ್ಕು ಸಾಧಿಸಬಹುದು
* ಎಲ್ಲಾ ವಕ್ಫ್ ಆಸ್ತಿಗಳ ನೋಂದಣಿ ಕಡ್ಡಾಯ
* ಆರು ತಿಂಗಳೊಳಗೆ ಆಸ್ತಿ ವಿವರ ಸಲ್ಲಿಸಬೇಕು
* ಪ್ರತಿ 5 ವರ್ಷಕ್ಕೊಮ್ಮೆ ವಕ್ಫ್ ಆಸ್ತಿಗಳ ಸರ್ವೆ
* ಆಸ್ತಿಗಳ ನೋಂದಣಿ, ನಿರ್ವಹಣೆಯಲ್ಲಿ ಪಾರದರ್ಶಕತೆ
* ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ
* ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿ ತನಿಖೆಯ ಅಧಿಕಾರ
* ಡಿಸಿ ಮೇಲ್ವಿಚಾರಣೆಯಲ್ಲಿ ಕಾನೂನಿಗೆ ಅನುಗುಣವಾಗಿ ಸರ್ವೆ
* ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಸಮಾನಹಕ್ಕು ಖಾತ್ರಿ
* ಕೇಂದ್ರ, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರಿಗೆ ಸ್ಥಾನಮಾನ
* ವಕ್ಫ್ ಬೋರ್ಡ್ಗಳಲ್ಲಿ ಮುಸ್ಲಿಮೇತರರಿಗೂ ಸದಸ್ಯ ಸ್ಥಾನ
* ಶಿಯಾ, ಸುನ್ನಿ, ಬೋಹ್ರಾ, ಅಘಖಾನಿ, ಹಿಂದುಳಿದ ವರ್ಗಗಳಿಗೆ ಆದ್ಯತೆ
* ಶಿಕ್ಷಣ, ಆರೋಗ್ಯ, ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಆದಾಯ ಬಳಕೆ
* ಕನಿಷ್ಠ 5 ವರ್ಷ ಇಸ್ಲಾಂ ಧರ್ಮ ಪಾಲಿಸಿದ ವ್ಯಕ್ತಿಗೆ ಆಸ್ತಿ ದಾನದ ಅಧಿಕಾರ

TAGGED:Amit ShahbjpmuslimsNon MuslimsWaqf Amendment Billಅಮಿತ್ ಶಾಬಿಜೆಪಿಮುಸ್ಲಿಮರುವಕ್ಫ್‌ ತಿದ್ದುಪಡಿ ಮಸೂದೆ
Share This Article
Facebook Whatsapp Whatsapp Telegram

Cinema News

Rajath Kishan
ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು
Bengaluru City Cinema Latest Top Stories
love u muddu
ಮಹಾರಾಷ್ಟ್ರದಲ್ಲಿ ನಡೆದ ಕಥೆಗೆ ಸಿದ್ದು ನಾಯಕ
Cinema Latest Sandalwood Top Stories
Thalapathy Vijay Jana Nayagan
ಮಲೇಷಿಯಾದಲ್ಲಿ ರಿಲೀಸ್ ಆಗಲಿದೆ ‘ಜನನಾಯಗನ್’ ಆಡಿಯೋ
Cinema Latest Top Stories
madenuru manu actor
ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ
Cinema Latest Main Post
Jothe Neeniralu Serial
ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ
Cinema Latest Top Stories TV Shows

You Might Also Like

car driver commits suicide by writing k sudhakars name
Chikkaballapur

ಗುತ್ತಿಗೆ ಕಾರು ಚಾಲಕ ಆತ್ಮಹತ್ಯೆ ಕೇಸ್‌ – ಸಂಸದ ಡಾ. ಕೆ.ಸುಧಾಕರ್ ವಿರುದ್ಧ FIR ದಾಖಲು

Public TV
By Public TV
10 minutes ago
Vidhana Soudha
Bengaluru City

ಗ್ರೇಟರ್‌ ಬೆಂಗಳೂರು, ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿ ಹಲವು ಮಸೂದೆಗಳಿಗೆ ಸಂಪುಟ ಒಪ್ಪಿಗೆ

Public TV
By Public TV
26 minutes ago
Prahlad Joshi 1
Latest

ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಉತ್ತರಿಸಿ – ರಾಹುಲ್ ಗಾಂಧಿಗೆ ಜೋಶಿ ಸವಾಲು

Public TV
By Public TV
39 minutes ago
Rahul Gandhi
Bengaluru City

ಮತಗಳ್ಳತನ ಆರೋಪ; ನಿಮ್ಮ ಆರೋಪಕ್ಕೆ ದಾಖಲೆ ಸಲ್ಲಿಸಿ – ರಾಹುಲ್ ಗಾಂಧಿ ಆರೋಪ ಅಲ್ಲಗಳೆದ ಚುನಾವಣಾ ಆಯೋಗ

Public TV
By Public TV
60 minutes ago
youtubers beaten up Chaos erupted in Dharmasthala devotees outraged 1
Dakshina Kannada

ಧರ್ಮಸ್ಥಳದಲ್ಲಿ ಗುಂಪು ಘರ್ಷಣೆ – ಓರ್ವ ಆರೋಪಿ ಬಂಧನ

Public TV
By Public TV
1 hour ago
hassan man death
Hassan

ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ಸಾವು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?