ಬಿಎಸ್‍ವೈ ಹಿಂದೆ ಯಾಕೆ ಇರ್ತಿರಾ ಅನ್ನೋ ಪ್ರಶ್ನೆಗೆ ಶೋಭಾ ಉತ್ತರಿಸಿದ್ದು ಹೀಗೆ

Public TV
1 Min Read
SHOBHA BSY

ಬೆಂಗಳೂರು: ರಾಜಕೀಯದಲ್ಲಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅನ್ನೋದಿಕ್ಕೆ ಬಿಎಸ್ ಯಡಿಯೂರಪ್ಪ ತಾಜಾ ಉದಾಹರಣೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶನಿವಾರ ನಗರದ ಪುರಭವನದಲ್ಲಿ ಬಸವ ಕ್ರಾಂತಿ ವೇದಿಕೆ ವತಿಯಿಂದ ನಡೆದ ಬಸವಣ್ಣನವರ ಹಾದಿಯಲ್ಲಿ ಜನನಾಯಕರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೀಗಾಗಿ ನಾವು ಅವರ ಹಿಂದೆ ಇದ್ದೀವಿ ಅಂತಾ ಹೇಳಿದ್ರು.

INDRAJITH

ಇಂದ್ರಜಿತ್ ರಾಜಕೀಯಕ್ಕೆ ಎಂಟ್ರಿ?: ಪಿ.ಲಂಕೇಶ್ ಪುತ್ರ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ರಾಜಕೀಯ ಪ್ರವೇಶ ಮಾಡ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಶನಿವಾರ ಅವರಾಡಿದ ಮಾತುಗಳು ರಾಜಕೀಯ ಪ್ರವೇಶದ ಆಸೆಯನ್ನು ಬಹಿರಂಗೊಳಿಸಿದೆ.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಹಾಡಿಹೊಗಳಿದರು. ಇದೇ ಹೊತ್ತಲ್ಲಿ ನಿಮ್ಮ ಹಿಂಬಾಲಕನಾಗಿ ಇರುತ್ತೇನೆ, ನಿಮ್ಮ ಆರ್ಶೀವಾದ ಬೇಕು ಎಂದು ವೇದಿಕೆಯಲ್ಲಿ ಬಿಎಸ್‍ವೈ ಜೊತೆ ಮನವಿ ಮಾಡಿದರು.

vlcsnap 2017 07 09 12h46m46s223

vlcsnap 2017 07 09 12h46m38s158

vlcsnap 2017 07 09 12h46m31s78

Share This Article
Leave a Comment

Leave a Reply

Your email address will not be published. Required fields are marked *