ಸೈನಿಕರನ್ನು ಬೆಂಬಲಿಸಿ ಬೀದಿಗೆ ಇಳಿದು ನಾವು ಯಾಕೆ ಚೀನಾಗೆ ಎಚ್ಚರಿಕೆ ನೀಡಬಾರದು: ಉಪ್ಪಿ ಪ್ರಶ್ನೆ

Public TV
1 Min Read
indian army upendra

 

ಬೆಂಗಳೂರು: ನಾವು ಸಣ್ಣ ಸಣ್ಣ ವಿಚಾರಗಳಿಗೆ ಬಂದ್ ಮಾಡುತ್ತೇವೆ. ಸೈನಿಕರನ್ನು ಬೆಂಬಲಿಸಿ ಬೀದಿಗೆ ಇಳಿದು ನಾವು ಯಾಕೆ ಚೀನಾಗೆ ಎಚ್ಚರಿಕೆ ನೀಡಬಾರದು ಎಂದು ರಿಯಲ್ ಸ್ಟಾರ್ ಉಪೇಂದ್ರ ಪ್ರಶ್ನಿಸಿದ್ದಾರೆ.

ಟ್ಟಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಉಪೇಂದ್ರ, ನಾವು ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಳ್ಳುತ್ತಿದ್ದೇವೆ. ಅತ್ತ ಸಿಕ್ಕಿಂನಲ್ಲಿ ನಮ್ಮ ಸೈನಿಕರು ಯುದ್ಧದ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ನಾವ್ಯಾಕೆ ಒಂದಾಗಿ ಸೈನಿಕರನ್ನು ಬೆಂಬಲಿಸಿ ಬೀದಿಗಿಳಿದು ಚೀನಾಕ್ಕೆ ಯಾಕೆ ಎಚ್ಚರಿಕೆ ನೀಡುತ್ತಿಲ್ಲ ಎಂದು ಕೇಳಿದ್ದಾರೆ.

ನಾವು ಆಳಬೇಕಾದವರು, ಆಳಿಸಿಕೊಳ್ಳುವವರು ನಾವಲ್ಲ. ನಾವು ಇಸ್ರೇಲಿನಿಂದ ಪಾಠ ಕಲಿಯಬೇಕಿದೆ ಎಂದು ಅವರು ಮತ್ತೊಂದು ಟ್ವೀಟ್ ಮಾಡಿ ಚೀನಾ ಆಕ್ರೋಶವನ್ನು ಹೊರ ಹಾಕಿದ್ದಾರೆ.

 

 

 

 

 

Share This Article
Leave a Comment

Leave a Reply

Your email address will not be published. Required fields are marked *