ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿದ್ದರೂ ಕಪ್ಪು ಕನ್ನಡಕ ಧರಿಸಿ ಪಾಲ್ಗೊಳ್ಳುತ್ತಿದ್ದರು. ಎಲ್ಲಿ ಹೋದರೂ ಕಪ್ಪು ಕನ್ನಡ ಧರಿಸುತ್ತಿದ್ದ ಕಾರಣ ಕರುಣಾನಿಧಿ ಸ್ಟೈಲಿಶ್ ರಾಜಕಾರಣಿ ಎಂದೇ ಪ್ರಸಿದ್ಧರಾಗಿದ್ದರು. ಕರುಣಾನಿಧಿ ಕಪ್ಪು ಕನ್ನಡಕ ಹಾಕದೇ ಇರುವ ಫೋಟೋಗಳು ಕಾಣಸಿಗುವುದು ವಿರಳ. ಆದರೆ ಈ ಕಪ್ಪು ಕನ್ನಡಕದ ಹಿಂದೆ ನೋವಿನ ಕಥೆಯಿದೆ.
ಕರುಣಾಧಿಯವರು ಗಾಯವಾಗಿದ್ದ ತಮ್ಮ ಎಡಗಣ್ಣನ್ನು ಮುಚ್ಚಲು ಹೀಗೆ ಕಡು ಕಪ್ಪು ಬಣ್ಣದ ಕನ್ನಡ ಬಳಕೆಯನ್ನು ಅವರು ರೂಢಿಸಿಕೊಂಡಿದ್ದರು. ಅಪಘಾತವೊಂದರಲ್ಲಿ ಕರುಣಾನಿಧಿ ಎಡಗಣ್ಣಿಗೆ ಭಾರೀ ಪೆಟ್ಟು ಬಿದ್ದಿತ್ತು. ಚಿಕಿತ್ಸೆ ಬಳಿಕವೂ ಗಾಯ ಹಾಗೇ ಉಳಿದುಕೊಂಡಿತ್ತು. ಹೀಗಾಗಿ ಕಣ್ಣಿನ ಗಾಯವನ್ನು ಮರೆಮಾಚಲು ಕಪ್ಪು ಕನ್ನಡಕವನ್ನು ಹಾಕಲು ಆರಂಭಿಸಿದರು. ಇದನ್ನು ಓದಿ: 10ನೇ ತರಗತಿ ಫೇಲ್ ಆಗಿದ್ದ ಕರುಣಾನಿಧಿ ರಾಜಕೀಯ ನಾಯಕನಾಗಿ ಬೆಳೆದ ಕಥೆ ಓದಿ
- Advertisement 2
- Advertisement 3
ಸಂಪೂರ್ಣ ಕಪ್ಪು ಕನ್ನಡಕ ಹಾಕುತ್ತಿದ್ದ ಅವರು, 2017ರಲ್ಲಿ ವೈದ್ಯರ ಸಲಹೆ ಮೆರೆಗೆ ಕಪ್ಪು ಫ್ರೇಮ್, ಹಳದಿ ಬಣ್ಣದ ಗ್ಲಾಸ್ ಇರುವ ಕನ್ನಡ ಹಾಕಲು ಪ್ರಾರಂಭಿಸಿದ್ದರು. ಒಟ್ಟಿನಲ್ಲಿ 4 ದಶಕಗಳ ಹಿಂದೆಯೇ ಕರುಣಾನಿಧಿ ಕಪ್ಪು ಕನ್ನಡಕ ಹಾಕಲು ಆರಂಭಿಸಿದರು.