Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? – ದಿವ್ಯಾಂಶಿ ತಾಯಿ ಪ್ರಶ್ನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? – ದಿವ್ಯಾಂಶಿ ತಾಯಿ ಪ್ರಶ್ನೆ

Bengaluru City

ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? – ದಿವ್ಯಾಂಶಿ ತಾಯಿ ಪ್ರಶ್ನೆ

Public TV
Last updated: June 5, 2025 12:19 pm
Public TV
Share
3 Min Read
Divyanshi Mother
SHARE

ಬೆಂಗಳೂರು: ಸ್ಟೇಡಿಯಂಗೆ ಎಂಟ್ರಿ ಫ್ರೀ ಅಂದ ಮೇಲೆ ಯಾಕೆ ನೀವು 4 ಗೇಟ್ ಕೂಡಾ ಓಪನ್ ಮಾಡಿಲ್ಲ. ಯಾಕೆ ಎಲ್ಲರು 1 ಗೇಟ್ ಅಲ್ಲೇ ಸಾಯ್ಬೇಕಿತ್ತು ಎಂದು ದಿವ್ಯಾಂಶಿ ತಾಯಿ ಅಶ್ವಿನಿ (Divyanshi Mother Ashwini) ಪ್ರಶ್ನಿಸಿದ್ದಾರೆ.

ಬುಧವಾರ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿತ (Stampede) ಉಂಟಾದ ಬಗ್ಗೆ ಮಾತನಾಡಿದ ಅವರು, ನನ್ನ ಮಗಳಿಗೆ ವಿರಾಟ್ ಕೊಹ್ಲಿ (Virat Kohli) ಮೇಲೆ ಅಪಾರ ಅಭಿಮಾನವಿತ್ತು. ಹಾಗಾಗಿ ವಿರಾಟ್ ಕೊಹ್ಲಿಯನ್ನು ನೋಡಬೇಕು ಅಂತಾ ಹಠ ಮಾಡಿದ್ದಳು. ಅವಳಿಗೆ ಗೋಲ್ಡನ್ ಮೆಮೋರಿ ಕೋಡೋಣ ಅಂತಾ ಹೋದೆವು. ಅವಳ ಸಾವಿಗೆ ನಾನೇ ಹೊಣೆ ಬೇರೆ ಯಾರು ಅಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಇಂತಹ ಘಟನೆ ಆಗಿರಲಿಲ್ಲ: ಪರಮೇಶ್ವರ್

ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವ ವಿಖ್ಯಾತ ಕ್ರೀಡಾಂಗಣ. ದೇಶ ವಿದೇಶದಿಂದ ಆಟಗಾರರು ಬಂದು ಆಡಿದ್ದಾರೆ. ಅದು ಗಲ್ಲಿ ಕ್ರಿಕೆಟ್ ಅಲ್ಲ. ಅಲ್ಲಿನ ಜನದಟ್ಟಣೆ ಬಗ್ಗೆ ಮೊದಲೇ ಗೊತ್ತಿತ್ತು. ಆಗಲೇ ಯೋಚನೆ ಮಾಡ್ಬೇಕಿತ್ತು 1 ಗೇಟ್‌ನಲ್ಲಿ ಎಲ್ಲರೂ ಸ್ಟೇಡಿಯಂ ಒಳಗಡೆ ಹೋಗೋಕೆ ಆಗಲ್ಲ. ಅಲ್ಲಿದ್ದವರ ಕಣ್ಣ ಮುಂದೆಯೇ ಜನರು ಕೆಳಗೆ ಬಿದ್ದು ಸಾಯ್ತಿದ್ದಾರೆ ಎಂದು ಗೊತ್ತಾದರೂ ಗೇಟ್ ಓಪನ್ ಮಾಡಿಲ್ಲ. ಇದರ ಬಗ್ಗೆ ಏನು ಹೇಳಬೇಕು ಅಂತಾ ಗೊತ್ತಾಗ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಟೀಂ ಇಂಡಿಯಾದ್ದು 5 ದಿನ, ಸಿಎಸ್‌ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ಜೆಡಿಎಸ್‌ ಆಕ್ರೋಶ

ಸ್ಟೇಡಿಯಂನಲ್ಲಿ 21 ಗೇಟ್ ಇದೆ. ಅದು ಓಬವ್ವನ ಕಿಂಡಿ ಅಲ್ಲ. ಅಲ್ಲಿ ಒಂದು ಗೇಟ್‌ನಲ್ಲಿ ಕೇವಲ ಅರ್ಧ ಭಾಗದ ಗೇಟ್ ಮಾತ್ರ ತೆರೆದಿದ್ದರು. ಪೂರ್ತಿಯಾಗಿ ಎರಡೂ ಗೇಟ್ ತೆರೆದಿದ್ದರೆ ಜನರು ಆರಾಮಾಗಿ ಒಳಗೆ ಹೋಗಬಹುದಿತ್ತು. ಆದರೆ ಅಲ್ಲಿ ಅವರ ಉದ್ದೇಶ ಏನಿತ್ತು ಅಂತಾ ನನಗೆ ಗೊತ್ತಾಗಿಲ್ಲ. ಚಿನ್ನಸ್ವಾಮಿಗೆ ಇದೇ ಮೊದಲ ಬಾರಿ ಅಲ್ಲ ಜನ ಬರುತ್ತಿರುವುದು. ಆರ್‌ಸಿಬಿ ಬಗ್ಗೆ ಎಷ್ಟು ಕ್ರೇಜ್ ಇದೆ ಅಂತಾ ಎಲ್ಲರಿಗೂ ಗೊತ್ತಿದೆ. ರೋಡ್ ಶೋ ಮಾಡಿದ್ದರೆ ಈ ರೀತಿಯ ದುರ್ಘಟನೆ ನಡೆಯುತ್ತಿರಲಿಲ್ಲ. ಜನ ರಸ್ತೆ ಬದಿ ನಿಂತು ನೋಡಿಕೊಂಡು ಹೋಗುತ್ತಿದ್ದರು. ಆಗ ಜನರು ಸ್ಟೇಡಿಯಂಗೆ ಹೋಗಿ ನೋಡಬೇಕು ಅಂದ್ಕೊಳ್ಳುತ್ತಿರಲಿಲ್ಲ. ವಿಜಯಯಾತ್ರೆ ರದ್ದು ಮಾಡಿದ ಮೇಲೆ ಸರ್ಕಾರ ಒಂದು ದಿನ ಸಮಯ ತಗೊಂಡು ಸರಿಯಾದ ವ್ಯವಸ್ಥೆ ಮಾಡಿ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

ದಿವ್ಯಾಂಶಿ ಮಗಳಗಿಂತ ಹೆಚ್ಚಾಗಿ ಬೆಸ್ಟ್ ಫ್ರೆಂಡ್ ಆಗಿದ್ದಳು. ಅವಳಿಗೆ ಯಾವುದೇ ರೀತಿಯ ಶೋಕಿ ಇರಲಿಲ್ಲ. ಯಾವಗಲೂ ಅಮ್ಮ ನಿನ್ನಿಷ್ಟ ಅಂತಿದ್ಳು. ದಿವ್ಯಾಂಶಿ ನನಗೆ ಎರಡನೇ ತಾಯಿಯಾಗಿದ್ದಳು. ಅವಳು ಸ್ವಿಮ್ಮಿಂಗ್‌ನಲ್ಲಿ ಗೋಲ್ಡ್ ಮೆಡಲ್ ಸಹ ಪಡೆದಿದ್ದಳು. ಮಗಳು ರಾತ್ರಿ ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿದ್ದಳು. ಬೆಳಗ್ಗೆ ಸ್ಕೂಲ್ ಹೋಗೋಕೆ ರೆಡಿಯಾಗಿದ್ದಳು. ಆ ವೇಳೆ ಆರ್‌ಸಿಬಿ (RCB) ಟೀಮ್ ಬೆಂಗಳೂರಿಗೆ ಬರುತ್ತಿದೆ ಎಂಬ ಸುದ್ದಿ ಗೊತ್ತಾಯ್ತು. ಆಗ ಅವಳು ವಿರಾಟ್ ಕೊಹ್ಲಿನ ನೋಡ್ಬೇಕು ಅಂತಾ ಹಠ ಮಾಡಿದ್ದಳು. ಅವಳಿಗೆ ಗೋಲ್ಡನ್ ಮೆಮೋರಿ ಕೊಡೋಣ ಅಂತಾ ಕರೆದುಕೊಂಡು ಹೋದೆ. ಆದರೆ ಅಲ್ಲಿ ಸರಿಯಾಗಿ ಪೊಲೀಸ್ ಫೋರ್ಸ್ ಇರಲಿಲ್ಲ. ನಾನು ಇನ್ನೊಬ್ಬರನ್ನು ಕಾಪಾಡಳು ಹೋಗಿ ನನ್ನ ಮಗಳು ಮಿಸ್ ಆದಳು ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಪೊಲೀಸರು ಅನುಮತಿ ನೀಡದೇ ಇದ್ರೂ ಪಟ್ಟು ಹಿಡಿದು ವಿಜಯೋತ್ಸವ ಆಯೋಜನೆ!

ನನ್ನ ಮಗಳಿಗೆ ವಿರಾಟ್ ಕೊಹ್ಲಿ ಮೇಲೆ ಅಪಾರ ಅಭಿಮಾನವಿತ್ತು. ವಿರಾಟ್ ಕೊಹ್ಲಿಯ ಎಲ್ಲಾ ಕ್ರಿಕೆಟ್ ದಾಖಲೆ ಬಗ್ಗೆಯೂ ಆಕೆಗೆ ಗೊತ್ತಿತ್ತು. ಕಪಿಲ್ ದೇವ್ ದಾಖಲೆಯ ಬಗ್ಗೆಯೂ ಅವಳಿಗೆ ತಿಳಿದಿತ್ತು. ಹಾಗಾಗಿ ಅವಳ ಖುಷಿಗಾಗಿ ಸ್ಟೇಡಿಯಂಗೆ ಕರೆದುಕೊಂಡು ಹೋದೆ. ಅಲ್ಲಿ ನನ್ನ ಮಗಳು ಕಾಣೆಯಾದಳು. ಕೆಳಗೆ ಬಿದ್ದ ನನ್ನ ಮಗಳನ್ನು ಯಾರು ಕಾಪಾಡಲಿಲ್ಲ. ಅಲ್ಲಿದ್ದ ಯಾರಿಗೂ ಆ ಸಮಯದಲ್ಲಿ ಮಾನವೀಯತೆನೇ ಇರಲಿಲ್ಲ. ಅಲ್ಲಿ ಯಾವ ಭದ್ರತಾ ವ್ಯವಸ್ಥೆ ಕೂಡಾ ಇರಲಿಲ್ಲ. ದಿವ್ಯಾಂಶಿ ಕಲಿಕೆಯಲ್ಲೂ ಮುಂದಿದ್ದಳು. ಅಲ್ಲದೇ ಆಕೆ ಪೈಲೆಟ್ ಅಥವಾ ಡಾಕ್ಟರ್ ಆಗ್ಬೇಕು ಅಂತಾ ಹೇಳುತ್ತಿದ್ದಳು ಎಂದು ನೆನೆದರು.

TAGGED:bengaluruchinnaswamy stadiumDivyanshi MotherstampedeYelahankaಕಾಲ್ತುಳಿತಚಿನ್ನಸ್ವಾಮಿ ಸ್ಟೇಡಿಯಂಬೆಂಗಳೂರುಯಲಹಂಕ
Share This Article
Facebook Whatsapp Whatsapp Telegram

Cinema news

Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories
Rajath Kishan
ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR
Bengaluru City Cinema Districts Karnataka Latest Sandalwood Top Stories
colors kannada New serial rani
ರಾಣಿ – ಅಮ್ಮ ಮಗಳ ಭಾವುಕ ಪಯಣ..!
Cinema Latest Sandalwood Top Stories
Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories

You Might Also Like

bombs oil depots in iran
Latest

ಇರಾನ್‌ಗೆ ಬಿಗ್‌ ಶಾಕ್‌ ಕೊಟ್ಟ ಅಮೆರಿಕ-ಇಸ್ರೇಲ್‌; ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ದಾಳಿ

Public TV
By Public TV
21 minutes ago
India vs New Zealand
Cricket

T20 World Cup final: ಭಾರತ vs ನ್ಯೂಜಿಲೆಂಡ್‌ ಫೈನಲ್‌ ಫೈಟ್‌ – ಟಿ20 ವಿಶ್ವಕಪ್‌ ಕಿರೀಟ ಯಾರ ಮುಡಿಗೆ?

Public TV
By Public TV
48 minutes ago
car hits lorry three dead in kaggalipura
Crime

ರಾಮನಗರ | ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ – ಮೂವರು ದುರ್ಮರಣ, ಮತ್ತೋರ್ವನ ಸ್ಥಿತಿ ಗಂಭೀರ

Public TV
By Public TV
54 minutes ago
ballari student attack
Bellary

9ನೇ ತರಗತಿ ವಿದ್ಯಾರ್ಥಿಯಿಂದ ರಾಡ್‌ನಿಂದ ಭೀಕರ ಹಲ್ಲೆ – ಓರ್ವ ಬಾಲಕ ಸಾವು, 7 ಮಂದಿಗೆ ಗಾಯ

Public TV
By Public TV
1 hour ago
KJ GEORGE 1
Chikkamagaluru

ಚಿಕ್ಕಮಗಳೂರು | ಜಿಲ್ಲೆಯಲ್ಲಿರೋ ಐವರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿ ಕೊಡಿ: ಕೆ.ಜೆ ಜಾರ್ಜ್

Public TV
By Public TV
2 hours ago
Palak Poori
Food

ಸಂಡೇ ಸ್ಪೆಷಲ್‌ ಪಾಲಕ್ ಪೂರಿ ಮಾಡಿ..

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?