ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಣೇಶನನ್ನು ಕೂರಿಸಬೇಕಾದರೆ 5 ಸಾವಿರ ರೂ. ಹಣವನ್ನು ಪಾವತಿಸಿ ನಿರಪೇಕ್ಷಣಾ ಪತ್ರವನ್ನು ಪಡೆಯಬೇಕು.
ಹೌದು. ಅಗ್ನಿಶಾಮಕ ಇಲಾಖೆ ಮತ್ತು ತುರ್ತು ಸೇವೆಗಳ ಡಿಜಿಪಿ 5 ಸಾವಿರ ರೂ. ನೀಡಿದರೆ ಮಾತ್ರ ನಿರಪೇಕ್ಷಣಾ ಪತ್ರ(ಎನ್ಒಸಿ) ನೀಡುವಂತೆ ಆದೇಶ ಹೊರಡಿಸಿದ್ದಾರೆ.
- Advertisement 2
ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಸೋಮವಾರದಿಂದ ನಿರಾಪೇಕ್ಷಣಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದಕ್ಕಾಗಿಯೇ ಪೊಲೀಸ್, ಅಗ್ನಿಶಾಮಕ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಏಕಗವಾಕ್ಷಿ ಕೇಂದ್ರಗಳಿಗೆ ನಿಯೋಜಿಸಲಾಗಿದೆ.
- Advertisement 3
- Advertisement 4
ಗಣೇಶ ಮೂರ್ತಿ ಕೂರಿಸಲು 5 ಸಾವಿರ ಹಣ ಅಗ್ನಿ ಶಾಮಕ ಇಲಾಖೆ ಆದೇಶ ಹಿನ್ನಲೆಯಲ್ಲಿ ಸರ್ಕಾರದ ನೀತಿಗೆ ನಗರದಲ್ಲಿ ತೀವ್ರ ವಿರೋಧ ಕೇಳಿ ಬಂದಿದೆ. ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯಿಂದ ವಿರೋಧಿಸಿದ್ದು ಬುಧವಾರ ನಗರದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ಆದೇಶದಲ್ಲಿ ಏನಿದೆ?
2018-19 ನೇ ಸಾಲಿನಲ್ಲಿ ನಡೆಯುವ ಗಣೇಶ ಹಬ್ಬದ ಕಾರ್ಯಕ್ರಮಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ನೀಡಲಾಗುವ ನಿರಪೇಕ್ಷಣಾ ಪತ್ರಗಳಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಹಾಗೂ ಉಪವಲಯ ಕಚೇರಿಗಳಲ್ಲಿ ದಿನಾಂಕ: 11-09-2018 ರಿಂದ ಸಮಯ ಬೆಳಿಗ್ಗೆ 9 ರಿಂದ ರಾತ್ರಿ 11 ಘಂಟೆಯವರೆಗೆ ಲಭ್ಯವಿದ್ದು ಕಾರ್ಯನಿರ್ವಹಿಸಿ ವಿವಿಧ ಸಂಘ ಸಂಸ್ಥೆಗಳಿಂದ ಬರುವ ಅರ್ಜಿಗಳಿಗೆ ಏಕಗವಾಕ್ಷಿ ಸೇವೆಯಡಿ ಸರ್ಕಾರ ಆದೇಶ ಸಂಖ್ಯೆ: ಒಇ 196 ಕಅಸೇ 2017, ದಿನಾಂಕ 27-10-2017 ರಂತೆ ನಿಗದಿ ಪಡಿಸಿರುವ ಶುಲ್ಕವನ್ನು ರೂ. 5,000 ಲೆಕ್ಕ ಶೀರ್ಷಿಕೆ 0070-60-109-0-02 ಗೆ ಮೇಲ್ಕಂಡವರಿಂದ ಕಟ್ಟಿಸಿಕೊಂಡು ಈ ಪತ್ರದೊಂದಿಗೆ ನೀಡಲಾಗಿರುವ ನಿರಾಪೇಕ್ಷಣಾ ಪತ್ರದ ಮಾದರಿಯಲ್ಲೇ ನೀಡಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ಸಮಾಪನಾ ವರದಿಯನ್ನು ಕೇಂದ್ರ ಕಚೇರಿಗೆ ನೀಡಲು ಈ ಮೂಲಕ ಆದೇಶಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=NA8CdNiDJBM