ಬಿಟೌನ್ ನಲ್ಲಿ ಈಗ ಕಾಫಿ ವಿತ್ ಕರಣ್ ಶೋದ್ದೇ ಮಾತು. ದಿನಕ್ಕೊಂದು ಹೊಸ ಹೊಸ ವಿಷಯಗಳನ್ನು ಬಹಿರಂಗ ಪಡಿಸುತ್ತಲೇ ಅಚ್ಚರಿಗೆ ಕಾರಣವಾಗುತ್ತಿದ್ದಾರೆ ಕರಣ್ ಜೋಹಾರ್. ಮೊನ್ನೆಯಷ್ಟೇ ದಕ್ಷಿಣದ ಖ್ಯಾತ ನಟಿ ಸಮಂತಾ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಎಪಿಸೋಡ್ ಅನ್ನು ಶೂಟ್ ಮಾಡಿರುವ ಕರಣ್, ಅಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುವಂತೆ ಮಾಡಿದ್ದಾರೆ.
ಈ ಶೋನಲ್ಲಿ ಪಾಲ್ಗೊಳ್ಳಲು ವೇದಿಕೆಗೆ ಬರುವ ಅಕ್ಷಯ್ ಕುಮಾರ್, ಬರುವಾಗ ಸಮಂತಾ ಅವರನ್ನು ಹೊತ್ತುಕೊಂಡು ಬರುತ್ತಾರೆ. ಅದೊಂದು ರೀತಿಯಲ್ಲಿ ತಮಾಷೆಯಿಂದ ಕೂಡಿದ ದೃಶ್ಯವಾದರೂ, ಸಮಂತಾ ಮತ್ತು ಅಕ್ಷಯ್ ಕುಮಾರ್ ನಡುವಿನ ಬಾಂಧವ್ಯವನ್ನು ಅದು ಬಿಚ್ಚಿಟ್ಟಿದೆ. ಈ ಎಪಿಸೋಡ್ ನಲ್ಲಿ ಸಮಂತಾಗೆ ಸಾಕಷ್ಟು ಪ್ರಶ್ನೆಗಳನ್ನೇ ಮಾಡಿರುವ ಕರಣ್, ನಂತರ ಡಿವೋರ್ಸ್ ಬಗ್ಗೆ ಮಾತನಾಡುತ್ತಾರೆ. ಸಮಂತಾ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು ಯಾವಾಗ? ಯಾರು ಡಿವೋರ್ಸ್ ಕೊಡಲು ಮೊದಲು ಮುಂದಾಗಿದ್ದು ಎಂದು ಪ್ರಶ್ನೆ ಕೇಳುತ್ತಾರೆ ಕರಣ್. ಇದನ್ನೂ ಓದಿ:ಡಾ.ಪುನೀತ್ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ : ಅಪ್ಪು ಕುಟುಂಬಕ್ಕೆ ಆಹ್ವಾನ
ಶೋನಲ್ಲಿ ಸಮಂತಾ ಏನೆಲ್ಲ ಹೇಳಿದ್ದಾರೆ ಎನ್ನುವುದು ಎಪಿಸೋಡ್ ಪ್ರಸಾರವಾದಾಗ ಗೊತ್ತಾಗಲಿಲ್ಲ, ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸಮಂತಾ, ‘ಡಿವೋರ್ಸ್ಗೆ ಅವನೇ ಕಾರಣ’ ಎಂದಷ್ಟೇ ಹೇಳಿದ್ದಾರೆ. ಅವನೇ ಎಂದರೆ ಪತಿಯಾ ಅಥವಾ ಬೇರೆ ಯಾರಾದರೂ ಇದ್ದಾರೆ ಎನ್ನುವುದನ್ನು ಆ ಕಂತಿನಲ್ಲೇ ರಿವಿಲ್ ಆಗಲಿದೆ. ಆದರೆ, ಅವರು ಯಾರ ಬಗ್ಗೆ ಹೇಳಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಪ್ರೊಮೋ ನೋಡಿದರೆ, ಇಡೀ ಎಪಿಸೋಡ್ ಲವಲವಿಕೆಯಿಂದ ಕೂಡಿದ್ದಾಗಿದೆ.