Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಎಸ್‌ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿಗೆ ಕಾರಣ ಯಾರು: ಡಿಕೆಶಿಗೆ ಹೆಚ್‌ಡಿಕೆ ಪ್ರಶ್ನೆ

Public TV
Last updated: August 10, 2024 5:16 pm
Public TV
Share
4 Min Read
h.d.kumaraswamy mysuru chalo
SHARE

– ಲೂಟಿ ಮಾಡುವ ಡಿಕೆ ಶಿವಕುಮಾರ್‌ಗೆ ನಾನು ನಾಗರಹಾವು
– ಮ್ಯಾನಹೋಲ್ ಛೇಂಬರ್‌ನ ಮುಚ್ಚಳ ಕದ್ದು ಗುಜರಿಗೆ ಹಾಕಿ ಜೀವನ ಮಾಡ್ತಿದ್ದ ಡಿಕೆಶಿ
– ಸೈಟ್ ವಾಪಸ್ ಕೊಟ್ಟರೆ ನೀವು ಮಾಡಿದ ಅಕ್ರಮ ಮುಚ್ಚಿ ಹೋಗುತ್ತಾ?

ಮೈಸೂರು: ಎಸ್‌ಎಂ ಕೃಷ್ಣ ಅವರು ನಿಮಗೆ ರಾಜಕೀಯ ಜನ್ಮ ಕೊಟ್ಟರು. ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದಿಡಿ ಎಂದು ಡಿಕೆ ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಹೇಳಿದರು.

ಮೈಸೂರು ಚಲೋ (Mysuru Chalo) ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ವಿರುದ್ಧ ಗುಡುಗಿದರು. ನನ್ನ ಮತ್ತು ಯಡಿಯೂರಪ್ಪ ನಡುವೆ ಬಿರುಕು ಮೂಡಿಸಲು ಯತ್ನ ನಡೆಯುತ್ತಿದೆ. ಶ್ರಮಪಟ್ಟು 105 ಸ್ಥಾನವನ್ನು ಪಡೆದಿದ್ದಾಗ ಅಧಿಕಾರ ಸಿಗದ ಸಂದರ್ಭದಲ್ಲಿ ರಾಜಕೀಯವಾಗಿ ನನ್ನ ವಿರುದ್ಧ ಯಡಿಯೂರಪ್ಪ ಮಾತಾಡಿದ್ದಾರೆ. ಅದು ಸಹಜ. ವಿಧಾನಸಭೆಯಲ್ಲಿ ಅವತ್ತು ಯಡಿಯೂರಪ್ಪ ಅವರು ನನ್ನ ನಾಗರಹಾವು ಅಂದರು. ನಾನು ಡಿಕೆ ಶಿವಕುಮಾರ್ ಪಾಲಿಗೆ ನಾಗರಹಾವೇ. ಲೂಟಿ ಮಾಡುವ ಡಿಕೆ ಶಿವಕುಮಾರ್‌ಗೆ ನಾನು ನಾಗರಹಾವು. ಸಿದ್ದರಾಮಯ್ಯ ಪರ ನಾನು ಬಂಡೆ ಥರ ಇದ್ದೀನಿ ಅಂದರು. 2018 ರಲ್ಲಿ ನಾನು ಆ ಬಂಡೆ ಕಲ್ಲು ನಂಬಿಕೊಂಡೆ ಬಂಡೆಯನ್ನು ಮೈ ಮೇಲೆ ಎಳೆದುಕೊಂಡೆ. ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ 8 ಸ್ಥಾನ ಬಂದಿದೆ. ನಾನು ಅದು 9 ಅನ್ನಲ್ಲ. ಇನ್ನೊಂದು ಸ್ಥಾನ ಹೇಗೆ ಬಂತು ಅಂತಾ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವರೇ ನೀವು ಬರೀ ಹಿಂದುಳಿದ ವರ್ಗಗಳ ಸಿಎಂ ಅಲ್ಲ. ಆರೂವರೆ ಕೋಟಿ ಜನರ ಸಿಎಂ ಎಂಬುದನ್ನು ಅರಿಯಿರಿ. ಸಿದ್ದರಾಮಯ್ಯ ಅವರು ಸಿಎಂ ಆದರೆ ನನಗೆ ಯಾಕೆ ಹೊಟ್ಟೆ ಉರಿ? ನನ್ನ ಪ್ರಶ್ನೆ ನಿಮ್ಮ ಅನ್ಯಾಯದ ವಿರುದ್ಧ. ಸಿದ್ದರಾಮಯ್ಯ ಚಡ್ಡಿಯೆಲ್ಲಾ ಕಪ್ಪಾಗಿದೆ. ಮುಖದಲ್ಲಿ ಕಪ್ಪು ಚುಕ್ಕೆ ಇಲ್ಲ ಅಂದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗನ್ ಪಾಯಿಂಟ್‍ಲ್ಲಿ ನಿವೇಶನ ಬರೆಸಿಕೊಂಡ ಆರೋಪ – ಮಹಿಳೆಯರಿಂದ ದೂರು ಕೊಡಿಸಲಿ: ಹೆಚ್‍ಡಿಕೆಗೆ ಡಿಕೆಶಿ ಸವಾಲ್

DK Shivakumar react on hd kumaraswamy assets allegations

ಸಿಎಂ ಪತ್ನಿಗೆ ಬಂದಿರೋದು ಯಾರೋ ಒಬ್ಬರ ಜಮೀನಲ್ಲ. ಅದು ಸರ್ಕಾರದ ಜಮೀನು. ನೀವು ಸಹಿ ಹಾಕದೆ ಇರಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆದಿದೆ. 14 ಸೈಟ್ ವಾಪಸ್ ಕೊಡಲು ಸಿದ್ಧನಿದ್ದೇನೆ ಅಂತಾರೆ. ಈಗ ಸೈಟ್ ವಾಪಸ್ ಕೊಟ್ಟರೆ ನೀವು ಮಾಡಿದ ಅಕ್ರಮ ಮುಚ್ಚಿ ಹೋಗುತ್ತಾ? ಸಿದ್ದರಾಮಯ್ಯ ಅವರೇ ನೀವು ಕುಮಾರಸ್ವಾಮಿ, ಯಡಿಯೂರಪ್ಪ ಬಗ್ಗೆ ಚರ್ಚೆ ಮಾಡುತ್ತೀರಾ? ಮಿಸ್ಟರ್ ಶಿವಕುಮಾರ್ ತಾಯಿ ಚಾಮುಂಡಿ ನೆಲದಲ್ಲಿ ನಿಂತು ಕೇಳ್ತೀನಿ. ಕೊತ್ವಾಲ್‌ನ ಬಳಿ ಜೀವನ ಮಾಡುತ್ತಿದ್ದ ನಿಮಗೆ ಎಸ್.ಎಂ. ಕೃಷ್ಣ ಅವರು ರಾಜಕೀಯ ಜನ್ಮ ಕೊಟ್ಟರು. ಅವರ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಜನರ ಮುಂದೆ ಇಡಿ. ಬೆಂಗಳೂರಿನ ಜೇಡರಹಳ್ಳಿ ಬಳಿ ರಾತ್ರಿ ಹೊತ್ತು ಮ್ಯಾನ್‌ಹೋಲ್ ಛೇಂಬರ್‌ನ ಮುಚ್ಚಳ ಕದ್ದು ಗುಜರಿಗೆ ಹಾಕಿ ಜೀವನ ಮಾಡುತ್ತಿದ್ದ ಶಿವಕುಮಾರ್ ನನ್ನ ಮತ್ತು ಯಡಿಯೂರಪ್ಪ ಬಗ್ಗೆ ಮಾತಾಡ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

ನಾನು ನನ್ನ ಮಗನ ಭವಿಷ್ಯಕ್ಕಾಗಿ ಅಣ್ಣನ ಮಗನ ಜೈಲಿಗೆ ಕಳಿಸಿದ್ದೇನೆ ಅಂತಾರೆ ಡಿಕೆ ಶಿವಕುಮಾರ್. ರೇವಣ್ಣನ ಮೇಲೆ ಕೇಸ್ ಇಲ್ಲ. ಕೇಸ್ ಸೃಷ್ಟಿ ಮಾಡ್ತೀರಾ ನೀವು? ರೇವಣ್ಣನ ಹೆಂಡತಿಯನ್ನು ಜೈಲಿಗೆ ಕಳುಹಿಸಲು ಸುಪ್ರೀಂ ಕೋರ್ಟ್‌ಗೆ ಹೋಗಿ ಲಾಯರ್‌ಗೆ ಹಣ ವೆಚ್ಚ ಮಾಡಿಲ್ವಾ ಡಿಕೆ ಶಿವಕುಮಾರ್? ನಿಮ್ಮಂಥ ಕುತಂತ್ರಿ, ಮನೆ ಹಾಳರು ಇದ್ದಾರಾ? ಕಾಂಗ್ರೆಸ್‌ನವರು ಯಡಿಯೂರಪ್ಪ ಅವರ ಫೋಟೋ ಇಟ್ಟುಕೊಂಡು ಪೂಜೆ ಮಾಡಬೇಕು. 2013 ರಲ್ಲಿ ನಿಮ್ಮ ಮುಖ ನೋಡಿ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ. ಯಡಿಯೂರಪ್ಪ ಅವರ ಕಾರಣದಿಂದ ಮತ ವಿಭಜನೆ ಆಗಿ ನಿಮಗೆ ಅಧಿಕಾರ ಸಿಕ್ತು. ಯಾವ ಯಡಿಯೂರಪ್ಪ ಅವರ ಫೋಟೋ ಇಟ್ಟುಕೊಳ್ಳಬೇಕಿತ್ತೋ ಅದೇ ಯಡಿಯೂರಪ್ಪ ಅವರ ವಿರುದ್ಧ 2013 ರಲ್ಲಿ ನೀವು ಹಾಕಿಸಿದ ಕೇಸ್ ಎಷ್ಟು? ಯಡಿಯೂರಪ್ಪ ಅವರ ಮೇಲೆ ಈಗ ಯಾವುದೋ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುವ ಹುನ್ನಾರ ಮಾಡಿದ್ದೀರಾ ನಾಚಿಕೆ ಆಗಲ್ವಾ ಎಂದು ಟೀಕಿಸಿದರು. ಇದನ್ನೂ ಓದಿ: ‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶಕ್ಕೆ ಚಾಲನೆ

Siddaramaiah Congress BJP H.D Kumaraswamy Mysuru JDS Muda Sca

ನನ್ನ ಸಿಎಂ ಮಾಡಿದ್ದು ಯಡಿಯೂರಪ್ಪ, ಬಿಜೆಪಿ ಹಿರಿಯ ನಾಯಕರು. ನನ್ನನ್ನು ಕಾಂಗ್ರೆಸ್‌ನವರು ಸಿಎಂ ಮಾಡಲಿಲ್ಲ. ನಾನು ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದುಕೊಂಡಿದ್ದೆ. ಆದರೆ ನಾನು ಅವತ್ತು ಮಾಡದ ತಪ್ಪಿಗೆ 15 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ತಾಯಿ ಚಾಮುಂಡಿ ನೆಲದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ನಾನು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದಾಗ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೂ ಹಿಂಸೆ ಕೊಟ್ಟರು. 10 ವರ್ಷ ಗೂಟ ಹೊಡೆದುಕೊಂಡು ಇರುತ್ತೀನಿ ಅಂತಾ ಶಿವಕುಮಾರ್ ಹೇಳಿದ್ದಾರೆ. ನಾವು ಸರ್ಕಾರ ತೆಗೆಯಲು ಹೊರಟಿಲ್ಲ. ನೀವಾಗಿ ನೀವೇ ಸರ್ಕಾರ ತೆಗೆಯೇಬಕು. ಸಿದ್ದರಾಮಯ್ಯ ಮೇಲೆ ಆ ಬಂಡೆ ಬಿದ್ದರೆ ಸಿದ್ದರಾಮಯ್ಯ ಕಥೆ ಏನಾಗಬಹುದು. ಐವತ್ತು ಡಿನೋಟಿಫಿಕೇಷನ್ ಮಾಡಿದ್ದೇನೆ ಅಂತಾರೆ. ತೆಗೆಯಪ್ಪಾ ಶಿವಕುಮಾರ್ ಅದೇನೂ ಇದೆ ಅಂತಾ? ಸುಳ್ಳು ಹೇಳಲು ಒಂದು ಮಿತಿ ಬೇಕು ಶಿವಕುಮಾರ್. ಬಿಜೆಪಿ ವಿರುದ್ಧ ಚುನಾವಣೆ ವೇಳೆ ಅಷ್ಟು ಆರೋಪ ಮಾಡಿದ್ದೀರಿ. ನೀವು ಆಡಳಿತಕ್ಕೆ ಬಂದು 15 ತಿಂಗಳಾಯಿತು. ತನಿಖೆ ಮಾಡಿಸಿದ್ದಿರಾ ಎಂದು ಪ್ರಶ್ನಿಸಿದರು.

ಶಿವಕುಮಾರ್ ಈ ಕುಮಾರಸ್ವಾಮಿ ಮೇಲೆ ಕಣ್ಣಾಕಿದ್ದಾರೆ ಸರ್ವನಾಶ ಆಗ್ತೀಯಾ. ನನ್ನ ಬದುಕು ತೆರೆದ ಪುಸ್ತಕ ಅಂತಾರೆ. ಸಿದ್ದರಾಮಯ್ಯ ಅವರೇ ಅಕಾರ್ವತಿ ಹಗರಣ ತೆಗೆಯಿರಿ. ಕೆಂಪಣ್ಣ ಆಯೋಗ ವರದಿ ಓಪನ್ ಮಾಡಿ. ಸಿದ್ದರಾಮಯ್ಯ ಅವರೇ ಅಧಿಕಾರ ಶಾಶ್ವತ ಅಲ್ಲ. ಮಿಸ್ಟರ್ ಡಿಕೆ ನಿನ್ನೆ ತೊಡೆ ತಟ್ಟಿದ್ದೀರಿ. ಸ್ವೀಕಾರ ಮಾಡಿದ್ದೇನೆ. ಸಿದ್ದರಾಮಯ್ಯ ಅವರೇ ಅರ್ಕಾವತಿ ಬಡಾವಣೆ ಎಲ್ಲಾ ಪುರಾಣ ನನ್ನ ಬಳಿ ಇದೆ ಎಂದು ಟಾಂಗ್ ಕೊಟ್ಟರು.

TAGGED:h d kumaraswamyMysuru Chaloಮೈಸೂರು ಚಲೋಹೆಚ್‌.ಡಿ.ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema News

love u muddu
ಮಹಾರಾಷ್ಟ್ರದಲ್ಲಿ ನಡೆದ ಕಥೆಗೆ ಸಿದ್ದು ನಾಯಕ
Cinema Latest Sandalwood Top Stories
Thalapathy Vijay Jana Nayagan
ಮಲೇಷಿಯಾದಲ್ಲಿ ರಿಲೀಸ್ ಆಗಲಿದೆ ‘ಜನನಾಯಗನ್’ ಆಡಿಯೋ
Cinema Latest Top Stories
madenuru manu actor
ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ
Cinema Latest Main Post
Jothe Neeniralu Serial
ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ
Cinema Latest Top Stories TV Shows
Karavali movie 1
‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ
Cinema Latest Sandalwood Top Stories

You Might Also Like

hassan man death
Hassan

ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ಸಾವು

Public TV
By Public TV
20 minutes ago
PC Mohan
Bengaluru City

ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ: ಪಿ.ಸಿ ಮೋಹನ್

Public TV
By Public TV
42 minutes ago
Dharmasthala Case 3
Crime

ಧರ್ಮಸ್ಥಳದಲ್ಲಿ ಉದ್ವಿಗ್ನತೆ – 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರತ್ಯೇಕ FIR ದಾಖಲು

Public TV
By Public TV
2 hours ago
Gautam Adani Narendra Modi Santosh Lad
Bengaluru City

ಅದಾನಿ ದುಡ್ಡನ್ನ ಮೋದಿ, ಬಿಜೆಪಿಯವರು ಹಂಚಿಕೊಳ್ತಿದ್ದಾರೆ: ಸಂತೋಷ್ ಲಾಡ್

Public TV
By Public TV
2 hours ago
gold price
Latest

ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

Public TV
By Public TV
2 hours ago
Doni River Bridge
Districts

ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?