ಬಳ್ಳಾರಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಓದಿದ್ದು ಬರೀ ಏಳನೇ ತರಗತಿಯಾದರೂ ಇಂದು ಪ್ರಾಧ್ಯಾಪಕರಿಗೆ ಪಾಠ ಮಾಡಿದ್ದಾರೆ.
ಹಂಪಿ ಕನ್ನಡ ವಿವಿಯ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, “ಲಕ್ಷಗಟ್ಟಲೆ ಸಂಬಳ ತಗೆದುಕೊಳ್ಳುತ್ತೀರಾ. ನೋವು ಕಲಿತಿದ್ದನ್ನು ಮಕ್ಕಳಿಗೆ ಕಲಿಸ್ರಪ್ಪಾ. ಶಿಕ್ಷಕ ವೃತ್ತಿ ಸಂಬಳಕ್ಕಾಗಿ ಮಾಡೋದಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗಬೇಕಿದೆ” ಎಂದರು.
ಅಲ್ಲದೇ ಹಿಂದೆ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಶಿಕ್ಷಕರು ಮನೆಗೆ ಹೋಗುತ್ತಿದ್ರು. ಆದರೆ ಇದೀಗ ಶಿಕ್ಷಕರನ್ನು ಹುಡುಕುವ ಕೆಲಸವಾಗ್ತಿದೆ, ವಿವಿಗಳ ಪ್ರಾಧ್ಯಾಪಕರಿಗೆ ಟ್ರೈನಿಂಗ್ ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಂತ ಹೇಳಿದ್ರು.
ಲಕ್ಷಗಟ್ಟಲೆ ಸಂಬಳ ತೆಗೆದುಕೊಂಡು ಏನು ಮಾಡ್ತಾರೆ ಎಂದು ಇದೇ ವೇಳೆ ಪ್ರಶ್ನಿಸಿದ ಅವರು, ಹಿಂದೆ 300 ರೂ. ತೆಗೆದುಕೊಳ್ಳುತ್ತಿದ್ದ ಶಿಕ್ಷಕರು ವಿದ್ಯಾರ್ಥಿ ಮನೆಗೆ ಬರುತ್ತಿದ್ರು. ಆದರೆ ಇಂದು ಕಲಿಯೋರ ಆಸಕ್ತಿಗಿಂತ ಕಲಿಸೋರ ಆಸಕ್ತಿ ಕಡಿಮೆಯಾಗಿದೆ. ಶಿಕ್ಷಣ ಎಲ್ಲೋ ಹೋಗ್ತಿದೆ. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗಬೇಕು ಅಂತೆಲ್ಲ ಹೇಳುತ್ತೀರಿ. ಆದರೆ ಅದನ್ನು ಯಾರು ಬದಲು ಮಾಡಬೇಕು. ಹೊಸ ಕಾಲೇಜು ಕೊಡಿ ಅಂತಾರೆ, ಇರೋ ಎಂಜಿನಿಯರಿಂಗ್ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕೊಡಲು ಆಗ್ತಿಲ್ಲ. ಶಿಕ್ಷಕರು ಪ್ರಾಧ್ಯಾಪಕರು ಸಂಬಳಕ್ಕಾಗಿ ಕೆಲಸ ಮಾಡಬಾರದು. ಶಿಕ್ಷಕ ವೃತ್ತಿ ಪುಣ್ಯದ ಕೆಲಸವಾಗಿದೆ ಅಂದ್ರು.
ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಸರ್ಕಾರಿ ಶಾಲೆಗೆ ಬರೋ ಮಕ್ಕಳ ಸ್ಥಿತಿ ಏನಾಗಬೇಕೆಂದು ಸಚಿವರು ಪ್ರಾಧ್ಯಾಪಕರಿಗೆ ಪರೋಕ್ಷವಾಗಿ ಪಾಠ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv