Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯಾಸಿನ್ ಮಲಿಕ್ ಕರಾಳ ಇತಿಹಾಸ ಏನು? ಏನೇನು ಅಪರಾಧ ಎಸಗಿದ್ದ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಯಾಸಿನ್ ಮಲಿಕ್ ಕರಾಳ ಇತಿಹಾಸ ಏನು? ಏನೇನು ಅಪರಾಧ ಎಸಗಿದ್ದ?

Latest

ಯಾಸಿನ್ ಮಲಿಕ್ ಕರಾಳ ಇತಿಹಾಸ ಏನು? ಏನೇನು ಅಪರಾಧ ಎಸಗಿದ್ದ?

Public TV
Last updated: May 25, 2022 11:16 pm
Public TV
Share
2 Min Read
milik
SHARE

ನವದೆಹಲಿ: ಕಳೆದೊಂದು ವಾರದಿಂದ ಯಾಸಿನ್ ಮಲಿಕ್ ಹೆಸರು ಭಾರೀ ಚರ್ಚೆಯಲ್ಲಿದೆ. ಪ್ರತ್ಯೇಕ ಕಾಶ್ಮೀರ ಹೋರಾಟಗಾರನಾಗಿದ್ದ ಈತನಿಗೆ ಎನ್‍ಐಎ ವಿಶೇಷ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಹತ್ತು ಲಕ್ಷ ರೂ. ದಂಡ ವಿಧಿಸಿದೆ. ಒಂದು ಸಮಯದಲ್ಲಿ ಇಡೀ ಕಾಶ್ಮೀರವನ್ನೇ ನಡುಗಿಸಿದ ಇಂಡಿಯಾದ ಈ ಮೊಸ್ಟ್ ವಾಟೆಂಡ್ ಕ್ರಿಮಿನಲ್ ಅರೆಸ್ಟ್ ಆಗಿದ್ದ. ಈತನ ಇತಿಹಾಸವೇ ಒಂದು ರೋಚಕ ವಿಚಾರ ಅಷ್ಟಕ್ಕೂ ಯಾರು ಈ ಯಾಸಿನ್ ಮಲೀಕ್, ಏನು ಈತನ ಕರಾಳ ಇತಿಹಾಸ? ಜೀವಾವಧಿ ಶಿಕ್ಷೆ ವಿಧಿಸಲು ಕಾರಣಗಳೇನು ಎನ್ನುವ ಪೂರ್ತಿ ವಿವರ ಇಲ್ಲಿದೆ.

ಯಾಸಿನ್ ಮಲಿಕ್ ಮೇಲೆ ಎನ್‍ಐಎ ಪೊಲೀಸರು ಹಲವು ಆರೋಪಗಳನ್ನು ಹೊರಿಸಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು. ಒಂದು ಸಮಯದಲ್ಲಿ ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದ ಈ ನಾಯಕ ಎನ್‍ಐಎ ಮುಂದೆ ತನ್ನೇಲ್ಲ ತಪ್ಪುಗಳನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಇದನ್ನೂ ಓದಿ: ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ತೆರೆ: ಐತಿಹಾಸಿಕ 52 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ರಾಜ್ಯದ ಜೊತೆ ಒಪ್ಪಂದ 

Yasin Malik 2

ಅಪರಾಧಗಳೇನು?
ಯಾಸಿನ್ ಮಲಿಕ್, ಒಬ್ಬ ಸಾಮಾನ್ಯ ಅಪರಾಧಿಯಲ್ಲ. ಈತ ಭಾರತದ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಮೋಸ್ಟ್ ವಾಟೆಂಡ್ ಕ್ರಿಮಿನಲ್. ಮಾಜಿ ಉಗ್ರಗಾಮಿಯಾಗಿದ್ದ ಈಗ, ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕನಾಗಿದ್ದಾನೆ. ಇವನು ಭಾರತ ಮತ್ತು ಪಾಕಿಸ್ತಾನದಿಂದ ಕಾಶ್ಮೀರವನ್ನು ಪ್ರತ್ಯೇಕಿಸಬೇಕೆಂದು ಹೋರಾಟ ನಡೆಸಿದ್ದ. ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್‍ನ ಅಧ್ಯಕ್ಷನಾಗಿದ್ದ ಮಲಿಕ್, ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ಉಗ್ರಗಾಮಿತ್ವವನ್ನು ಮುನ್ನಡೆಸ್ತಿದ್ದ.

Yasin Malik

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈತನನ್ನು ಬಂಧಿಸಿದ್ದ ಎನ್‍ಐಎ ಪೊಲೀಸರು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ(ಯುಎಪಿಎ) ಸೆಕ್ಷನ್ 16(ಭಯೋತ್ಪಾದನೆ), 17(ಭಯೋತ್ಪಾದನೆಗೆ ದೇಣಿಗೆ ಸಂಗ್ರಹ), 18(ಭಯೋತ್ಪಾದಕ ಕೃತ್ಯಕ್ಕೆ ಸಂಚು) ಹಾಗೂ 20(ಭಯೋತ್ಪಾದಕ ಸಂಘಟನೆ ಸದಸ್ಯ) ಸೆಕ್ಷನ್ 120-ಬಿ(ಅಪರಾಧ ಸಂಚು) ಮತ್ತು ಭಾರತೀಯ ದಂಡಸಂಹಿತೆಯ 124-ಎ(ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಿದ್ದರು.

ಇತಿಹಾಸವೇನು?
ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್, ದುಖ್ತರನ್-ಎ-ಮಿಲ್ಲತ್ ಮತ್ತು ಇತರ ಸದಸ್ಯರಿಗೆ ಈತ ಸಹಾಯ ಮಾಡುತ್ತಿದ್ದ. ಭಯೋತ್ಪಾದಕ ಚಟುವಟಿಕೆಗಳಿಗೆ ಅಕ್ರಮ ಮಾರ್ಗಗಳ ಮೂಲಕ ದೇಶ ಮತ್ತು ವಿದೇಶದಿಂದ ಹಣವನ್ನು ಸಂಗ್ರಹಿಸುತ್ತಿದ್ದ. ಕಲ್ಲು ತೂರಾಟ, ಸೇನಾ ಸಿಬ್ಬಂದಿಗಳ ಮೇಲೆ ದಾಳಿ ಮತ್ತು ಸಾರ್ವಜನಿಕ ಆಸ್ತಿ ನಾಶ ಮಾಡುವ ಪ್ರಕಣಗಳ ಹಿಂದಿನ ರೂವಾರಿಯೂ ಆಗಿದ್ದ.

Yasin Malik: 10 facts to know about the JKLF chief

ಹುರಿಯತ್ ನಾಯಕರ ಜೊತೆ ಸೇರಿ ‘ಜಾಯಿಂಟ್ ರೆಸಿಸ್ಟೆನ್ಸ್ ಲೀಡರ್‍ಶಿಪ್’ ಎಂಬ ಗುಂಪನ್ನು ರಚಿಸಿದ್ದ. ಇದರ ಅಡಿಯಲ್ಲಿ ಕಾಶ್ಮೀರದಲ್ಲಿ ಪ್ರತಿಭಟನೆಗಳು, ಮುಷ್ಕರಗಳು, ಸ್ಥಗಿತಗಳು, ರಸ್ತೆ ತಡೆಗಳು ಮತ್ತು ಕಣಿವೆಯಲ್ಲಿ ಶಾಂತಿಗೆ ಭಂಗ ತರುವ ಇತರ ಚಟುವಟಿಕೆಗಳನ್ನು ನಡೆಸಲು ಜನರಿಗೆ ನಿರ್ದೇಶನಗಳನ್ನು ನೀಡುತ್ತಿದ್ದ. 1990ರಲ್ಲಿ ಐಎಎಫ್ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣ ಮತ್ತು 1989 ರಲ್ಲಿ ಆಗಿನ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣಕ್ಕೆ ಸಂಬಂಧಿಸಿದಂತೆ ಸಿಬಿಐನಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಮಲಿಕ್ ಸಹ ಆರೋಪಿಯಾಗಿದ್ದಾನೆ. ಇದನ್ನೂ ಓದಿ:  ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್ 

ಹೀಗೆ ಸಾಲು ಸಾಲು ಕುಕೃತ್ಯಗಳನ್ನು ನಡೆಸಿದ್ದ ಈತನನ್ನು 2017ರಲ್ಲಿ ಬಂಧಿಸಿ ತನಿಖೆ ನಡೆಸಲಾಗಿತ್ತು. ಬಳಿಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಈ ಎಲ್ಲ ಆರೋಪಗಳಿಗೂ ಪ್ರತಿರೋಧ ಒಡ್ಡದೇ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ.

TAGGED:New DelhiYasin Malikನವದೆಹಲಿಯಾಸಿನ್ ಮಲಿಕ್
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

rainfall disrupts daily life in mudigere chikkamagaluru
Chikkamagaluru

ಮೂಡಿಗೆರೆ, ಚಿಕ್ಕಮಗಳೂರಲ್ಲಿ ಭಾರೀ ಗಾಳಿ, ಮಳೆ – ವಾಹನ ಸವಾರರ ಪರದಾಟ

Public TV
By Public TV
13 minutes ago
Phil Salts Controversial Catch To Dismiss Klaasen In RCB vs SRH Match chinnaswamy stadium bengaluru
Bengaluru City

ಬೌಂಡರಿ ಗೆರೆಯ ಬಳಿ ಪಲ್ಟಿಯಾಗಿ ಸಾಲ್ಟ್‌ ಕ್ಯಾಚ್‌ – ಸಿಟ್ಟಿನಿಂದ ಹೊರನಡೆದ ಕ್ಲಾಸೆನ್

Public TV
By Public TV
36 minutes ago
rain with thunder and lightning in many parts of kodagu
Districts

ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆ – ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

Public TV
By Public TV
1 hour ago
Take It Back It Is Not Mine UP Womans Honesty Wins Praise After Bank Error Credits Rs 10 Crore
Latest

ಇದು ನನ್ನದಲ್ಲ, ವಾಪಸ್‌ ತೆಗೆದುಕೊಳ್ಳಿ – ತಪ್ಪಾಗಿ ಜಮೆಯಾದ 10 ಕೋಟಿ ಮರಳಿ ಪಡೆಯುವಂತೆ ಬ್ಯಾಂಕ್‌ಗೆ ಮಹಿಳೆಯ ಮನವಿ

Public TV
By Public TV
2 hours ago
Basavaraj Bommai
Bagalkot

ಉಪ ಚುನಾವಣೆಯಲ್ಲಿ ಸೋಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಧೂಳಿಪಟವಾಗಲಿದೆ: ಬೊಮ್ಮಾಯಿ

Public TV
By Public TV
2 hours ago
Jacob Duffy
Cricket

ಡಫಿ ಮಿಂಚು| ಆರ್‌ಸಿಬಿ ಕ್ಯಾಪ್‌ ಧರಿಸಿದ ಮೊದಲ ಪಂದ್ಯದಲ್ಲೇ ಭರ್ಜರಿ ಬೌಲಿಂಗ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?