Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

Latest

ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

Public TV
Last updated: February 19, 2024 8:16 pm
Public TV
Share
9 Min Read
uniform civil code 1
SHARE

ಬಹುಧರ್ಮೀಯ, ಬಹುಸಂಸ್ಕೃತಿಯ ದೇಶ ಭಾರತ. ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನವನ್ನು ರಾಷ್ಟ್ರದ ಜನತೆ ಒಪ್ಪಿದ್ದಾರೆ. ಜೊತೆಗೆ ತಮ್ಮ ಧರ್ಮದ ಭಾಗವಾಗಿರುವ, ಪರಂಪರೆಯಿಂದ ಅನುಸರಿಸಿಕೊಂಡು ಬಂದಿರುವ ವೈಯಕ್ತಿಕ ಕಾನೂನುಗಳನ್ನೂ ಅನುಸರಿಸುತ್ತಿದ್ದಾರೆ. ಹೀಗಿರುವಾಗ ಧರ್ಮ, ಸಂಸ್ಕೃತಿ ಎನ್ನದೇ ಎಲ್ಲರಿಗೂ ಒಂದೇ ಕಾನೂನು ತಂದರೆ ಹೇಗಿರುತ್ತದೆ? ಬಹುತ್ವವನ್ನೇ ಉಸಿರಾಡುವ ಭಾರತದಂಥ ರಾಷ್ಟçದಲ್ಲಿ ಒಂದೇ ಕಾನೂನು ಸಮರ್ಪಕ ಜಾರಿ ಸಾಧ್ಯವೇ? ಜಾರಿಗೊಳಿಸಿದರೂ ಅದನ್ನು ಜನತೆ ಮನಃಪೂರ್ವಕವಾಗಿ ಒಪ್ಪಿ ನಡೆಯುತ್ತಾರೆಯೇ ಎಂಬ ಪ್ರಶ್ನೆ ಈಗ ಎಲ್ಲರ ಮುಂದಿದೆ.

ಏಕರೂಪ ನಾಗರಿಕ ಸಂಹಿತೆ (Uniform Civil Code – UCC). ಈಗಾಗಲೇ ಎಲ್ಲರೂ ಕೇಳಿರುವ ವಿಷಯವೇ! ಕೆಲ ಸನ್ನಿವೇಶಗಳಿಂದಾಗಿ ಯುಸಿಸಿ ಕುರಿತು ಆಗಾಗ ಪರ-ವಿರೋಧದ ಚರ್ಚೆಗಳು ನಡೆಯುತ್ತವೆ. ಉತ್ತರಾಖಂಡದ ಸದನದಲ್ಲಿ ಅಂಗೀಕಾರವಾಗಿದ್ದು, ಯುಸಿಸಿ ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದೆ. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

uniform civil code 1 1

ಅಷ್ಟಕ್ಕೂ ಏನಿದು ಕಾನೂನು? ಅದರ ಇತಿಹಾಸವೇನು? ಕಾನೂನು ವಿಷಯದ ಆಳ-ಅಗಲವೇನು? ಬಹುತ್ವ ಭಾರತಕ್ಕೆ ಅದರ ಅಗತ್ಯವೇಕೆ? ಈಗ ಆ ಕಾನೂನಿನ ಚರ್ಚೆ ಯಾವ ಹಂತದಲ್ಲಿದೆ ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ. ನಿಜಕ್ಕೂ ಇದೊಂದು ಸಂಕೀರ್ಣ ವಿಷಯ.

ಏನಿದು ಏಕರೂಪ ನಾಗರಿಕ ಸಂಹಿತೆ?
ಮದುವೆ, ವಿಚ್ಛೇದನ, ದತ್ತು, ಉತ್ತರಾಧಿಕಾರ ಮುಂತಾದ ವಿಚಾರಗಳಲ್ಲಿ ಧರ್ಮಾಧಾರಿತ ಕಾನೂನುಗಳನ್ನು ಕೈಬಿಟ್ಟು, ಎಲ್ಲಾ ಜಾತಿ, ಧರ್ಮಗಳಿಗೆ ಒಂದೇ ಕಾನೂನು ಅನ್ವಯವಾಗುವಂತೆ ಮಾಡುವುದು. ಅಂದರೆ ಯಾವುದೇ ಜಾತಿ, ಧರ್ಮ, ಪ್ರಾಂತ್ಯಭೇದ ಮಾಡದೇ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎನ್ನುವುದೇ ಏಕರೂಪ ನಾಗರಿಕ ಸಂಹಿತೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಇದರ ಪ್ರತಿಪಾದನೆ.

ಭಾರತದಲ್ಲಿ ಸಂಹಿತೆ ಇತಿಹಾಸವೇನು?
ವಸಾಹತುಶಾಹಿ ಭಾರತದ ಬ್ರಿಟಿಷ್ ಸರ್ಕಾರವು 1835 ರಲ್ಲಿ ಸಿದ್ಧಪಡಿಸಿದ ವರದಿಯಲ್ಲಿ, ಅಪರಾಧ, ಸಾಕ್ಷ್ಯ ಮತ್ತು ಒಪ್ಪಂದಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಏಕರೂಪದ ಕಾನೂನು ಜಾರಿಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿತು. 1840 ರಲ್ಲಿ ಇದನ್ನು ಜಾರಿಗೊಳಿಸಿತು. ಆದರೆ ಧರ್ಮದ ಆಧಾರದ ಮೇಲೆ ಹಿಂದೂಗಳು ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನನ್ನು ಬ್ರಿಟಿಷರು ಪ್ರತ್ಯೇಕಿಸಿದರು. ಅಲ್ಲಿಂದ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬೇಡಿಕೆಯ ಕೂಗು ಶುರುವಾಯಿತು.

uniform civil code 1 2

ಸಂಹಿತೆ ಬಗ್ಗೆ ಸಂವಿಧಾನ ಸಭೆಯಲ್ಲಿ ಚರ್ಚೆ ಏನಾಗಿತ್ತು?
ಈ ಸಂಹಿತೆಯನ್ನು ರೂಪಿಸುವ ವಿಷಯ ಸಂವಿಧಾನ ಸಭೆಯಲ್ಲಿ ಚರ್ಚೆಗೆ ಬಂದಾಗ, ಹಿಂದೂಗಳು-ಮುಸ್ಲಿಮರು ಒಟ್ಟಿಗೆ ವಿರೋಧಿಸಿದ್ದರು. ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಕೂಡದು ಎಂಬುದು ಕೆಲವರ ನಿಲುವಾಗಿತ್ತು. ಯಾವುದೋ ಒಂದು ಕಾನೂನಿಗಾಗಿ ಪರಂಪರಾಗತವಾಗಿ ಬಂದಿರುವ ವೈಯಕ್ತಿಕ ಕಾನೂನನ್ನು ಬಿಟ್ಟುಕೊಡಲು ಯಾವುದೇ ಸಮುದಾಯ, ವರ್ಗದ ಜನರ ಮೇಲೆ ಒತ್ತಾಯ ಹಾಡಬಾರದು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಸಭೆಯಲ್ಲಿ ಇನ್ನೂ ಕೆಲವರು ಸಂಹಿತೆ ಪರವಾಗಿ ಮಾತನಾಡಿದ್ದರು. ನಾಗರಿಕ ಸಂಹಿತೆ ಜಾರಿ ಪ್ರಕ್ರಿಯೆ 1956 ರಲ್ಲಿಯೇ ಆರಂಭಗೊಂಡಿದ್ದರೂ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಲ್ಲೇನಿದೆ?
ಭಾರತ ಸಂವಿಧಾನದ 25-28 ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಹೇಳುತ್ತವೆ. 25ನೇ ವಿಧಿಯು, ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಆತ್ಮಸಾಕ್ಷಿಗೆ ಸರಿಯೆನಿಸಿದ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ, ಆಚರಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ. ಇದರ ಜೊತೆಗೆ ಒಂದು ಷರತ್ತನ್ನು ಸಂವಿಧಾನ ವಿಧಿಸಿದೆ. ಬಲವಂತದ ಮತಾಂತರವನ್ನು ನಿಷೇಧಿಸಿದೆ. ಹಾಗೆಯೇ 26ನೇ ವಿಧಿಯು, ಧಾರ್ಮಿಕ ಮತ್ತು ದಾನದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡಿದೆ.

ಭಾರತದಲ್ಲಿನ ಏಕರೂಪ ನಾಗರಿಕ ಸಂಹಿತೆಯು ಲಿಂಗ ಅಥವಾ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ತರತಮ ಮಾಡುವುದಿಲ್ಲ ಎಂಬ ಕಾರಣದಿಂದಾಗಿ, ಈ ಕರಡು ಭಾರತದಲ್ಲಿ ಎಲ್‌ಜಿಬಿಟಿಕ್ಯೂ+ ಸಮುದಾಯಕ್ಕೆ ಭರವಸೆ ನೀಡುತ್ತದೆ. ಭಾರತದಲ್ಲಿ ಇದುವರೆಗೆ ಅನ್ವಯಿಸುವ ಯಾವುದೇ ಕಾನೂನು ಸಲಿಂಗ ವಿವಾಹಗಳನ್ನು ಕಾನೂನುಬದ್ಧವೆಂದು ಒಪ್ಪಿಕೊಂಡಿಲ್ಲ.

uniform civil code 1 3

ಯುಸಿಸಿ ಬಗ್ಗೆ ಸಂವಿಧಾನ ಹೇಳೋದೇನು?
ಏಕರೂಪ ನಾಗರಿಕ ಸಂಹಿತೆಯು ರಾಜ್ಯ ನಿರ್ದೇಶಕ ತತ್ವಗಳು ಒಳಗೊಂಡಿರುವ ಸಂವಿಧಾನದ 4 ಭಾಗದಲ್ಲಿದೆ. ರಾಜ್ಯ ನಿರ್ದೇಶಕ ತತ್ವಗಳಲ್ಲಿನ 44ನೇ ವಿಧಿಯು ‘ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸರ್ಕಾರ ಪ್ರಯತ್ನಿಸಬೇಕು’ ಎಂದು ಹೇಳಲಾಗಿದೆ. ಸಂವಿಧಾನದ 44ನೇ ವಿಧಿ ಅಂಗೀಕಾರಗೊಂಡರೂ ಅದು ‘ಮಾರ್ಗಸೂಚಿ ತತ್ವಗಳು’ (ಡೈರೆಕ್ಟಿವ್ ಪ್ರಿನ್ಸಿಪಲ್ಸ್) ಭಾಗದಲ್ಲಿ ಸೇರಿತು.

ಡಾ.ಬಿ.ಆರ್.ಅಂಬೇಡ್ಕರ್ ಏನು ಹೇಳಿದ್ದರು?
ಏಕರೂಪ ನಾಗರಿಕ ಸಂಹಿತೆ ಜಾರಿ ಸಾಧ್ಯವೇ ಎಂಬ ಕೆಲವರ ಪ್ರಶ್ನೆಯೇ ನನಗೆ ಆಶ್ಚರ್ಯ ತಂದಿದೆ. ಅಪರಾಧ, ಆಸ್ತಿ ವರ್ಗಾವಣೆ ಕಾನೂನು, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಸೇರಿದಂತೆ ಅನೇಕ (ಕ್ರಿಮಿನಲ್ ಕಾನೂನು) ಕಾಯ್ದೆಗಳಿವೆ. ಈ ಕಾಯ್ದೆಗಳು ದೇಶಾದ್ಯಂತ ಎಲ್ಲರಿಗೂ ಏಕರೂಪವಾಗಿವೆ. ಮದುವೆ ಮತ್ತು ಉತ್ತರಾಧಿಕಾರದ ಕಾನೂನುಗಳಿಗೆ ಮಾತ್ರ ಏಕರೂಪ ಕಾನೂನು ತರಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಈಗ 35ನೇ ವಿಧಿಯ ಮೂಲಕ ಮದುವೆ ಹಾಗೂ ಉತ್ತರಾಧಿಕಾರದ ಕಾನೂನನ್ನು ಏಕರೂಪಗೊಳಿಸಲು ಮುಂದಾಗಿ ಬದಲಾವಣೆ ತರಲು ಇಚ್ಛಿಸಿರುವುದು. ಈ ಸಂಹಿತೆ ಜಾರಿಗೆ ತರಲು ಸಾಧ್ಯವೇ ಎನ್ನುವವರಿಗೆ ನನ್ನ ಉತ್ತರ, ನಾವು ಈಗಾಗಲೇ ಏಕರೂಪ ಕಾನೂನನ್ನು ಜಾರಿಗೊಳಿಸಿದ್ದೇವೆ ಎಂದು ಸಂವಿಧಾನ ಸಭೆಯಲ್ಲಿ ಅಂಬೇಡ್ಕರರು ಹೇಳಿದ್ದರು. ಜೊತೆಗೆ, ‘ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸರ್ಕಾರ ಪ್ರಯತ್ನಿಸಬೇಕು ಎಂದಷ್ಟೇ ಹೇಳಲಾಗಿದೆ. ಇಂಥದ್ದೊಂದು ಕಾನೂನು ಇದೆ ಎಂದಾಕ್ಷಣ ಸರ್ಕಾರ ಅದನ್ನು ಜಾರಿಗೆ ತರಬೇಕು ಎಂದೇನಿಲ್ಲ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

ಕ್ರಿಮಿನಲ್ & ನಾಗರಿಕ ಕಾನೂನಿಗೆ ಇರುವ ವ್ಯತ್ಯಾಸವೇನು?
ಯಾವುದೇ ದೇಶದಲ್ಲಿ ಕ್ರಿಮಿನಲ್ ಮತ್ತು ನಾಗರಿಕ ಕಾನೂನು ಎಂಬ 2 ಕಾನೂನುಗಳಿರುತ್ತವೆ. ಅತ್ಯಾಚಾರ, ದರೋಡೆ, ಕೊಲೆ, ಕಳ್ಳತನದಂತಹ ಪ್ರಕರಣಗಳು ಕ್ರಿಮಿನಲ್ ಕಾನೂನು ವ್ಯಾಪ್ತಿಗೆ ಒಳಪಡುತ್ತವೆ. ಇದರಲ್ಲಿ ಎಲ್ಲಾ ಧರ್ಮ, ಸಮುದಾಯಗಳಿಗೆ ಒಂದೇ ರೀತಿಯ ನ್ಯಾಯ ವ್ಯವಸ್ಥೆ ಮತ್ತು ಶಿಕ್ಷೆ ಇರುತ್ತದೆ. ಆದರೆ ನಾಗರಿಕ ಕಾನೂನಿನಲ್ಲಿ ಶಿಕ್ಷೆಗಿಂತ ಪರಿಹಾರ ಅಥವಾ ನ್ಯಾಯಕ್ಕೆ ಹೆಚ್ಚು ಒತ್ತು ನೀಡಬೇಕು. ಮದುವೆ, ಆಸ್ತಿಗೆ ಸಂಬಂಧಿತ ವಿಷಯಗಳು ನಾಗರಿಕ ಕಾನೂನು ವ್ಯಾಪ್ತಿಗೆ ಬರುತ್ತವೆ. ಈ ವಿಷಯಗಳಲ್ಲಿ ನಂಬಿಕೆಗಳನ್ನು ಆಧರಿಸಿ ನಿರ್ದಿಷ್ಟ ಧರ್ಮ, ಸಮುದಾಯಕ್ಕೆ ಪ್ರತ್ಯೇಕ ಕಾನೂನುಗಳಿವೆ. ಇವುಗಳನ್ನೇ ವೈಯಕ್ತಿಕ ಕಾನೂನು ಎಂದು ಕರೆಯುವುದು. ವಿವಾಹ ಆಸ್ತಿ ವಿಷಯದಲ್ಲಿ ಹಿಂದೂ, ಮುಸ್ಲಿಮರು, ಕ್ರೈಸ್ತರು, ಸಿಖ್ಖರಿಗೆ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿವೆ. ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಈ ಎಲ್ಲ ವೈಯಕ್ತಿಕ ಕಾನೂನುಗಳು ರದ್ದಾಗುತ್ತವೆ.

uniform civil code 1 5

ಯುಸಿಸಿಗೆ ವಿರೋಧ ಯಾಕೆ?
ಏಕರೂಪ ನಾಗರಿಕ ಸಂಹಿತೆಗೆ ಮುಸ್ಲಿಮರು, ಸಂಪ್ರದಾಯವಾಗಿ ಗುಂಪುಗಳು, ಪಂಗಡಗಳು ವಿರೋಧ ವ್ಯಕ್ತಪಡಿಸಿವೆ. ವೈವಿಧ್ಯತೆಯ ದೇಶವಾಗಿರುವ ಭಾರತದಲ್ಲಿ ವಿವಿಧ ಧರ್ಮೀಯರು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಅನುಸರಿಸುತ್ತಿದ್ದಾರೆ. ವಿವಾಹ ಮತ್ತು ಉತ್ತರಾಧಿಕಾರದ ಕಾನೂನುಗಳ ವಿಚಾರದಲ್ಲಿ ಧರ್ಮಗಳು ಭಿನ್ನತೆಯನ್ನು ಒಳಗೊಂಡಿವೆ. ಉದಾಹರಣೆಗೆ: ಕೆಲವು ಧರ್ಮಗಳಲ್ಲಿ ಉತ್ತರಾಧಿಕಾರದ ಕಾನೂನು ಗಂಡುಮಕ್ಕಳ ಪರವಾಗಿವೆ. ಇಸ್ಲಾಂ ಧರ್ಮದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾನೂನುಬದ್ಧ ವಿವಾಹದ ವಯಸ್ಸು ಇತರ ಧರ್ಮಗಳಿಗಿಂತ ಭಿನ್ನವಾಗಿದೆ. ಕೆಲವು ಧರ್ಮಗಳ ವೈಯಕ್ತಿಕ ಕಾನೂನುಗಳು ಬಹುಪತ್ನಿತ್ವಕ್ಕೆ ಅನುಮತಿ ನೀಡುತ್ತವೆ. ಆದರೆ ಬೇರೆ ಧರ್ಮಗಳಲ್ಲಿ ಅದಕ್ಕೆ ಅವಕಾಶ ಇರಲ್ಲ. ಇಷ್ಟೇ ಅಲ್ಲ, ವಿಚ್ಛೇದನ ಮತ್ತು ಜೀವನಾಂಶದ ಕಾನೂನುಗಳು ಸಹ ಭಿನ್ನವಾಗಿವೆ. ಇದೆಲ್ಲವನ್ನೂ ಬಿಟ್ಟು ಒಂದೇ ಕಾನೂನು ವ್ಯಾಪ್ತಿಗೆ ಬರಲು ಕೆಲ ಸಂಪ್ರದಾಯವಾಗಿ ಗುಂಪುಗಳು (ಪ್ರಮುಖವಾಗಿ ಮುಸ್ಲಿಮರು) ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪ್ರಮುಖ ವಾದಗಳೇನು?
*ಏಕರೂಪ ನಾಗರಿಕ ಸಂಹಿತೆಯು ಧಾರ್ಮಿಕ ಸಮುದಾಯಗಳು ತಮ್ಮದೇ ಆದ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಲು ಅನುವು ಮಾಡಿಕೊಡುವ, ತಮ್ಮ ಆಯ್ಕೆಯ ಧರ್ಮವನ್ನು ಆಚರಿಸುವ ನಾಗರಿಕರ ಹಕ್ಕನ್ನು ಉಲ್ಲಂಘಿಸುತ್ತದೆ. ಉದಾಹರಣೆಗೆ; ಆರ್ಟಿಕಲ್ 25, ಪ್ರತಿ ಧಾರ್ಮಿಕ ಸಂಘಟನೆಯ ಸ್ವಾಯತ್ತತೆಯನ್ನು ಖಾತರಿಪಡಿಸುತ್ತದೆ. ಆರ್ಟಿಕಲ್ 29 ರ ಅಡಿಯಲ್ಲಿ ಅವರು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಅರ್ಹರಾಗಿದ್ದಾರೆ.

*ಭಾರತೀಯ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಉಪಸಮಿತಿಯು ಏಕರೂಪ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕಾಗಿ ಸೇರಿಸುವುದನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದೆ. ಬುಡಕಟ್ಟು ಸಂಘಟನೆಗಳು ಇದೇ ರೀತಿಯ ಆತಂಕವನ್ನು ವ್ಯಕ್ತಪಡಿಸಿವೆ. ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್ತು, ಭವಿಷ್ಯದ ಏಕರೂಪ ನಾಗರಿಕ ಸಂಹಿತೆಯಿಂದ ತನ್ನ ಸಮುದಾಯದವರ ಸಂಪ್ರದಾಯಗಳು ಮತ್ತು ಧಾರ್ಮಿಕ ನಂಬಿಕೆಗಳಿಗೆ ರಕ್ಷಣೆಯನ್ನು ಕೋರಲು 2016 ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮದುವೆ, ಆಸ್ತಿ ಮಾಲೀಕತ್ವ ಇತ್ಯಾದಿ ಖಾಸಗಿ ವಿಷಯಗಳಿಗೆ ಬಂದಾಗ ನಾಗಾಲ್ಯಾಂಡ್‌ನ ಬುಡಕಟ್ಟು ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಸಾಂಪ್ರದಾಯಿಕ ನಿಯಮಗಳು ಫೆಡರಲ್ ಕಾನೂನುಗಳಿಗೆ ಆದ್ಯತೆ ನೀಡುತ್ತವೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ತಿಳಿಸಿ: ಸಾರ್ವಜನಿಕರಿಗೆ ಕೇಂದ್ರ ಕಾನೂನು ಆಯೋಗ ಮನವಿ

*ಕ್ರೋಡೀಕರಿಸಿದ ನಾಗರಿಕ ಕಾನೂನುಗಳು, ಸಿಆರ್‌ಪಿಸಿ ಮತ್ತು ಐಪಿಸಿ ಯಂತಹ ಕ್ರಿಮಿನಲ್ ಕಾನೂನುಗಳು ಈ ತತ್ತ್ವಕ್ಕೆ ಬದ್ಧವಾಗಿಲ್ಲದಿದ್ದರೆ “ಒಂದು ರಾಷ್ಟ್ರ, ಒಂದು ಕಾನೂನು” ಅನ್ನು ವಿವಿಧ ಸಮುದಾಯಗಳ ಅನನ್ಯ ವೈಯಕ್ತಿಕ ಕಾನೂನುಗಳಿಗೆ ಅನ್ವಯಿಸಲಾಗುವುದಿಲ್ಲ ಎಂದು ಏಕರೂಪ ನಾಗರಿಕ ಸಂಹಿತೆಯಲ್ಲಿ ಹೇಳಲಾಗಿದೆ. ಉದಾಹರಣೆಗೆ; ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳು 1872ರ ಫೆಡರಲ್ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅನ್ನು ಬದಲಾಯಿಸಿದವು.

uniform civil code 1 4

*ಏಕರೂಪ ನಾಗರಿಕ ಸಂಹಿತೆಯು ಎಲ್ಲಾ ಸಮುದಾಯಗಳ ಮೇಲೆ ‘ಹಿಂದೂಕರಣ’ ಕೋಡ್ ಅನ್ನು ಹೇರುತ್ತದೆ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ; ಯುಸಿಸಿಯು ಮದುವೆಯಂತಹ ವಿಷಯಗಳಲ್ಲಿ ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿರುವ ಷರತ್ತುಗಳನ್ನು ಹೊಂದಿರಬಹುದು. ಇತರ ಸಮುದಾಯಗಳ ಜನರು ಅದೇ ರೀತಿ ಮಾಡಲು ಕಾನೂನುಬದ್ಧವಾಗಿ ನಿರ್ಬಂಧಿಸುತ್ತದೆ ಎಂದು ವಾದಗಳು ವ್ಯಕ್ತವಾಗಿವೆ.

ವೈಯಕ್ತಿಕ ಕಾನೂನು ರಚಿಸಿದ್ದು ಯಾವಾಗ?
ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ವೈಯಕ್ತಿಕ ಕಾನೂನುಗಳನ್ನು ಬ್ರಿಟಿಷ್ ರಾಜ್ ಆಡಳಿತದ ಸಮಯದಲ್ಲೇ ರಚಿಸಲಾಯಿತು. ಸಮುದಾಯದ ಮುಖಂಡರ ಪ್ರತಿರೋಧದಿಂದಾಗಿ, ಬ್ರಿಟಿಷ್ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬಾರದು ನಿರ್ಧರಿಸಿದರು.

ಗೋವಾದಲ್ಲಿ ಯುಸಿಸಿ ಕಾನೂನು?
1867ರ ಪೋರ್ಚುಗೀಸ್ ಆಡಳಿತದ ಕಾಲದಿಂದಲೂ ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆಯು ಜಾರಿಯಲ್ಲಿದೆ. 1961 ರಲ್ಲಿ ಗೋವಾ ಪೋರ್ಚುಗೀಸರಿಂದ ವಿಮೋಚನೆ ಪಡೆದು ಭಾರತದೊಂದಿಗೆ ವಿಲೀನವಾದ ನಂತರವೂ ಈ ಕಾನೂನು ಮುಂದುವರಿದಿದೆ. ಯುಸಿಸಿ ಜಾರಿಗೆ ಚಿಂತನೆ ನಡೆಸಿರುವ ರಾಜ್ಯಗಳು ಗೋವಾವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯ ಕಾನೂನಿನ ಪರ ಇರುವವರಿಂದ ವ್ಯಕ್ತವಾಗಿದೆ.

ಶಾ ಬಾನೊ ಕೇಸ್
ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಲು 62 ವಯಸ್ಸಿನ ಮುಸ್ಲಿಂ ಮಹಿಳೆ ಶಾ ಬಾನೊ, ತನ್ನ ಪತಿ ಅಹ್ಮದ್ ಖಾನ್ ವಿರುದ್ಧ 1985 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ನೀಡಿದ್ದ ತೀರ್ಪಿಗೆ ಮುಸ್ಲಿಮರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಶಾ ಬಾನೊ ಪ್ರಕರಣ ಸೇರಿದಂತೆ ಕೆಲವು ಕೇಸ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಏಕರೂಪ ಕಾನೂನನ್ನು ಪ್ರತಿಪಾದಿಸಿದೆ.

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಭರವಸೆಯೇ ಯುಸಿಸಿ?
2014ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಭರವಸೆಯನ್ನು ಬಿಜೆಪಿ ನೀಡಿದೆ. ಆದರೆ ಇದನ್ನು ಇನ್ನೂ ಈಡೇರಿಸಲಾಗಿಲ್ಲ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಕಾನೂನು ಆಯೋಗ ಏನು ಹೇಳಿತ್ತು?
ಕಾನೂನು ಆಯೋಗವು 2018 ರಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದ್ದ ‘ಕೌಟುಂಬಿಕ ಕಾನೂನುಗಳ ಸುಧಾರಣೆ’ ಸಮಾಲೋಚನಾ ವರದಿಯಲ್ಲಿ, ಭಾರತಕ್ಕೆ ಈಗ ಏಕರೂಪ ನಾಯರಿಕ ಸಂಹಿತೆ ಅಗತ್ಯವಿಲ್ಲ. ಈ ಹಂತದಲ್ಲಿ ಭಾರತವು ಅದಕ್ಕೆ ಸಿದ್ಧವಾಗಿಯೂ ಇಲ್ಲ. ದೇಶದಲ್ಲಿನ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು. ವೈಯಕ್ತಿಕ ಕಾನೂನುಗಳಲ್ಲಿ ಇರುವ ಕೊರತೆ ನೀಗಿಸಬೇಕು ಎಂದು ಹೇಳಿತ್ತು.

ಭಾರತದಲ್ಲಿ ಯುಸಿಸಿ ಈಗ ಯಾವ ಹಂತದಲ್ಲಿದೆ?
2022 ರಲ್ಲಿ ಸಂಸದ ಕಿರೋಡಿ ಲಾಲ್ ಮೀನಾ ಅವರು ರಾಜ್ಯಸಭೆಯಲ್ಲಿ ಯುಸಿಸಿಗೆ ಸಂಬಂಧಿತ ‘ಖಾಸಗಿ ಸದಸ್ಯರ ಮಸೂದೆ’ ಮಂಡಿಸಿದ್ದರು. ಅದಕ್ಕೆ ಕಾಂಗ್ರೆಸ್, ಟಿಎಂಸಿ, ಸಿಪಿಐ ಸೇರಿ ಹಲವು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಮಸೂದೆ ಪರ 63, ವಿರುದ್ಧ 23 ಮತಗಳು ಬಿದ್ದವು. ದೇಶದಲ್ಲಿ ಈವರೆಗೆ 14 ‘ಖಾಸಗಿ ಸದಸ್ಯರ ಮಸೂದೆ’ಗಳು ಮಾತ್ರ ಕಾನೂನು ರೂಪ ಪಡೆದಿವೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬಹುಮತ ಬೆಂಬಲದೊಂದಿಗೆ ಏಕರೂಪ ನಾಗರಿಕ ಸಂಹಿತೆ ಕಾಯಿದೆ ಜಾರಿಗೆ ತರಲು ಉತ್ಸುಕವಾಗಿದೆ.

ಉತ್ತರಾಖಂಡದಲ್ಲಿ ಯುಸಿಸಿ ಜಾರಿ?
ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರ ಸ್ವಾತಂತ್ರ್ಯಾನಂತರ ಯುಸಿಸಿ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಆ ಮೂಲಕ ಧರ್ಮಾತೀತವಾಗಿ ಎಲ್ಲಾ ನಾಗರಿಕರಿಗೆ ವಿವಾಹ, ವಿಚ್ಛೇದನ, ಭೂಮಿ, ಆಸ್ತಿ, ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕರೂಪದ ಕಾನೂನು ಅನ್ವಯವಾಗುತ್ತದೆ.

TAGGED:bjpcongressLok Sabha electionUCCuniform civil code
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

kalaburagi train
Kalaburagi

ಪಂಢರಪುರ-ತಿರುಪತಿ, ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ, SMVT ಬೆಂಗಳೂರು-ಬೀದರ್ ವಿಶೇಷ ರೈಲುಗಳ ಸೇವೆ ಮುಂದುವರಿಕೆ

Public TV
By Public TV
13 minutes ago
Match Rain RR vs RCB
Cricket

IPL 2026 | RR Vs RCB ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್‌ ವಿಳಂಬ

Public TV
By Public TV
46 minutes ago
Bengaluru Rain 2
Bengaluru City

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭ – ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ

Public TV
By Public TV
54 minutes ago
pune murder
Crime

ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ 6 ವರ್ಷದ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

Public TV
By Public TV
56 minutes ago
ruk samhita yaga udupi
Latest

ಪ್ರಪಂಚದಲ್ಲಿ ಯುದ್ಧೋನ್ಮಾದ ನಿಲ್ಲಲಿ: ವೆಂಕಟರಮಣ ದೇವಸ್ಥಾನದಲ್ಲಿ ಋಕ್ ಸಂಹಿತಾ ಯಾಗ

Public TV
By Public TV
1 hour ago
Parameshwar
Bengaluru City

ಝಾಂಬಿ ಡ್ರಗ್‌ ಅನ್ನೋದೇ ಇಲ್ಲ, ಆತಂಕ ಬೇಡ – ಪರಮೇಶ್ವರ್‌ ಸ್ಪಷ್ಟನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?