Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ತುಳಸಿ ವಿವಾಹದ ಪೌರಾಣಿಕ ಮಹತ್ವವೇನು?

Public TV
Last updated: November 12, 2024 7:30 pm
Public TV
Share
2 Min Read
Tulasi Vivaha
SHARE

ತುಳಸಿ ವಿವಾಹವನ್ನು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ತುಳಸಿಯನ್ನು ಪೂಜನೀಯ ಸಸ್ಯವಾಗಿ ಆರಾಧಿಸಲಾಗುತ್ತದೆ. ಪುರಾಣ ಕಾಲದಲ್ಲಿ ಮಥುರಾ ಪಟ್ಟಣವನ್ನು ದೈತ್ಯ ರಾಜ ಕಲನೇಮಿ ಆಳುತ್ತಿದ್ದನು. ಅವನ ಮಗಳು ವೃಂದಾ (ಬೃಂದಾ) ಮಹಾನ ದೈವಭಕ್ತಿಯಾಗಿದ್ದಳು. ಅವಳು ಅಸುರರ ರಾಜ ಜಲಂಧರನನ್ನು ಮದುವೆಯಾದಳು. ವೃಂದಾ ಧರ್ಮಿಷ್ಟಳಾಗಿದ್ದಳು ಹಾಗೂ ಮಹಾವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಅವಳ ಪಾವಿತ್ರ‍್ಯತೆ ಹಾಗೂ ದೈವಭಕ್ತಿಯ ಸಾತ್ವಿಕ ಶಕ್ತಿಯಿಂದ ಅವಳ ಗಂಡ ಜಲಂಧರ ಬಹಳಷ್ಟು ಶಕ್ತಿಶಾಲಿಯಾಗಿದ್ದನು.

ಜಲಂಧರನು ದೇವಲೋಕವನ್ನು ಗೆಲ್ಲುವ ಉದ್ದೇಶದಿಂದ ದೇವತೆಗಳ ಮೇಲೆ ಯುದ್ಧಸಾರಿದನು. ಅವನ ಮಡದಿ ವೃಂದಾ ಪತಿನಿಷ್ಟೆಯ ಸಂಕಲ್ಪವನ್ನು ಹೊತ್ತು ಪೂಜೆಗೆ ಕುಳಿತಳು. ದೇವತೆಗಳಿಗೂ ಜಲಂಧರನನ್ನು ಎದುರಿಸುವುದು ಅಸಾಧ್ಯವಾಗಿತ್ತು. ವೃಂದಾಳ ಪತಿನಿಷ್ಟೆ ಹೆಚ್ಚಾದಷ್ಟು ಜಲಂಧರನ ಶಕ್ತಿ ಹೆಚ್ಚಾಗುತ್ತಿತ್ತು. ಆತ ಯುದ್ಧದಿಂದ ವಿಜಯಶಾಲಿಯಾಗಿ ಮರಳಿ ಬರುವ ತನಕ ಸಂಕಲ್ಪ ಸಾಧಿಸುವುದಾಗಿ ಆಕೆ ಗಂಡನಿಗೆ ಮಾತು ಕೊಟ್ಟಿದ್ದಳು. ಹೀಗಾಗಿ ಜಲಂಧರ ದೇವತೆಗಳ ಮೇಲೆ ವಿಜಯ ಸಾಧಿಸುತ್ತಾ ಮುನ್ನಡೆದನು. ದೇವತೆಗಳೆಲ್ಲ ಜಲಂಧರನಿAದ ಹೇಗಾದರೂ ಮಾಡಿ ತಮ್ಮನ್ನು ಕಾಪಾಡುವಂತೆ ಮಹಾವಿಷ್ಣುವಿನ ಬಳಿ ಕೇಳಿಕೊಂಡರು. ಆಗ ಮಹಾವಿಷ್ಣು ಬೇರೆ ದಾರಿಯಿಲ್ಲದೆ ತನ್ನ ಭಕ್ತಿಗೆ ಘೋರ ಮೋಸ ಮಾಡಿದನು. ತಾನೇ ಜಲಂಧರನ ಕಪಟ ವೇಷ ಧರಿಸಿ ವೃಂದಾಳ ಮುಂದೆ ಪ್ರತ್ಯಕ್ಷವಾದನು. ಮಾರುವೇಷದಲ್ಲಿ ಬಂದ ವಿಷ್ಣುವನ್ನು ಗುರುತಿಸುವಲ್ಲಿ ಆಕೆ ವಿಫಲಳಾದಳು.

ಆಕೆ ತನ್ನ ಗಂಡ ಯುದ್ಧದಿಂದ ಮರಳಿ ಬಂದನೆಂದು ತಿಳಿದು ಮಾರುವೇಷದಲ್ಲಿದ್ದ ವಿಷ್ಣುವಿನ ಪಾದವನ್ನು ಸ್ಪರ್ಶಿಸಿದಳು. ಅವನನ್ನು ಪ್ರೀತಿಯಿಂದ ನೋಡಿದಳು. ಇದರಿಂದ ಅವಳ ಪತಿನಿಷ್ಠೆಯ ಸಂಕಲ್ಪ ಅಪವಿತ್ರವಾಯಿತು. ಯುದ್ಧದಲ್ಲಿ ಅವಳ ಗಂಡನ ಶಕ್ತಿ ಕಡಿಮೆಯಾಯಿತು. ಇದೇ ಅವಕಾಶವನ್ನು ಬಳಸಿಕೊಂಡು ಶಿವ ಜಲಂಧರನನ್ನು ತ್ರಿಶೂಲದಿಂದ ಚುಚ್ಚಿ ಸಾಯಿಸಿದನು. ಅವನ ತಲೆಯನ್ನು ಕತ್ತರಿಸಿ ಭೂಮಿಯೆಡೆಗೆ ಬೀಸಾಕಿದನು. ಅವನ ತಲೆ ವೃಂದಾಳ ಪಾದದ ಬಳಿ ಬಂದು ಬಿದ್ದಾಗ ಅವಳಿಗೆ ತನ್ನ ಸಂಕಲ್ಪ ಅಪವಿತ್ರವಾಗಿದ್ದು ಅರಿವಾಯಿತು. ತಾನು ಮೋಸ ಹೋಗಿರುವುದು ಗೊತ್ತಾಯಿತು.

ತಾನು ಪೂಜಿಸಿದ ದೇವರೆ ತನಗೆ ಮೋಸ ಮಾಡಿದನೆಂದು ವೃಂದಾ ಕೋಪಗೊಂಡಳು. ಅದೇ ಕೋಪದಲ್ಲಿ ಆಕೆ ಮಹಾವಿಷ್ಣುವಿಗೆ ಕಲ್ಲಾಗುವಂತೆ ಶಾಪ ನೀಡಿದಳು. ಆಗ ವಿಷ್ಣು ಸಾಲಿಗ್ರಾಮವೆಂಬ ಕಲ್ಲಾದನು. ನಂತರ ಆಕೆ ಅವನಿಗೆ ನೀನು ನಿನ್ನ ಪತ್ನಿಯ ವಿರಹ ವೇದನೆಯನ್ನು ಅನುಭವಿಸಿವಂತಾಗಲಿ ಎಂದು ಶಪಿಸಿದಳು. ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ತನ್ನನ್ನು ತಾನು ಅಗ್ನಿಗೆ ಆಹುತಿ ಮಾಡಿಕೊಂಡು ಸಮುದ್ರದಲ್ಲಿ ಮುಳುಗಿದಳು. ಆಗ ಅವಳ ಶಾಪದಿಂದ ಮಹಾವಿಷ್ಣುವನ್ನು ಕಾಪಾಡಲು ದೇವತೆಗಳೆಲ್ಲ ಸೇರಿ ಅವಳ ಆತ್ಮವನ್ನು ಒಂದು ಸಸ್ಯಕ್ಕೆ ವರ್ಗಾಯಿಸಿದರು. ಅದಕ್ಕೆ ತುಳಸಿ ಎಂದು ಹೆಸರಿಟ್ಟರು. ನಂತರ ಪ್ರಬೋಧಿನಿ ಏಕಾದಶಿಯಂದು ಸಾಲಿಗ್ರಾಮದ ರೂಪದಲ್ಲಿರುವ ವಿಷ್ಣುವಿಗೂ ಹಾಗೂ ತುಳಸಿಗೂ ಸಾಂಕೇತಿಕ ವಿವಾಹ ಮಾಡಿದರು. ಇದರಿಂದ ವಿಷ್ಣುವಿಗೆ ಸಿಕ್ಕ ಶಾಪದ ಪ್ರಮಾಣ ಸ್ವಲ್ಪ ಕಡಿಮೆಯಾಯಿತು. ಆದರೂ ಸಹ ವಿಷ್ಣು ರಾಮನ ಅವತಾರದಲ್ಲಿ ತನ್ನ ಪತ್ನಿ ಸೀತೆಯಿಂದ ಹಾಗೂ ಕೃಷ್ಣನ ಅವತಾರದಲ್ಲಿ ತನ್ನ ಪ್ರೇಯಸಿ ರಾಧೆಯಿಂದ ವಿರಹ ವೇದನೆಯನ್ನು ಅನುಭವಿಸಿದನು. ಇದರಿಂದ ಇಂದಿಗೂ ತುಳಸಿ ವಿವಾಹವನ್ನು ಪೂಜೆಯ ರೂಪದಲ್ಲಿ ಆಚರಿಸಿಕೊಂಡು ಬಂದ ಒಂದು ಸಂಪ್ರದಾಯವಾಗಿದೆ.

TAGGED:Tulsi PoojaTulsi VivahTulsi Vivah 2024ತುಳಸಿ ಪೂಜೆತುಳಸಿ ಮದುವೆತುಳಸಿ ವಿವಾಹ
Share This Article
Facebook Whatsapp Whatsapp Telegram

Cinema Updates

samantha
ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮಾಜಿ ಅತ್ತೆ, ಸೊಸೆ – ಸಮಂತಾ ಮಾತಿಗೆ ಅಮಲಾ ಚಪ್ಪಾಳೆ
39 minutes ago
KENISHA 1
ಕೆನಿಶಾಗೆ ಕೊಲೆ ಬೆದರಿಕೆ – ಆರತಿ ಸಮಸ್ಯೆಗೆ ನಾನು ಕಾರಣ ಆಗಿದ್ರೆ ಕೋರ್ಟ್‌ ಮುಂದೆ ನಿಲ್ಲಿಸಿ ಎಂದ ಗಾಯಕಿ
12 hours ago
janhvi kapoor 1
ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್
12 hours ago
Tamanna Bhatia
Video | ತಮನ್ನಾಗೆ 6.20 ಕೋಟಿ – ನಟಿ ತಾರಾ ಬೇಸರ
13 hours ago

You Might Also Like

Pakistan Army spokesman echoes terrorist Hafiz Saeed in fresh threat to India over Indus waters
Latest

ಸಿಂಧೂ ನದಿ ನೀರು ನಿಲ್ಲಿಸಿದ್ರೆ ನಿಮ್ಮ ಉಸಿರು ನಿಲ್ಲಿಸ್ತೀವಿ, ಉಗ್ರ ಹಫೀಜ್‌ನ ಮಾತನ್ನೇ ಪುನರುಚ್ಚರಿಸಿದ ಪಾಕ್‌ ಸೇನಾ ವಕ್ತಾರ

Public TV
By Public TV
57 seconds ago
Carrot Soup 2
Food

ಮನೆಯಲ್ಲೇ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ತಯಾರಿಸಿ

Public TV
By Public TV
40 minutes ago
Namma Metro Purple Line
Bengaluru City

ವೈಟ್‌ಫೀಲ್ಡ್‌ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ – ಮೆಟ್ರೋ ಸಂಚಾರ ಸ್ಥಗಿತ

Public TV
By Public TV
42 minutes ago
daily horoscope dina bhavishya
Astrology

ದಿನ ಭವಿಷ್ಯ 23-05-2025

Public TV
By Public TV
1 hour ago
Lucknow Super Gaints
Cricket

ಆಟಕ್ಕುಂಟು ಲೆಕ್ಕಕ್ಕಿಲದ ಪಂದ್ಯದಲ್ಲಿ ರೋಷಾವೇಶ – ಗುಜರಾತ್‌ ವಿರುದ್ಧ ಲಕ್ನೋಗೆ 33 ರನ್‌ಗಳ ಭರ್ಜರಿ ಗೆಲುವು

Public TV
By Public TV
8 hours ago
Shaurya Chakras
Latest

ಮೇಜರ್ ಆಶಿಶ್ ದಹಿಯಾ ಸೇರಿ 33 ಶೌರ್ಯ ಚಕ್ರ ಪ್ರಶಸ್ತಿ, 6 ಕೀರ್ತಿ ಚಕ್ರ ಪ್ರಶಸ್ತಿ ಪ್ರದಾನ

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?