ಯಾದಗಿರಿ/ಕೊಪ್ಪಳ: ಬಿಸಿಲನಾಡು ಎಂದೆ ಪ್ರಸಿದ್ಧಿ ಪಡೆದಿರುವ ಯಾದಗಿರಿ ಈಗ ಕಾಶ್ಮೀರ ಕಣಿವೆಯಂತಾಗಿದೆ.
ಸುಮಾರು ವರ್ಷಗಳ ನಂತರ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಂಜು ಆವರಿಸಿದ್ದು, ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿದೆ. ಇನ್ನೂ ರಸ್ತೆಗಳಲ್ಲಿ ಅಪಾರ ಪ್ರಮಾಣದ ಮಂಜು ಆವರಿಸಿದ್ದು, ಇದರಿಂದ ವಾಹನ ರಸ್ತೆಗಿಳಿಸಲು ನಗರದ ನಿವಾಸಿಗಳು ಹರಸಾಹಸ ಪಡುವಂತಾಗಿದೆ.
ಬೆಳಗಿನ ಜಾವದಿಂದ ಸತತವಾಗಿ ಮಂಜು ಬೀಳುತ್ತಿರುವ ಹಿನ್ನೆಲೆಯಲ್ಲಿ ಚಳಿಯ ಹೊಡೆತಕ್ಕೆ ಮತ್ತೆ ಯಾದಗಿರಿ ಜನತೆ ಗಢ ಗಢ ನಡುಗುವಂತಾಗಿದೆ. ಸುಮಾರು ಬೆಳಗ್ಗೆ 8 ಗಂಟೆ ಆದರೂ ಮನೆಯಿಂದ ಹೊರ ಬಾರದಂತಾಗಿದೆ. ಮನೆಯಿಂದ ಹೊರ ಬಂದರೆ ಎಲ್ಲಿ ನೋಡಿದರೂ ಮಂಜು ಆವರಿಸಿದ್ದು, ಏನು ಕಾಣದ ಸ್ಥಿತಿಯಲ್ಲಿ ಜನರು ಇದ್ದಾರೆ. ಇತ್ತ ರಸ್ತೆಗಿಳಿದ ವಾಹನಗಳು ದಾರಿ ಕಾಣದೆ ನಿಧಾನವಾಗಿ ಬೆಳಗ್ಗೆಯಾದರೂ ವಾಹನಗಳ ಹೆಡ್ ಲೈಟ್ ಆನ್ ಮಾಡಿಕೊಂಡು ಸವಾರರು ಚಲಾಯಿಸುತ್ತಿದ್ದಾರೆ.
ಇತ್ತ ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ 8 ಗಂಟೆ ಆದರೆ ಸಾಕು ಮುಂಜಾನೆಯ ಸೂರ್ಯ ಉರಿಯುವುದಕ್ಕೆ ಸ್ಟಾರ್ಟ್ ಮಾಡುತ್ತಾನೆ. ಆದರೆ ಇಂದು ಕೊೂಪ್ಪಳ ಜಿಲ್ಲಾದ್ಯಾಂತ ಮುಂಜಾನೆಯಿಂದ ಚುಮು ಚುಮು ಚಳಿ ಜೊತೆ ಮುಂಜು ಮುಸುಕಿಕೊಂಡಿದೆ. ಬೆಳಗ್ಗೆ ಎಂಟು ಗಂಟೆ ಆದರೂ ಮಾಯವಾಗದ ಮಂಜು ಊಟಿಯಂತೆ ಕಾಣುತ್ತಿದೆ.
ಇನ್ನೂ ತೀವ್ರ ಮಂಜಿನಿಂದ ರಸ್ತೆಯು ಸಹ ಕಾಣದಂತೆ ಆಗಿದೆ. ವಾಹನ ಸವಾರರು ತಮ್ಮ ಗಾಡಿಗಳಿಗೆ ಲೈಟ್ ಹಾಕಿಕೊಂಡು ಒಡಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಂಜಿನ ದೃಶ್ಯಗಳು ಮನ ಮೋಹಕವಾಗಿದ್ದು, ನೋಡಿದವರೆಲ್ಲಾ ನಮ್ಮುರೂ ಇವತ್ತು ಊಟಿ ತರಾ ಕಾಣುತ್ತಿದೆ ಎಂದು ಖುಷಿ ಪಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv