ಬೆಂಗಳೂರು: ಬಹುಮತ ಸಾಬೀತು ಪಡಿಸುವುದು ಕಷ್ಟ ಎಂದು ನಮಗೆ ಬೆಳಗ್ಗೆ ಗೊತ್ತಾಗಿತ್ತು. ಅಲ್ಲದೇ, ಬಿ.ಎಸ್.ಯಡಿಯೂಪ್ಪ ಅವರು ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿಗೆ ಜನಾದೇಶವಿತ್ತು. ಆದರೆ, ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡಲು ಕುತಂತ್ರ ನಡೆದಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಕಾದುನೋಡಿ ಎಂದು ಹೇಳಿದ್ದಾರೆ.
https://twitter.com/ShobhaBJP/status/997792897486340096
Let us not forget bottom line: BJP increased MLAs 2 1/2 times to 104 and first past the post. Two big losers banded together and are slated to form the govt. In other words let us get our act together and pool our brains. Soon then we can discredit completely Ali bibi &her chors
— Subramanian Swamy (@Swamy39) May 19, 2018
https://twitter.com/ShobhaBJP/status/997815805961125889
ನಾಯಿ-ನರಿಗಳಂತೆ ಕಚ್ಚಾಡುತ್ತಿದ್ದವರು ಈಗ ಒಂದಾಗಿದ್ದಾರೆ. ಈ ಅಪವಿತ್ರ ಮೈತ್ರಿ ಹೆಚ್ಚು ದಿನ ಉಳಿಯಲ್ಲ. ನಾಳೆಯಿಂದಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಕಚ್ಚಾಡುತ್ತಾರೆ ನೋಡಿ ಎಂದು ವ್ಯಂಗ್ಯವಾಡಿದ್ದಾರೆ.
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸಿಟಿ ರವಿ ನಮ್ಮದು ರಾಜಮಾರ್ಗ, ಶಾರ್ಟ್ ಕರ್ಟ್ ಇಲ್ಲದೇ ಬಹುಮತ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. ಮುಂದುವರಿಸಿ 1996 ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿ ಬಹುಮತಗಳಿಸಲು ವಿಫಲವಾದಾಗ ರಾಜೀನಾಮೆ ನೀಡಿದ್ದರು ಎಂದಿದ್ದರು.
ವಾಜಪೇಯಿ ಹೆಸರನ್ನು ಪ್ರಸ್ತಾಪ ಮಾಡಿದ ಕೂಡಲೇ ಮಾಧ್ಯಮಗಳು ಕರ್ನಾಟಕದಲ್ಲೂ ಇತಿಹಾಸ ಮರುಕಳಿಸುತ್ತಾ ಎಂದು ಕೇಳಿದ್ದಕ್ಕೆ, ಆಗಿನ ಪರಿಸ್ಥಿತಿ ಈಗ ಇಲ್ಲ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದರು.