Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ

Bengaluru City

ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ

Public TV
Last updated: July 21, 2022 4:04 pm
Public TV
Share
3 Min Read
ramesh kumar bjp 1
SHARE

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ. ಇಂದು ಸಹ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದೆ.

ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ. ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗಬೇಕು. ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ನೆಹರೂ, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದಿದ್ದರು.

BJP CONGRESS FLAG

ರಮೇಶ್ ಕುಮಾರ್ ವೀಡಿಯೋವನ್ನು ಅಪ್ಲೋಡ್ ಮಾಡಿದ ಕರ್ನಾಟಕ ಬಿಜೆಪಿ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿ ಕಿಡಿಕಾರಿದೆ.

ಟ್ವೀಟ್‍ನಲ್ಲಿ ಏನಿದೆ?
ಕಾನೂನನ್ನು ಕಾಲಕಸ ಮಾಡಿಕೊಂಡಿರುವ ಕಾಂಗ್ರೆಸ್‍ಗೆ ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್‍ಚಿಟ್ ಸಿಕ್ಕಿದ್ದು ಕಂಡು ಕೆಂಡದ ಮೇಲೆ ಕೂತಂತಾಗಿದೆ. ಈ ಎಡಬಿಡಂಗಿಗಳು ‘ಮೇಟಿ ಪ್ರಕರಣ’ದಲ್ಲಿ ಎಫ್‍ಐಆರ್ ಕೂಡ ಹಾಕದೆ ಬಿ-ರಿಫೋರ್ಟ್ ಕೊಟ್ಟಿದ್ದರು. ಈ ಜಾಣಮರೆವು ನಾಚಿಕೆಗೇಡಲ್ಲದೇ ಬೇರೇನು? ಬಿಜೆಪಿ ಎಂದಿಗೂ ಕಾನೂನಿಗೆ ಬೆಲೆ ಕೊಡುತ್ತದೆ. ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ 

3, 4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಅವರ ಋಣ ಸಂದಾಯ ಮಾಡಬೇಕಿದೆ! ನಕಲಿ ಗಾಂಧಿ ಕುಟುಂಬಕ್ಕಾಗಿ ಮಾಡಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಆಡಿದ ಮಾತುಗಳಿವು.

ಭಾರತ್ ಜೋಡೋ ಎಂಬ ನಾಟಕ ಹೆಣೆದಿರುವ ಕಾಂಗ್ರೆಸ್ಸಿಗರ ನಿಜಬಣ್ಣ ಈಗ ಬಯಲಾಗಿದೆ.

ನಕಲಿ ಗಾಂಧಿ ಕುಟುಂಬದ ಅಕ್ರಮ ಸಂಪಾದನೆ ಅಳೆಯಲು, ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಯೊಂದೇ ಸಾಕು.

ನಾಲ್ಕು ತಲೆಮಾರಿನವರಿಗೂ ಬೇಕಾದಷ್ಟು ಮಾಡಿದ್ದು ಹೇಗೆ ಎಂಬುದರ ಲೆಕ್ಕ ಕೊಡುವಿರಾ?#CorruptCONgress pic.twitter.com/Au702raxwW

— BJP Karnataka (@BJP4Karnataka) July 21, 2022

60 ವರ್ಷಕ್ಕೂ ಹೆಚ್ಚು ಕಾಲ ದೇಶವಾಳಲು ಅವಕಾಶ ನೀಡಿದ ಜನತೆಯ ಋಣ ಇವರಿಗಿಲ್ಲ, ಇಟೆಲಿಯಿಂದ ಬಂದವರಿಗೆ ಎಂತಹಾ ನಿಷ್ಠೆ? ಬಡತನ ನಿರ್ಮೂಲನೆಗೆ ಮೀಸಲಿಟ್ಟ ಪ್ರತಿ ಒಂದು ರೂಪಾಯಿಯಲ್ಲಿ, 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದ ಮಾತಿನ ಮರ್ಮ ಈಗ ಅರಿವಾಗುತ್ತಿದೆ. ಮಿಕ್ಕ 85 ಪೈಸೆಯನ್ನು ಕಾಂಗ್ರೆಸ್ ನಾಯಕರ ನಾಲ್ಕು ತಲೆಮಾರಿಗೆ ಇಟ್ಟಿದ್ದೇ?

ಋಣ ಸಂದಾಯ ಎಂದರೆ ಏನು? ಈ ದೇಶದ ಜನತೆಗೆ ನಕಲಿ ಗಾಂಧಿ ಕುಟುಂಬ ತಮ್ಮ ಮನೆಯಿಂದ ಏನನ್ನೂ ಕೊಟ್ಟಿಲ್ಲ. ಅವರಿಗೆ ಎಲ್ಲವೂ ಸಂದಾಯವಾದದ್ದು ಈ ದೇಶದಿಂದಲೇ, ಆದರೆ ಅಂತಿಮವಾಗಿ ನಕಲಿ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ.

ಋಣ ಸಂದಾಯ ಎಂದರೆ ಏನು?

ಈ ದೇಶದ ಜನತೆಗೆ ನಕಲಿ ಗಾಂಧಿ ಕುಟುಂಬ ತಮ್ಮ ಮನೆಯಿಂದ ಏನನ್ನೂ ಕೊಟ್ಟಿಲ್ಲ.

ಅವರಿಗೆ ಎಲ್ಲವೂ ಸಂದಾಯವಾದದ್ದು ಈ ದೇಶದಿಂದಲೇ, ಆದರೆ ಅಂತಿಮವಾಗಿ ನಕಲಿ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ.#CorruptCONgress

— BJP Karnataka (@BJP4Karnataka) July 21, 2022

ಸಂವಿಧಾನದ ಬಗ್ಗೆ ಭಾರೀ ಜ್ಞಾನ ಹೊಂದಿರುವ ರಮೇಶ್ ಕುಮಾರ್ ಕೂಡಾ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನಕ್ಕೆ ಅತೀತರನ್ನಾಗಿಸಲು ಯತ್ನಿಸುತ್ತಿದ್ದಾರೆ. ದೇಶದ ಆಸ್ತಿ ಕಬಳಿಸಿದ ವ್ಯಕ್ತಿಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ರಕ್ಷಿಸಲು ಹೊರಟಿದ್ದೇಕೆ? ನಿಮ್ಮ ಋಣ ಸಂದಾಯ ಮಾಡಿ, ಆದರೆ ಆ ಭಾರವನ್ನು ದೇಶದ ಮೇಲೆ ಹೊರಿಸಬೇಡಿ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ: ಜಿಟಿಡಿ

ಸಂವಿಧಾನದ ಬಗ್ಗೆ ಭಾರೀ ಜ್ಞಾನ ಹೊಂದಿರುವ ರಮೇಶ್ ಕುಮಾರ್ ಕೂಡಾ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನಕ್ಕೆ ಅತೀತರನ್ನಾಗಿಸಲು ಯತ್ನಿಸುತ್ತಿದ್ದಾರೆ.

ದೇಶದ ಆಸ್ತಿ ಕಬಳಿಸಿದ ವ್ಯಕ್ತಿಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ರಕ್ಷಿಸಲು ಹೊರಟಿದ್ದೇಕೆ?

ನಿಮ್ಮ ಋಣ ಸಂದಾಯ ಮಾಡಿ, ಆದರೆ ಆ ಭಾರವನ್ನು ದೇಶದ ಮೇಲೆ ಹೊರಿಸಬೇಡಿ!#CorruptCONgress

— BJP Karnataka (@BJP4Karnataka) July 21, 2022

ರಾಜ್ಯ ಸರ್ಕಾರದ ಮೇಲೆ 40% ಆರೋಪ ಮಾಡುವ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಾಗ ಬೀದಿಗಿಳಿದಿದೆ. ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡವರು ಈಗ ಭ್ರಷ್ಟಾಚಾರದ ಬಗ್ಗೆ ಪ್ರವಚನ ಮಾಡುತ್ತಿರುವುದು ಹಾಸ್ಯಾಸ್ಪದವಲ್ಲವೇ?

ಬಡತನ ನಿರ್ಮೂಲನೆಗೆ ಮೀಸಲಿಟ್ಟ ಪ್ರತಿ ಒಂದು ರೂಪಾಯಿಯಲ್ಲಿ, 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದ ಮಾತಿನ ಮರ್ಮ ಈಗ ಅರಿವಾಗುತ್ತಿದೆ.

ಮಿಕ್ಕ 85 ಪೈಸೆಯನ್ನು ಕಾಂಗ್ರೆಸ್ ನಾಯಕರ ನಾಲ್ಕು ತಲೆಮಾರಿಗೆ ಇಟ್ಟಿದ್ದೇ?#CorruptCONgress

— BJP Karnataka (@BJP4Karnataka) July 21, 2022

ಭಾರತ್ ಜೋಡೋ ಎಂಬ ನಾಟಕ ಹೆಣೆದಿರುವ ಕಾಂಗ್ರೆಸ್ಸಿಗರ ನಿಜ ಬಣ್ಣ ಈಗ ಬಯಲಾಗಿದೆ. ನಕಲಿ ಗಾಂಧಿ ಕುಟುಂಬದ ಅಕ್ರಮ ಸಂಪಾದನೆ ಅಳೆಯಲು, ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಯೊಂದೇ ಸಾಕು. ನಾಲ್ಕು ತಲೆಮಾರಿನವರಿಗೂ ಬೇಕಾದಷ್ಟು ಮಾಡಿದ್ದು ಹೇಗೆ ಎಂಬುದರ ಲೆಕ್ಕ ಕೊಡುವಿರಾ? ಎಂದು ಕಿಡಿಕಾರಿದೆ.

Live Tv
[brid partner=56869869 player=32851 video=960834 autoplay=true]

TAGGED:bjpcongressRamesh Kumartwitterಕಾಂಗ್ರೆಸ್ಟ್ವಿಟ್ಟರ್ಬಿಜೆಪಿರಮೇಶ್ ಕುಮಾರ್
Share This Article
Facebook Whatsapp Whatsapp Telegram

Cinema news

santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories
arvind reddy threat
ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ; ಆರೋಪಿ ಬಂಧನ
Bengaluru City Cinema Latest Main Post Sandalwood
again Bigg Boss Rajat controversy photo shoot in villain look while smoking a cigarette Mysuru
ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ
Cinema Crime Karnataka Latest Mysuru Top Stories TV Shows

You Might Also Like

Namma Metro Greenline
Bengaluru City

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಮೆಟ್ರೋ ನಿಲ್ದಾಣಗಳ ಹತ್ತಿರದಲ್ಲೇ ಬಸ್ ನಿಲ್ದಾಣ ಓಪನ್

Public TV
By Public TV
2 hours ago
T20 Team India
Cricket

ಸೂರ್ಯ, ಸಿರಾಜ್‌ ಮಿಂಚು; ಯುಎಸ್‌ಎ ವಿರುದ್ಧ ಭಾರತಕ್ಕೆ 29 ರನ್‌ಗಳ ಗೆಲುವು

Public TV
By Public TV
3 hours ago
Elephant
Bengaluru Rural

ಬೈಕ್‌ನಲ್ಲಿ ತೆರಳುವಾಗ ಏಕಾಏಕಿ ಆನೆ ದಾಳಿ – ಅಪ್ಪ ಸಾವು, ಮಗನ ಸ್ಥಿತಿ ಗಂಭೀರ

Public TV
By Public TV
3 hours ago
Man dies after setting himself on fire inside car in Wayanad
Crime

ಕೇರಳದಲ್ಲಿ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಕೊಡಗಿನ ಉದ್ಯಮಿ – ಹೆಂಡತಿ ಮಕ್ಕಳ ಸ್ಥಿತಿ ಗಂಭೀರ

Public TV
By Public TV
4 hours ago
DK Shivakumar 9
Dakshina Kannada

ಜನರಿಗೆ, ಶಾಸಕರಿಗೆ ಎಲ್ಲರಿಗೂ ನಾನು ಸಿಎಂ ಆಗಬೇಕು ಅಂತ ಇದೆ: ಡಿಕೆಶಿ

Public TV
By Public TV
4 hours ago
Leopard Shivamogga Tiger and Lion Safari Tyavarekoppa
Districts

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃಗಾಲಯದ ಚಿರತೆಗೆ ಸ್ಕ್ಯಾನಿಂಗ್!

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?