Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ

Public TV
Last updated: July 21, 2022 4:04 pm
Public TV
Share
3 Min Read
ramesh kumar bjp 1
SHARE

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ. ಇಂದು ಸಹ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದೆ.

ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ. ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗಬೇಕು. ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ನೆಹರೂ, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದಿದ್ದರು.

BJP CONGRESS FLAG

ರಮೇಶ್ ಕುಮಾರ್ ವೀಡಿಯೋವನ್ನು ಅಪ್ಲೋಡ್ ಮಾಡಿದ ಕರ್ನಾಟಕ ಬಿಜೆಪಿ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿ ಕಿಡಿಕಾರಿದೆ.

ಟ್ವೀಟ್‍ನಲ್ಲಿ ಏನಿದೆ?
ಕಾನೂನನ್ನು ಕಾಲಕಸ ಮಾಡಿಕೊಂಡಿರುವ ಕಾಂಗ್ರೆಸ್‍ಗೆ ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್‍ಚಿಟ್ ಸಿಕ್ಕಿದ್ದು ಕಂಡು ಕೆಂಡದ ಮೇಲೆ ಕೂತಂತಾಗಿದೆ. ಈ ಎಡಬಿಡಂಗಿಗಳು ‘ಮೇಟಿ ಪ್ರಕರಣ’ದಲ್ಲಿ ಎಫ್‍ಐಆರ್ ಕೂಡ ಹಾಕದೆ ಬಿ-ರಿಫೋರ್ಟ್ ಕೊಟ್ಟಿದ್ದರು. ಈ ಜಾಣಮರೆವು ನಾಚಿಕೆಗೇಡಲ್ಲದೇ ಬೇರೇನು? ಬಿಜೆಪಿ ಎಂದಿಗೂ ಕಾನೂನಿಗೆ ಬೆಲೆ ಕೊಡುತ್ತದೆ. ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ 

3, 4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಅವರ ಋಣ ಸಂದಾಯ ಮಾಡಬೇಕಿದೆ! ನಕಲಿ ಗಾಂಧಿ ಕುಟುಂಬಕ್ಕಾಗಿ ಮಾಡಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಆಡಿದ ಮಾತುಗಳಿವು.

ಭಾರತ್ ಜೋಡೋ ಎಂಬ ನಾಟಕ ಹೆಣೆದಿರುವ ಕಾಂಗ್ರೆಸ್ಸಿಗರ ನಿಜಬಣ್ಣ ಈಗ ಬಯಲಾಗಿದೆ.

ನಕಲಿ ಗಾಂಧಿ ಕುಟುಂಬದ ಅಕ್ರಮ ಸಂಪಾದನೆ ಅಳೆಯಲು, ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಯೊಂದೇ ಸಾಕು.

ನಾಲ್ಕು ತಲೆಮಾರಿನವರಿಗೂ ಬೇಕಾದಷ್ಟು ಮಾಡಿದ್ದು ಹೇಗೆ ಎಂಬುದರ ಲೆಕ್ಕ ಕೊಡುವಿರಾ?#CorruptCONgress pic.twitter.com/Au702raxwW

— BJP Karnataka (@BJP4Karnataka) July 21, 2022

60 ವರ್ಷಕ್ಕೂ ಹೆಚ್ಚು ಕಾಲ ದೇಶವಾಳಲು ಅವಕಾಶ ನೀಡಿದ ಜನತೆಯ ಋಣ ಇವರಿಗಿಲ್ಲ, ಇಟೆಲಿಯಿಂದ ಬಂದವರಿಗೆ ಎಂತಹಾ ನಿಷ್ಠೆ? ಬಡತನ ನಿರ್ಮೂಲನೆಗೆ ಮೀಸಲಿಟ್ಟ ಪ್ರತಿ ಒಂದು ರೂಪಾಯಿಯಲ್ಲಿ, 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದ ಮಾತಿನ ಮರ್ಮ ಈಗ ಅರಿವಾಗುತ್ತಿದೆ. ಮಿಕ್ಕ 85 ಪೈಸೆಯನ್ನು ಕಾಂಗ್ರೆಸ್ ನಾಯಕರ ನಾಲ್ಕು ತಲೆಮಾರಿಗೆ ಇಟ್ಟಿದ್ದೇ?

ಋಣ ಸಂದಾಯ ಎಂದರೆ ಏನು? ಈ ದೇಶದ ಜನತೆಗೆ ನಕಲಿ ಗಾಂಧಿ ಕುಟುಂಬ ತಮ್ಮ ಮನೆಯಿಂದ ಏನನ್ನೂ ಕೊಟ್ಟಿಲ್ಲ. ಅವರಿಗೆ ಎಲ್ಲವೂ ಸಂದಾಯವಾದದ್ದು ಈ ದೇಶದಿಂದಲೇ, ಆದರೆ ಅಂತಿಮವಾಗಿ ನಕಲಿ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ.

ಋಣ ಸಂದಾಯ ಎಂದರೆ ಏನು?

ಈ ದೇಶದ ಜನತೆಗೆ ನಕಲಿ ಗಾಂಧಿ ಕುಟುಂಬ ತಮ್ಮ ಮನೆಯಿಂದ ಏನನ್ನೂ ಕೊಟ್ಟಿಲ್ಲ.

ಅವರಿಗೆ ಎಲ್ಲವೂ ಸಂದಾಯವಾದದ್ದು ಈ ದೇಶದಿಂದಲೇ, ಆದರೆ ಅಂತಿಮವಾಗಿ ನಕಲಿ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ.#CorruptCONgress

— BJP Karnataka (@BJP4Karnataka) July 21, 2022

ಸಂವಿಧಾನದ ಬಗ್ಗೆ ಭಾರೀ ಜ್ಞಾನ ಹೊಂದಿರುವ ರಮೇಶ್ ಕುಮಾರ್ ಕೂಡಾ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನಕ್ಕೆ ಅತೀತರನ್ನಾಗಿಸಲು ಯತ್ನಿಸುತ್ತಿದ್ದಾರೆ. ದೇಶದ ಆಸ್ತಿ ಕಬಳಿಸಿದ ವ್ಯಕ್ತಿಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ರಕ್ಷಿಸಲು ಹೊರಟಿದ್ದೇಕೆ? ನಿಮ್ಮ ಋಣ ಸಂದಾಯ ಮಾಡಿ, ಆದರೆ ಆ ಭಾರವನ್ನು ದೇಶದ ಮೇಲೆ ಹೊರಿಸಬೇಡಿ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ: ಜಿಟಿಡಿ

ಸಂವಿಧಾನದ ಬಗ್ಗೆ ಭಾರೀ ಜ್ಞಾನ ಹೊಂದಿರುವ ರಮೇಶ್ ಕುಮಾರ್ ಕೂಡಾ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನಕ್ಕೆ ಅತೀತರನ್ನಾಗಿಸಲು ಯತ್ನಿಸುತ್ತಿದ್ದಾರೆ.

ದೇಶದ ಆಸ್ತಿ ಕಬಳಿಸಿದ ವ್ಯಕ್ತಿಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ರಕ್ಷಿಸಲು ಹೊರಟಿದ್ದೇಕೆ?

ನಿಮ್ಮ ಋಣ ಸಂದಾಯ ಮಾಡಿ, ಆದರೆ ಆ ಭಾರವನ್ನು ದೇಶದ ಮೇಲೆ ಹೊರಿಸಬೇಡಿ!#CorruptCONgress

— BJP Karnataka (@BJP4Karnataka) July 21, 2022

ರಾಜ್ಯ ಸರ್ಕಾರದ ಮೇಲೆ 40% ಆರೋಪ ಮಾಡುವ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಾಗ ಬೀದಿಗಿಳಿದಿದೆ. ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡವರು ಈಗ ಭ್ರಷ್ಟಾಚಾರದ ಬಗ್ಗೆ ಪ್ರವಚನ ಮಾಡುತ್ತಿರುವುದು ಹಾಸ್ಯಾಸ್ಪದವಲ್ಲವೇ?

ಬಡತನ ನಿರ್ಮೂಲನೆಗೆ ಮೀಸಲಿಟ್ಟ ಪ್ರತಿ ಒಂದು ರೂಪಾಯಿಯಲ್ಲಿ, 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದ ಮಾತಿನ ಮರ್ಮ ಈಗ ಅರಿವಾಗುತ್ತಿದೆ.

ಮಿಕ್ಕ 85 ಪೈಸೆಯನ್ನು ಕಾಂಗ್ರೆಸ್ ನಾಯಕರ ನಾಲ್ಕು ತಲೆಮಾರಿಗೆ ಇಟ್ಟಿದ್ದೇ?#CorruptCONgress

— BJP Karnataka (@BJP4Karnataka) July 21, 2022

ಭಾರತ್ ಜೋಡೋ ಎಂಬ ನಾಟಕ ಹೆಣೆದಿರುವ ಕಾಂಗ್ರೆಸ್ಸಿಗರ ನಿಜ ಬಣ್ಣ ಈಗ ಬಯಲಾಗಿದೆ. ನಕಲಿ ಗಾಂಧಿ ಕುಟುಂಬದ ಅಕ್ರಮ ಸಂಪಾದನೆ ಅಳೆಯಲು, ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಯೊಂದೇ ಸಾಕು. ನಾಲ್ಕು ತಲೆಮಾರಿನವರಿಗೂ ಬೇಕಾದಷ್ಟು ಮಾಡಿದ್ದು ಹೇಗೆ ಎಂಬುದರ ಲೆಕ್ಕ ಕೊಡುವಿರಾ? ಎಂದು ಕಿಡಿಕಾರಿದೆ.

Live Tv
[brid partner=56869869 player=32851 video=960834 autoplay=true]

Share This Article
Facebook Whatsapp Whatsapp Telegram
Previous Article Arvind Kejriwal ಗುಜರಾತ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ ಪೂರೈಕೆ ಭರವಸೆ ನೀಡಿದ ಕೇಜ್ರಿವಾಲ್
Next Article 5G 5ಜಿ ನೆಟ್‌ ಭಾರತದಲ್ಲಿ ಬೆಲೆ ಎಷ್ಟಿರಬಹುದು?

Latest Cinema News

bigg boss 12 kannada contestants
ಬಿಗ್‌ಬಾಸ್ ಮನೆಗೆ ಈ ಬಾರಿ ಯಾರು ಹೋಗ್ತಾರೆ? ಹರಿದಾಡುತ್ತಿದೆ ಹಲವು ಹೆಸರುಗಳು
Cinema Latest Main Post Sandalwood
Megha Shetty
BBK 12 | ದೊಡ್ಮನೆಗೆ ಹೋಗ್ತಾರಾ ನಟಿ ಮೇಘಾ ಶೆಟ್ಟಿ?
Cinema Latest Sandalwood Top Stories
Ramya Ravichandran
ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್
Cinema Districts Karnataka Latest Sandalwood Top Stories Tumakuru
Kolar Dhruva Sarja
ಕೋಲಾರ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ನಟ ಧ್ರುವ ಸರ್ಜಾ ವಿಶೇಷ ಪೂಜೆ
Cinema Districts Karnataka Kolar Latest Sandalwood Top Stories
Kantara 2
ಕಾಂತಾರ ಚಾಪ್ಟರ್‌-1 ಟ್ರೈಲರ್‌ ಲಾಂಚ್‌ಗೆ ದಿನಾಂಕ, ಸಮಯ ಫಿಕ್ಸ್‌ – ಹೊಂಬಾಳೆ ಫಿಲ್ಮ್ಸ್ಅಧಿಕೃತ ಮಾಹಿತಿ
Bengaluru City Cinema Latest Sandalwood Top Stories

You Might Also Like

Banu Mushtaq 1
Districts

ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್‌

6 minutes ago
Banu Mushtaq
Districts

ಚಾಮುಂಡಿ ತಾಯಿ ಪೂಜೆ ವೇಳೆ ಬಾನು ಮುಷ್ತಾಕ್ ಭಾವುಕ

51 minutes ago
Banu Mushtaq participates in the Dasara worship at Chamundi Temple in Mysuru
Districts

ಮೈಸೂರು ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಚಾಮುಂಡಿ ತಾಯಿಯ ಸೀರೆ ಪಡೆದ ಬಾನು ಮುಷ್ತಾಕ್‌

1 hour ago
Tumakuru dasara
Districts

ತುಮಕೂರು ದಸರಾ ಉದ್ಘಾಟಿಸಿದ ಪರಮೇಶ್ವರ್

2 hours ago
Hassan Belur Bandh
Districts

ಗಣೇಶ ವಿಗ್ರಹಕ್ಕೆ ಅಪಮಾನ – ಘಟನೆ ಖಂಡಿಸಿ ಇಂದು ಬೇಲೂರು ಬಂದ್

3 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?