ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು – ಮಹಾಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಬೇಡಿಕೆ

Public TV
2 Min Read
mallikarjun kharge

ನವದೆಹಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ(Maharashtra) ಬಿಜೆಪಿಗೆ ದಕ್ಕಿದ ಪ್ರಚಂಡ ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ (Congress) ಇದೀಗ ಇವಿಎಂ (EVM) ವಿರುದ್ಧವೇ ಚಳವಳಿಗೆ ಪ್ಲಾನ್ ಮಾಡುತ್ತಿದೆ.

ಚುನಾವಣೆಗೆ (Election) ಮತಯಂತ್ರ ಬೇಡ. ಬ್ಯಾಲೆಟ್ ಪೇಪರ್ (Ballot Paper) ಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಇರಿಸಿದೆ. ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ್ ರಕ್ಷಕ್ ಅಭಿಯಾನದಲ್ಲಿ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಪದ್ದತಿ ಮರು ಜಾರಿಗಾಗಿ ಮತ್ತೆ ಭಾರತ್ ಜೋಡೋ (Bharat Jodo) ಯಾತ್ರೆ ಮಾದರಿಯ ಚಳವಳಿಗೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

ಎಸ್‌ಸಿ, ಎಸ್‌ಟಿ, ಒಬಿಸಿ ಬಡ ಸಮುದಾಯಗಳ ಜನರ ಮತಗಳು ವ್ಯರ್ಥವಾಗುತ್ತಿವೆ. ಇವಿಎಂಗಳನ್ನು ಪಕ್ಕಕ್ಕೆ ಇರಿಸಿ. ನಮಗೆ ಇವಿಎಂ ಬೇಡ, ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ಬೇಕು. ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಮನೆಯಲ್ಲಿ ಇವಿಎಂ ಯಂತ್ರವನ್ನು ಇಡಲಿ. ಅಹಮದಾಬಾದ್‌ನಲ್ಲಿ ಸಾಕಷ್ಟು ಗೋದಾಮುಗಳಿದ್ದರೆ ಅವರು ಅಲ್ಲಿ ಯಂತ್ರಗಳನ್ನು ಇಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

ನಮ್ಮ ಪಕ್ಷವು ಇತರ ಎಲ್ಲ ಪಕ್ಷಗಳು ಸೇರಿದಂತೆ ಎಲ್ಲರಿಗೂ ಪ್ರಚಾರವನ್ನು ಪ್ರಾರಂಭಿಸಬೇಕು. ರಾಹುಲ್ ಗಾಂಧಿಯವರ (Rahul Gandhi) ನೇತೃತ್ವದಲ್ಲಿ ಬ್ಯಾಲೆಟ್ ಪೇಪರ್ ಪದ್ದತಿ ಮರು ಜಾರಿಗಾಗಿ ನಾವು ಭಾರತ್ ಜೋಡೋ ಯಾತ್ರೆಯಂತಹ ಚಳುವಳಿಯನ್ನು ಪ್ರಾರಂಭಿಸಬೇಕು ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆಯವರ ಈ ಮಾತು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Share This Article