ಸರ್ಕಾರ ಅದಾಗೇ ಬೀಳೋವರೆಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ

Public TV
1 Min Read
CT RAVI

ಚಿಕ್ಕಮಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅದಾಗೇ ಬೀಳುವವರೆಗೂ, ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ಹೊಟ್ಟೆ ತುಂಬುವವರೆಗೂ ಅಥವಾ ಹಿಟ್ಟು ಖಾಲಿಯಾಗೋವರೆಗೂ ಈ ಸರ್ಕಾರ ಇರಬಹುದು. ಈ ಸರ್ಕಾರ ಅದಾಗೇ ಅದು ಬೀಳೂವವರೆಗೂ, ನಾವು ಬೀಳಿಸುವ ಕೆಲಕ್ಕೆ ಕೈ ಹಾಕಲ್ಲ ಎಂದರು.

ಜನರ ಬಯಕೆಯಲ್ಲೂ ಈ ಸರ್ಕಾರ ಇರಬೇಕೆಂದು ಇಲ್ಲ. ಅಷ್ಟೇ ಅಲ್ಲದೆ ಇರಬೇಕೆಂಬ ರೀತಿಯಲ್ಲಿ ಕೆಲಸ, ಕಾರ್ಯಗಳನ್ನ ಈ ಸರ್ಕಾರ ಮಾಡುತ್ತಿಲ್ಲ. ನಾನು ಮೊದಲೇ ಹೇಳಿದಂತೆ ಹಿಟ್ಟು ಹಳಸಿತ್ತು ನಾಯಿ ಕಾದಿತ್ತು ಎಂಬಂತಾಗಿದೆ ಈ ಸರ್ಕಾರದ ಪಾಡು ಎಂದು ವ್ಯಂಗ್ಯವಾಡಿದರು.

ಈ ವೇಳೆ ವಿವೇಕಾನಂದರದ್ದು ಆಕಸ್ಮಿಕ ಸಾವಲ್ಲ, ಕೊಲೆ ಎಂಬ ಭಗವಾನರ ಹೇಳಿಕೆಗೂ ತಿರುಗೇಟು ನೀಡಿದ ಅವರು, ಕೆಲವರು ಪ್ರಚಾರದಲ್ಲಿ ಇರಲು ಹಾಗೂ ನಮಗೆ ಈ ರೀತಿಯೂ ಬುದ್ಧಿ ಭ್ರಮಣೆಯಾಗಿದೆ ಎಂದು ತೋರಿಸೋದಕ್ಕೆ ಕೆಲ ಹೇಳಿಕೆಯನ್ನ ಕೊಡುತ್ತಿರುತ್ತಾರೆ. ಭಗವಾನ್ ಹೇಳಿಕೆ ಹೊಸದೇನಲ್ಲ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *