ವಿಜಯಪುರ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಶಿವನ ದರ್ಶನ ಪಡೆಯಲು ಭಕ್ತರು ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಗೃಹ ಸಚಿವ ಎಂ.ಬಿ ಪಾಟೀಲ್ ನೇರವಾಗಿ ಶಿವ ದರ್ಶನ ಪಡೆದಿದ್ದಾರೆ. ನೇರವಾಗಿ ಶಿವನ ದರ್ಶನ ಪಡೆದ ಎಂ.ಬಿ ಪಾಟೀಲ್ ರನ್ನು ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದ್ದಾಳೆ.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಎಂ.ಬಿ ಪಾಟೀಲ್ ಬಿಎಲ್ಡಿಇ ಆವರಣದಲ್ಲಿರುವ ಪುರಾಣ ಪ್ರಸಿದ್ಧ 770 ಲಿಂಗದ ಗುಡಿ ಶಿವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಅವರು ನೇರವಾಗಿ ಶಿವನ ದರ್ಶನ ಪಡೆದು ಹೋದರು. ಈ ವೇಳೆ ವಿದ್ಯಾರ್ಥಿನಿ ಸಚಿವರನ್ನು ಪ್ರಶ್ನಿಸಿದ್ದಾಳೆ.
ಒಂದು ಗಂಟೆಯಿಂದ ಸಾಲಿನಲ್ಲಿ ನಿಂತಿದ್ದೇವೆ. ನೀವು ಈಗ ಬಂದು ದರ್ಶನ ಪಡೆದಿದ್ದೀರಾ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ. ಅದಕ್ಕೆ ಎಂ.ಬಿ ಪಾಟೀಲ್ ತುರ್ತಾಗಿ ತೆರಳುವುದಿದೆ ಎಂದು ಬಾಲಕಿಗೆ ಸಮಜಾಯಿಸಿ ನೀಡಿದ್ದರು. ಅಲ್ಲದೇ ನನಗೂ ಸಾಮಾನ್ಯನಂತೆ ಜೀವಿಸುವ ಇಚ್ಛೆಯಿದೆ. ಹಾಗಾಗಿ ನಾನಗಿ ಝೀರೋ ಟ್ರಾಫಿಕ್ ಬೇಡ ಎಂದು ಸೂಚಿಸಿದ್ದೇನೆ ಎಂದು ನಯವಾಗಿ ಉತ್ತರಿಸಿದರು.
ಬಳಿಕ ದೇವಸ್ಥಾನದಿಂದ ತೆರಳುವ ವೇಳೆ ಎಂ.ಬಿ ಪಾಟೀಲ್ ವಿದ್ಯಾರ್ಥಿನಿಗೆ ಕ್ಷಮೆ ಕೇಳಿದಲ್ಲದೇ ನಿನ್ನ ಸಲಹೆಯನ್ನು ನಾನು ಸ್ವೀಕರಿಸುತ್ತೇನೆ ಎಂದು ವಿದ್ಯಾರ್ಥಿನಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv