ಬೆಂಗಳೂರು: ಮಾಜಿ ಸಚಿವ ರಾಜಣ್ಣ (KN Rajanna), ಅವರ ಪುತ್ರನ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಕಿಡಿಕಾರಿದ್ದಾರೆ. ರಾಜಣ್ಣ ಅವರನ್ನ ವಜಾ ಮಾಡಲಾಗಿದೆ. ಇದರಲ್ಲಿ ಯಾರ ಷಡ್ಯಂತ್ರವೂ ಇಲ್ಲ. ಆದರೆ ರಾಜಣ್ಣ ಷಡ್ಯಂತ್ರ ಅಂತಾ ಹೇಳಿ ಡಿಸಿಎಂ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾತಿಗೆ ಮುಂಚೆ ಷಡ್ಯಂತ್ರ ಷಡ್ಯಂತ್ರ ಎಂದು ಹೇಳುತ್ತಾರೆ. ಆರ್ಎಸ್ಎಸ್ ಗೀತೆ ಹೇಳಿದ್ದಾರಂತೆ, ಅವರ ಮೇಲೆ ಕ್ರಮ ಆಗಬೇಕು ಅಂತಾರೆ. ಅದಕ್ಕೆ ಡಿಕೆಶಿಯವರು (DK Shivakumar) ಸ್ಪಷ್ಟನೆ ಕೊಟ್ಟು, ಕ್ಷಮೆ ಕೇಳಿದ್ದಾರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡೋದಲ್ಲ. ಹೈಕಮಾಂಡ್ ವಿರುದ್ಧ ಸೆಡ್ಡು ಹೊಡೆಯುತ್ತೇನೆ, ಜನರನ್ನ ಕರೆದುಕೊಂಡು ಹೋಗುತ್ತೇನೆ ಅಂದ್ರೆ ಯಾರೂ ಲೆಕ್ಕಕ್ಕಿಲ್ಲ ಅನ್ನೋ ಮಾತಾಡ್ತಾರೆ ಅಲ್ವಾ? ಅದಕ್ಕೆ ನಾನು ಹೇಳಿದ್ದು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್
ರಾಜಣ್ಣಗೆ ಪಕ್ಷ ಅನಿವಾರ್ಯ ಅಲ್ಲ ಅಂತಾ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ರಾಜಣ್ಣ ಏನೂ ರಿಯಾಕ್ಟ್ ಮಾಡುತ್ತಿಲ್ಲ ಅಲ್ವಾ? ಪಕ್ಷದಿಂದ ನಾನು ಗೆದ್ದಿದ್ದು ಅಂತಾ ಹೇಳಬೇಕಿತ್ತು ಅಲ್ವಾ. ಬ್ರೈನ್ ಮ್ಯಾಪಿಂಗ್ಗೆ ನಾನು ರೆಡಿ ಇದ್ದೀನಿ. ಡಿಕೆಶಿ ಪಕ್ಷದ ಇತಿಮಿತಿ ಬಿಟ್ಟು ಏನೂ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ನಾವು ಕೂಡ ಸಿದ್ದರಾಮಯ್ಯನವರ ಶಿಷ್ಯರೇ. ಸಿದ್ದರಾಮಯ್ಯ ಹೆಸರೇಳಿ ಓಲೈಕೆ ಮಾಡಿಕೊಳ್ಳಲು ಹೇಳೋದು, ಸಿದ್ದರಾಮಯ್ಯಗೆ ಮುಜುಗರ ಆಗದೇ ಇರೋ ರೀತಿ ನಡೆದುಕೊಳ್ಳಬೇಕಿತ್ತು. ನಿಜವಾದ ಕಾರ್ಯಕರ್ತ, ಸಿದ್ದರಾಮಯ್ಯ ನಿಜವಾದ ಅಭಿಮಾನಿಯಾದರೆ ಅವರಿಗೆ ಮುಜುಗರ ಆಗದ ರೀತಿ ನಡೆದುಕೊಳ್ಳಬೇಕಿತ್ತು. ಕ್ರಾಂತಿ ಬಗ್ಗೆ ರಾಜಣ್ಣ ಬಿಟ್ಟು ಬೇರೆ ಯಾರದರೂ ಹೇಳಿದ್ದಾರಾ? ರಾಹುಲ್ ಗಾಂಧಿಯವರ ಬಗ್ಗೆ, ಅವರ ನಿಲುವಿನ ಬಗ್ಗೆ ಉಡಾಫೆಯಾಗಿ ಮಾತಾಡಬಹುದಾ? ಸುರ್ಜೇವಾಲ ಬಂದರೆ ಕೆಟ್ಟದಾಗಿ ಮಾತನಾಡೋದು ಎಂದು ಕಿಡಿಕಾರಿದರು. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಯಮುನಾ
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬಿಜೆಪಿ ಅವರು ಇದ್ದಾರೆ. ಏಕೆ ಉಳಿಸಿಕೊಂಡಿದ್ದಾರೆ ಅಂತಾ ರಾಜಣ್ಣ ಹೇಳಬೇಕು. ನಮ್ಮ ಪಕ್ಷದವರನ್ನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬಹುದಿತ್ತಲ್ವಾ? ಇದಕ್ಕೆ ರಾಜಣ್ಣ ಅವರ ಸುಪುತ್ರ ಹೇಳಬೇಕು. ಯಾರೂ ಸನ್ಯಾಸಿಗಳಲ್ಲ. ಸಿಎಂ ಮಾತನ್ನೂ ಧಿಕ್ಕರಿಸಿ, ಮುಂದುವರೆಸಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ ಮಾಡಿಸಿ ಕೊಡ್ತೀನಿ – ರಾಯರೆಡ್ಡಿ ಭರವಸೆ