ಬೆಂಗಳೂರು: ನಾವು ರಾಜಕಾರಣಿಗಳು, ನಮಗೂ ರಾಜಕೀಯ ಮಾಡೋದಕ್ಕೆ ಬರುತ್ತದೆ. ಬಿಜೆಪಿ ನಮ್ಮ ಹಾಗು ಜೆಡಿಎಸ್ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದೆ ಅಂತಾ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ನಮ್ಮ ಯಾವ ಶಾಸಕರು ಕಾಂಗ್ರೆಸ್ ತೊರೆಯುವುದಿಲ್ಲ. ಇತ್ತ ಜೆಡಿಎಸ್ ಶಾಸಕರು ಪಕ್ಷದಿಂದ ದೂರ ಹೋಗಲ್ಲ. ಎಲ್ಲರೂ ನಮ್ಮ ಶಾಸಕರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ ನಮ್ಮ ಬಹುಮತವಿದ್ದು, ನಾವೇ ಸರ್ಕಾರ ರಚಿಸಲಿದ್ದೇವೆ ಅಂತಾ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.
ಬಯ್ಯಾಪುರ್ ಒಬ್ಬರೆ ಅಲ್ಲಾ, ಎಲ್ಲಾ ಕಾಂಗ್ರೆಸ್ ಶಾಸಕರಿಗೂ ಬಿಜೆಪಿಯವರು ಕರೆ ಮಾಡುತ್ತಿದ್ದಾರೆ. ಆದರೆ ನಮ್ಮ ಶಾಸಕರೇನು ದಡ್ಡರಲ್ಲ. ವೋಟು ಹಾಕಿದ ಹಳ್ಳಿ ಜನ ಅಷ್ಟು ಸುಲಭವಾಗಿ ಬೇರೆ ಪಕ್ಷಕ್ಕೆ ಹೋಗೋಕೆ ಬಿಡಲ್ಲ. ನಾವು ರಾಜಕಾರಣಿಗಳು, ರಾಜಕೀಯ ಮಾಡೋಕೆ ನಮಗು ಬರುತ್ತೆ. ಬಿಜೆಪಿ ಯಾವ ಯಾವ ನಾಯಕರಿಗೆ ಕರೆ ಮಾಡಿದ್ದಾರೆ ಎನ್ನುವ ಪಟ್ಟಿಯನ್ನು ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.