ನಾವು ಟೆನ್ಶನ್ ಆಗಿಲ್ಲ, ಕೂಲ್ ಆಗಿಯೇ ಇದ್ದೇವೆ- ಪರಮೇಶ್ವರ್

Public TV
1 Min Read
PARAM SIDDU

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‍ನಲ್ಲಿ ಬಿಗ್ ಫೈಟ್ ನಡೆಯುತ್ತಿದ್ದರೂ, ನಾವು ಟೆನ್ಶನ್ ಆಗಿಲ್ಲ, ಕೂಲ್ ಕೂಲ್ ಆಗಿಯೇ ಇದ್ದೇವೆ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಹೋರಾಟ ಮುಂದವರೆದಿದೆ. ಅಸಮಾಧಾನಿತ ಶಾಸಕರನ್ನು ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಂಬಂಧ ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಪರಮೇಶ್ವರ್, ನಾನು ಟೆನ್ಶನ್ ಆಗಿಲ್ಲ, ಕೂಲ್ ಆಗಿಯೇ ಇದ್ದೇವೆ. ಸಿದ್ದರಾಮಯ್ಯ ಅವರು ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಲು ತೆರಳಿದ್ದಾರೆ. ನಾವು ಮಾತ್ರ ಬೆಂಗಳೂರಿನಲ್ಲಿ ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ ಅಂತಾ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ರು.

ದೆಹಲಿಯಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ಮಾಹಿತಿಗಳು ನನಗಿಲ್ಲ. ದಿನೇಶ್ ಗುಂಡೂರಾವ್ ಮತ್ತು ಡಿಕೆ ಶಿವಕುಮಾರ್ ಅವರೇ ದೆಹಲಿಯೇ ಹೋಗಿ ಬಂದಿದ್ದು, ಹೋಗಿರೋದು ಹೇಳಿಲ್ಲ, ಬಂದಿರೋದು ಹೇಳಿಲ್ಲ ಈ ಸಂಬಂಧ ಅವರಿಬ್ಬರನ್ನೇ ಕೇಳಬೇಕು ಅಂತಾ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *