Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

Wayanad landslides – ಕಂಬನಿ… ಖಾಲಿಯಾಗಿದೆ…!

Public TV
Last updated: August 1, 2024 10:29 am
Public TV
Share
3 Min Read
022
Wayanad landslides
SHARE

ಹಸಿರು ಪ್ರಕೃತಿ ಮಡಿಲಿನಲ್ಲಿದ್ದ ಆ ಊರಿನ ಜನ ರಾತ್ರಿ ಸುಖ ನಿದ್ರೆಗೆ ಜಾರಿದ್ದರು. ಭವಿಷ್ಯದ ನಾಳೆಗಾಗಿ ನೂರಾರು ಕನಸುಗಳನ್ನು ಬುತ್ತಿಯಲ್ಲಿ ಕಟ್ಟಿಕೊಂಡು, ನಾಳೆ ಉದಯಿಸುವ ಸೂರ್ಯ ಹೊಸ ಬೆಳಕು ತರುತ್ತಾನೆಂದು ಇಡೀ ಊರಿಗೆ ಊರೇ ಶಾಂತವಾಗಿ ಮಲಗಿತ್ತು. ಆದ್ರೆ ಆ ಊರಿನ ಅದೆಷ್ಟೋ ಜನರ ಪಾಲಿಗೆ ರಾತ್ರಿ ಮುಳುಗಿದ ಸೂರ್ಯ ಮತ್ತೆ ಉದಯಿಸಲಿಲ್ಲ.

Wayanad Landslide flood chooralmala mundakkai meppadi news 2

ಏಕೆಂದರೆ ರಾತ್ರೋ ರಾತ್ರಿ ಹುಟ್ಟಿದ ಪ್ರಕೃತಿಯ ಮುನಿಸು ನೂರಾರು ಜನರ ಬದುಕಿನ ಭರವಸೆಗಳನ್ನೇ ಮುಳುಗಿಸಿತ್ತು. ಭೋರ್ಗರೆಯುತ್ತಾ ನುಗ್ಗಿ ಬಂದ ನೀರು ಊರಿಗೂರನ್ನೇ ನಾಮಾವಶೇಷಗೊಳಿಸಿತು. ರಕ್ಕಸರಂತೆ ಒಂದೊಂದಾಗಿ ಧುಮ್ಮಿಕ್ಕುತ್ತಾ ಬಂದ ಬಂಡೆಗಳು ಮನೆ ಮಠಗಳನ್ನೂ ನೋಡಲಿಲ್ಲ, ಜೀವಗಳ ಬಗ್ಗೆ ಕರುಣೆ ತೋರಲಿಲ್ಲ. ಧ್ವಂಸ ಮಾಡಿ, ಇಲ್ಲೊಂದು ಊರು ಇತ್ತು ಎಂಬುದನ್ನೇ ಕಲ್ಪನೆ ಎನ್ನುವಂತೆ ಮಾಡಿದ್ದವು. ಸುಃಖ ನಿದ್ರೆಯಲ್ಲಿ ಮಲಗಿದ್ದವರು ಚಿರ ನಿದ್ರೆ ಜಾರಿದ್ದರು. ಅರೆ ನಿದ್ರೆಯಲ್ಲಿದ್ದವರು ಬೆಳಕರೆಯುವ ಹೊತ್ತಿಗೆ ಕನಸುಗಳನ್ನು ಕೈಚೆಲ್ಲಿ ದುರಂತ ಭೂಮಿಯಲ್ಲಿ ಕಣ್ಣೀರಿಡುತ್ತಿದ್ದರು. ಸದ್ಯ ವಯನಾಡು (Wayanad) ಜಿಲ್ಲೆಯ ಮೆಪ್ಪಾಡಿ ಪಟ್ಟಣ ವ್ಯಾಪ್ತಿಯ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ ಹಾಗೂ ನೂಲ್ಪುಳ ಗ್ರಾಮಗಳ ನೈಜ ಸ್ಥಿತಿ ಇದು.

Wayanad Landslide flood chooralmala mundakkai meppadi news 1

ಬದುಕುಳಿದವರು ಮರು ದಿನ ಎದು ನೋಡಿದರೆ ಉಂಟಾದ ಭೂಕುಸಿತಕ್ಕೆ ಅದೆಷ್ಟೋ ಕಿಲೋ ಮೀಟರ್‌ಗಟ್ಟಲೇ ಶವಗಳು ಕೊಚ್ಚಿಹೋಗಿದ್ದವು. ಇನ್ನೂ ಕೆಲ ಮಕ್ಕಳ ಮೃತ ದೇಹಗಳು ಮರಕ್ಕೆ, ಬೇಲಿಗಳಿಗೆ ಸಿಕ್ಕಿಕೊಂಡಿದ್ದವು, ಕೆಲವರ ದೇಹಗಳಂತು ಬಂಡೆ ಬಡೆದು ಛಿದ್ರ ಛಿದ್ರವಾಗಿತ್ತು. ಇನ್ನೂ ಕೆಲವರದ್ದು ಕೈ ಸಿಕ್ಕರೆ ಕಾಲು ಇಲ್ಲ, ಕಾಲಿದ್ದರೆ ಅರ್ಧ ದೇಹವೇ ಇಲ್ಲ. ಭೂಮಿ ಬಗೆದು ಕೆಸರು ಮೆತ್ತಿಕೊಂಡ ದೇಹಗಳನ್ನು ಸೈನಿಕರು ಒಂದೊಂದಾಗಿ ಮೇಲೆತ್ತಿಕೊಂಡು ಹೋಗುತ್ತಿದ್ದ ದೃಶ್ಯಗಳು ದುರಂತದ ತೀವ್ರತೆಗೆ ಸಾಕ್ಷಿಯಾಗಿದ್ದವು.

01

ಈ ಘೋರ ದುರಂತದಲ್ಲಿ ಜೀವ ಕಳೆದುಕೊಂಡವರ ಕುಟುಂಬಸ್ಥರು ಕರುಳು ಹಿಂಡುವಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪೈಕಿ ಕನ್ನಡಿಗರನ್ನು ಕಳೆದುಕೊಂಡ ಕುಟುಂಬದವರನ್ನು ʻಪಬ್ಲಿಕ್‌ ಟಿವಿʼ ಸಂಪರ್ಕಿಸಿದಾಗ ಒಡಲಲ್ಲಿದ್ದ ಬೆಂಕಿಯನ್ನೆಲ್ಲಾ ಉಗುಳಿದ್ದಾರೆ. ಈ ಪೈಕಿ ಮಂಡ್ಯ ಜಿಲ್ಲೆ ಕೆ.ಆರ್‌ ಪೇಟೆ ಸಂಬಂಧಿಕರೊಬ್ಬರು ಮಾತನಾಡಿದ್ದಾರೆ. ಅದೇನೆಂಬುದನ್ನು ಅವರ ಮಾತುಗಳಲ್ಲೇ ಕೇಳುವುದಾದರೇ ಮುಂದೆ ಓದಿ….

Wayanad Landslide flood chooralmala mundakkai meppadi news 4

ಆ ದಿನ ರಾತ್ರಿ 8 ಗಂಟೆಗೆ ಅಮ್ಮನಿಗೆ ಫೋನ್‌ ಮಾಡಿ, ಅಲ್ಲೆಲ್ಲ ಮಳೆ ಜಾಸ್ತಿಯಾಗಿದೆ ಅಂತ ಟಿವಿಯಲ್ಲಿ ತೋರಿಸ್ತಿದ್ದಾರೆ ಬಂದುಬಿಡಿ ಅಂದೆ. ಇಲ್ಲಿ ಅಷ್ಟು ಮಳೆ ಇಲ್ಲ. ನಾಳೆ ಬರುತ್ತೇವೆ, ಅದಕ್ಕೋಸ್ಕರ ಬ್ಯಾಗ್‌ಗಳನ್ನೆಲ್ಲ ಪ್ಯಾಕ್‌ ಮಾಡಿದ್ದೇವೆ ನೋಡಿಲ್ಲಿ, ಅಂತ ವೀಡಿಯೋ ಕಾಲ್‌ ಮಾಡಿ ತೋರಿಸಿದ್ರು. ಆದ್ರೆ ಬೆಳಗಾಗುವ ಮುನ್ನವೇ ನೀರಲ್ಲಿ ಕೊಚ್ಚಿ ಹೋಗಿದ್ರು.

ನಾವು ಹೊಸದಾಗಿ ಮನೆ ಕಟ್ಟಿದ್ದೇವೆ. ಮುಂದಿನ ತಿಂಗಳು ಗೃಹಪ್ರವೇಶ ಇತ್ತು. ಅಷ್ಟರಲ್ಲಿ ನನ್ನ ಅಮ್ಮನಿಗೆ (ಲೀಲಾವತಿ) ಬಂಡೆ ಹೊಡೆದು ಕೊಚ್ಚಿ ಹೋಗಿದ್ದಾರೆ. ಪಾಪು ನಿಹಾಲ್‌ನ ಹಿಡಿದುಕೊಳ್ಳೋಣ ಅನ್ನುವಷ್ಟರಲ್ಲಿ ಅವನ ಮೇಲೆಯೇ ಗೋಡೆ ರಪ್ಪನೆ ಬಿದ್ದಿದೆ. ನನ್ನ ತಂದೆ ಪಾಪುಗಾಗಿ ಹುಡುಕಿದ್ದಾರೆ. ಎಲ್ಲೂ ಸಿಕ್ತಿಲ್ಲ. ನನ್ನ ಅನಿಲ್ ಹೇಗೋ ಬಚಾವ್ ಆಗಿದ್ದಾನೆ. ಅವನಿಗೆ ಕಣ್ಣು, ಮೂಗು, ಶ್ವಾಸಕೋಶಕ್ಕೆ ಮಣ್ಣು ತುಂಬಿಕೊಂಡಿದೆ. ಅದೆಷ್ಟೋ ದೂರ ಕೊಚ್ಚಿ ಹೋಗಿ ಮಣ್ಣಲ್ಲಿ ಹೂತುಕೊಂಡಿದ್ದ ತಮ್ಮನಿಗೆ ಬೆನ್ನು ಮೂಳೆ ತುಂಡಾಗಿದೆ.

FotoJet 87

ನೀವು ಬರಲಿಲ್ಲ ಅಂದ್ರೆ ಅಲ್ಲೇ ಸಾಯಿರಿ, ಮಗುನಾದ್ರೂ ಕಳಿಸಿಕೊಡಿ ಅಂದೆ. ಅವರು ಸಾಯುತ್ತಾರೆ ಅಂತ ಗೊತ್ತಿರಲಿಲ್ಲ. ಒಂದೇ ಒಂದು ಸಾರಿ ಅವರನ್ನ ನೋಡಬೇಕು ಅನಿಸ್ತಿದೆ. ಪಾಪುವಿಗಾಗಿ ಸೈಕಲ್, ಬುಕ್ಸ್ ಎಲ್ಲಾ ತೆಗೆದಿಟ್ಟಿದ್ದೆ. ಪ್ರತಿದಿನ ವೀಡಿಯೋ ಕಾಲ್‌ ಮಾಡಿ ಮಾತನಾಡುತ್ತಿದ್ದ ಈಗ ಯಾರೊಟ್ಟಿಗೆ ಮಾತನಾಡಲಿ ಅಯ್ಯೋ ದುರ್ವಿಧಿಯೇ ಆ ದೇವರಿಗೆ ಕರುಣಿಯೇ ಇಲ್ಲ. ಹೇಗಾದ್ರೂ ಮಾಡಿ ಒಮ್ಮೆ ಅವರ ಮೃತದೇಹ ತೋರಿಸಿ, ಕೊನೇ ಸಲ ಮುಖ ನೋಡಿಕೊಳ್ತೀನಿ ಅಂತಾ ಮಂಜುಳಾ ಕಣ್ಣೀರಿಟ್ಟಿದ್ದಾರೆ.

FotoJet 1 62

ಅಂದಹಾಗೆ, ಕತ್ತರಘಟ್ಟ ಗ್ರಾಮದ ದೇವರಾಜು, ಲೀಲಾವತಿ, ಅನೀಲ್, ಝಾನ್ಸಿ ಹಾಗೂ ಎರಡೂವರೆ ವರ್ಷದ ನಿಹಾಲ್ ಅಲ್ಲಿ ನೆಲೆಸಿದ್ದರು. ಗುಡ್ಡ ಕುಸಿತವಾದ ವೇಳೆ, ಇವರು ವಾಸವಿದ್ದ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ವೇಳೆ 55 ವರ್ಷದ ಲೀಲಾವತಿ ಗುಡ್ಡದ ಮಣ್ಣಿನ ಕೆಳಭಾಗದಲ್ಲಿ ಸೇರಿಕೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಎರಡುವರೆ ವರ್ಷದ ನಿಹಾಲ್ ಮಣ್ಣು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಇದಲ್ಲದೇ ದೇವರಾಜು, ಅನೀಲ್, ಝಾನ್ಸಿ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ರು. ಬಳಿಕ ಗಾಯಳುಗಳ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಈ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

TAGGED:kannadigaskeralaKerala RainsWayanadWayanad Landslidesಕನ್ನಡಿಗರುಕೇರಳಗುಡ್ಡ ಕುಸಿತವಯನಾಡು
Share This Article
Facebook Whatsapp Whatsapp Telegram

Cinema Updates

amid calls for boycott aamir khan productions changes display pic to indian flag internet calls it damage control
‘ಸಿತಾರೆ ಜಮೀನ್ ಪರ್’ ಗೆ ಬಾಯ್ಕಾಟ್‌ ಭಯ – ತ್ರಿವರ್ಣ ಧ್ವಜ ಡಿಪಿ ಹಾಕಿದ ಆಮೀರ್ ಖಾನ್!
5 hours ago
Rani Mukerji Shah Rukh Khan
ʻಕಿಂಗ್’ ಜೊತೆ ಮತ್ತೆ ಒಂದಾಗಲಿದ್ದಾರೆ ರಾಣಿ ಮುಖರ್ಜಿ!
7 hours ago
disha madan
ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್
11 hours ago
pawan kalyan 1 1
ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್
11 hours ago

You Might Also Like

BSF Army Purnam kumar
Latest

ಬಿಎಸ್‌ಎಫ್‌ ಯೋಧನಿಗೆ 20 ದಿನವೂ ಇನ್ನಿಲ್ಲದ ಟಾರ್ಚರ್‌ ನೀಡಿದ್ದ ಪಾಕ್‌

Public TV
By Public TV
4 hours ago
Niraj Chopra
Latest

ದೋಹಾ ಡೈಮಂಡ್ ಲೀಗ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ

Public TV
By Public TV
5 hours ago
Muslim protest in Belgavi Miscreants throw slippers police
Belgaum

ಬೆಳಗಾವಿಯಲ್ಲಿ ಮುಸ್ಲಿಮರ ಪ್ರತಿಭಟನೆ – ಪೊಲೀಸರ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿಗಳು

Public TV
By Public TV
5 hours ago
Virat Kohli 3
Cricket

40,000 ಫ್ಯಾನ್ಸ್‌ಗಳಿಂದ ವೈಟ್ ಜೆರ್ಸಿಯಲ್ಲಿ `ಕಿಂಗ್ ಕೊಹ್ಲಿ’ಗೆ ಗೌರವ

Public TV
By Public TV
5 hours ago
Russian Foreign Minister Sergey Lavrov
Latest

ಭಾರತ, ಚೀನಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಎತ್ತಿಕಟ್ಟುತ್ತಿವೆ: ರಷ್ಯಾ ವಿದೇಶಾಂಗ ಸಚಿವ

Public TV
By Public TV
6 hours ago
H D Kumaraswamy 1
Bengaluru City

ಕೊತ್ತೂರು ಮಂಜುನಾಥ್ ಹೇಳಿಕೆ ಕಾಂಗ್ರೆಸ್ ಪಕ್ಷದ ಅಂತರಾತ್ಮದ ದನಿ: ಹೆಚ್‌ಡಿಕೆ ವಾಗ್ದಾಳಿ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?