ಭುವನೇಶ್ವರ: ವ್ಯಕ್ತಿಯೊಬ್ಬ ಗಾಯಗೊಂಡಿದ್ದ ಕರಡಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಟ್ಯಾಕ್ಷಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಭು ಭಾತ್ರಾ ಮೃತ ದುರ್ದೈವಿ. ಬುಧವಾರ ನಬರಾಂಗ್ಪುರ ಜಿಲ್ಲೆಯ ಕೋಸಗುಮುದ ಬ್ಲಾಕ್ ನಡಿ ಬರುವ ಅರಣ್ಯದ ಬಳಿ ಈ ಘಟನೆ ಸಂಭವಿಸಿದೆ.
ಘಟನೆ ವಿವರ?: ಪ್ರಭು ಭಾತ್ರಾ ಕೆಲವು ಪ್ರಯಾಣಿಕರೊಂದಿಗೆ ಕಾಟಪಾಡ್ ನಿಂದ ಪಾಪದಹಂಡಿಗೆ ಬೊಲೆರೋ ಕಾರಿನಲ್ಲಿ ಹೋಗುತ್ತಿದ್ದರು. ಎಲ್ಲರೂ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಅರಣ್ಯದ ಕೊಳದ ಬಳಿ ಒಂದು ಕರಡಿ ಇತ್ತು. ಅದನ್ನು ನೋಡಿದ ಪ್ರಭು ಭಾತ್ರಾ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದಾನೆ.
ಪ್ರಭು ಭಾತ್ರಾ ಕಾರಿನಿಂದ ಇಳಿದು ಗಾಯಗೊಂಡಿದ್ದ ಕರಡಿ ಬಳಿ ಹೋಗಿದ್ದಾನೆ. ಆದರೆ ಕರಡಿ ತಕ್ಷಣ ಪ್ರಭುವನ್ನು ಹಿಡಿದು ಕಚ್ಚಲು ಆರಂಭಿಸಿದೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಆತನನ್ನ ಕಾಪಾಡಲು ಪ್ರಯತ್ನಿಸಿದ್ದಾರೆ. ಆದರೆ ಕರಡಿ ಆತನನ್ನು ಬಿಡದೆ ಕ್ರೂರವಾಗಿ ಕಚ್ಚಿ ಸಾಯಿಸಿದೆ.
ಈ ಎಲ್ಲಾ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ನಂತರ ಅವರು ಅರಣ್ಯಾಧಿಕಾರಿಗಳ ಕಚೇರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಕರಡಿಯಿಂದ ಮೃತ ದೇಹವನ್ನು ರಕ್ಷಿಸಿದ್ದಾರೆ.
Horrific moment a taxi driver is mauled to death by a bear after trying to take a selfie with it in India https://t.co/znGDAwYg5L pic.twitter.com/hrctrVz5jf
— Daily Mail Online (@MailOnline) May 3, 2018