ನವದೆಹಲಿ: ವಕ್ಫ್ (Waqf) ಎನ್ನುವುದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಅದು ದಾನಧರ್ಮವಲ್ಲದೆ ಬೇರೇನೂ ಅಲ್ಲ ಎಂದು ಸುಪ್ರೀಂ ಕೋರ್ಟ್ಗೆ (Supreme Court) ಕೇಂದ್ರ ಸರ್ಕಾರ ಹೇಳಿದೆ. ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ವಕ್ಫ್ ಒಂದು ಇಸ್ಲಾಮಿಕ್ ಪರಿಕಲ್ಪನೆ. ಆದರೆ ಅದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ವಕ್ಫ್ ಇಸ್ಲಾಂನಲ್ಲಿ ಕೇವಲ ದಾನವಾಗಿದೆ. ದಾನವು ಪ್ರತಿಯೊಂದು ಧರ್ಮದ ಭಾಗವಾಗಿದೆ ಮತ್ತು ಕ್ರಿಶ್ಚಿಯನ್ ಧರ್ಮಕ್ಕೂ ಸಹ ಇದು ಸಂಭವಿಸಬಹುದು ಎಂದು ತೀರ್ಪುಗಳು ತೋರಿಸುತ್ತವೆ. ಹಿಂದೂಗಳು ದಾನ ಮಾಡುವ ವ್ಯವಸ್ಥೆಯನ್ನು ಹೊಂದಿದ್ದಾರೆ. ಸಿಖ್ರು ಸಹ ಈ ಸಂಪ್ರದಾಯ ಹೊಂದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ
ಬಳಕೆದಾರರಿಂದ ವಕ್ಫ್ ತತ್ವದ ಅಡಿಯಲ್ಲಿ ವಕ್ಫ್ ಎಂದು ಘೋಷಿಸಲಾದ ಆಸ್ತಿಗಳನ್ನು ಮರುಪಡೆಯಲು ಕೇಂದ್ರವು ಕಾನೂನುಬದ್ಧ ಅಧಿಕಾರ ಹೊಂದಿದೆ. ಸರ್ಕಾರಿ ಭೂಮಿಯ ಮೇಲೆ ಯಾರಿಗೂ ಹಕ್ಕಿಲ್ಲ. ಅದು ಸರ್ಕಾರಕ್ಕೆ ಸೇರಿದ್ದು, ಆಸ್ತಿ ವಕ್ಫ್ ಎಂದು ಘೋಷಿಸಲ್ಪಟ್ಟಿದ್ದರೆ ಸರ್ಕಾರವು ಆಸ್ತಿಯನ್ನು ಉಳಿಸಬಹುದು ಎಂದು ಮೆಹ್ತಾ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿ-ಸದ್ಯಸ ಪೀಠಕ್ಕೆ ತಿಳಿಸಿದರು.
ಹೊಸ ಕಾನೂನಿನಲ್ಲಿ ಔಪಚಾರಿಕ ದಾಖಲೆಗಳಿಲ್ಲದಿದ್ದರೂ ಸಹ, ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೀರ್ಘಕಾಲೀನ ಬಳಕೆಯ ಆಧಾರದ ಮೇಲೆ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರಿಂದ ವಕ್ಫ್ ಮೂಲಭೂತ ಹಕ್ಕಲ್ಲ ಎಂದು ಪ್ರತಿಪಾದಿಸಿದ ಅವರು, ಬಳಕೆದಾರರಿಂದ ವಕ್ಫ್ ಅನ್ನು ಮೂರು ವಿನಾಯಿತಿಗಳೊಂದಿಗೆ ಅನುಮತಿಸಲಾಗುವುದಿಲ್ಲ, ಅದು ನೋಂದಾಯಿಸಲ್ಪಡಬೇಕು, ಖಾಸಗಿ ಆಸ್ತಿ ಮತ್ತು ಸರ್ಕಾರಿ ಆಸ್ತಿಯಾಗಿರಬೇಕು ಎಂದು ಹೇಳಿದರು.
ಬ್ರಿಟಿಷ್ ಮತ್ತು ಭಾರತೀಯ ಸರ್ಕಾರಗಳು ಪರಿಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಇತ್ತೀಚಿನ ವಕ್ಫ್ ಕಾನೂನು ತಿದ್ದುಪಡಿಗಳು ಪರಿಹರಿಸಿವೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.ಇದನ್ನೂ ಓದಿ: ‘ಆರ್ಯ 3’ ಟೈಟಲ್ ರಿಜಿಸ್ಟರ್ ಮಾಡಿಸಿದ ನಿರ್ಮಾಪಕ- ಸಾಥ್ ನೀಡ್ತಾರಾ ಅಲ್ಲು ಅರ್ಜುನ್?