ಸಾರ್ ಇನ್ನು 5 ವರ್ಷ ಟೈಂ ಇದೆ, ಮುಂದಿನ ಬಾರಿ ಮತ್ತೊಂದು ನಾಟಕವಾಡಿ: ಸಿಎಂಗೆ ನೆಟ್ಟಿಗರ ಕ್ಲಾಸ್

Public TV
2 Min Read
hd kumaraswamy

ಬೆಂಗಳೂರು: ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಕ್ಕೆ ಜನ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ. ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸಿಗಬೇಕು ಎನ್ನುವ ಉದ್ದೇಶ ನನ್ನದು. ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಶುಕ್ರವಾರ ಬೆಳಗ್ಗೆ 9.45ಕ್ಕೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಪ್ರಕಟಗೊಂಡ ಬಳಿಕ ಟ್ವೀಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಆರಂಭದಲ್ಲಿ ಅಧಿಕಾರ ಸ್ವೀಕರಿಸಿದ 24 ಗಂಟೆಯ ಒಳಗಡೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಇನ್ನೂ ಘೋಷಣೆಯಾಗಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಗೋಪಿ ಬಿ.ಎನ್ ಎನ್ನುವವರು “ಸರ್ ಇನ್ನೂ ಐದು ವರ್ಷ ಟೈಮ್ ಇದೆ ಆರಾಮಾಗಿ ಸಾಲ ಮನ್ನಾ ಮಾಡಿ. ಮುಂದಿನ ಚುನಾವಣೆಯಲ್ಲಿ ಇನ್ನೊಂದು ನಾಟಕ ಮಾಡಿದರಾಯಿತು” ಎಂದು ಬರೆದು ಟಾಂಗ್ ನೀಡಿದ್ದಾರೆ.

“ಮಾನ್ಯ @ಸಿಎಂ ಆಫ್ ಕರ್ನಾಟಕ ಅವರೆ ರೈತರು ಟ್ವಿಟ್ಟರ್ ಬಳಕೆ ಮಾಡುತ್ತಾರೆಯೇ? ನೀವು ಹೇಳ ಬೇಕಾಗಿದ್ದು ರೈತರ ಮುಂದೆಯೇ ಹೊರತು ಇಲ್ಲಲ್ಲ. ದಯವಿಟ್ಟು ರಾಜ್ಯದ ಪ್ರತಿ ರೈತರಿಗೆ ತಲುಪುವ ಹಾಗೇ ಹೇಳಿ. ಅಲ್ಲದೇ ಈ ಸಾಲ ಮನ್ನಾ ಮಾಡುವ ಮೊದಲು ಹಳೇ ಸರ್ಕಾರದ ಮನ್ನಾ ಮಾಡಿರುವ ಸಾಲದ ಮೊತ್ತವನ್ನು ರೈತರ ಖಾತೆಗೆ ಹಾಕಿ ಎಂದು ಬಿಎಸ್ ರುದ್ರೇಶ್ ಟ್ವೀಟ್ ಮಾಡಿದ್ದಾರೆ.

ಏಪ್ರಿಲ್ 1 ಯಾವತ್ತೋ ಆಗಿ ಹೋಗಿದೆಯಲ್ಲ ಗುರು ಎಂದು ಜಗದೀಶ್ ಐತಳ್ ವ್ಯಂಗ್ಯವಾಡಿದ್ದಾರೆ.

https://twitter.com/GopiBN5/status/1007497143509241856

“ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ನೀವು ಕೇಳಿದ್ದ ಸಾಲ ಮನ್ನಾದ ಗಡುವನ್ನೇ ಮನ್ನಾ ಮಾಡಿಬಿಟ್ಟಿದ್ದಾರಲ್ಲ ಕುಮಾರಣ್ಣ. ಅದರ ಬಗ್ಗೆ ನೀವು ಏನಂತೀರಾ” ಎಂದು ಸುರೇಶ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿ ಅವರ ಕಾಲೆಳೆದ್ದಾರೆ.

ಕುಮಾರಣ್ಣ ಎಲ್ಲಿಯವರೆಗೆ ಬರೀ ಸಾಲಮನ್ನಾ ಮಾಡುತ್ತೀರಾ. ರೈತರೇ ಸರ್ಕಾರಕ್ಕೆ ಸಾಲ ಕೊಡುವಂತಹ ಯೋಜನೆಗಳನ್ನು ರೂಪಿಸಿ ಎಂದು ಎಂ.ಡಿ.ಮುಜೇಬ್ ವ್ಯಂಗ್ಯವಾಡಿದ್ದಾರೆ.

ಕೊಟ್ಟ ಮಾತಿಗೆ ತಪ್ಪಬೇಡಿ, ಸಾಲ ಮನ್ನಾ ಮಾಡುವುದರಿಂದ ರೈತರು ಶ್ರೀಮಂತರಾಗುವುದಿಲ್ಲ. ನಿಮ್ಮ ಹೆಸರು ಹೇಳಿಕೊಂಡು ಸ್ವಲ್ಪ ನಿಟ್ಟುಸಿರು ಬಿಡುತ್ತಾರೆ. ಸಾಲ ಮನ್ನಾ ಮಾಡಲು ಯಾವುದೇ ಜಾತಿ ರಾಜಕಾರಣ ಬೇಡ. ಬಡವರು-ಶ್ರೀಮಂತರು ಅಂತಾ ಮುಖ ನೋಡಬೇಡಿ ಎಲ್ಲರಿಗೂ ಒಂದೇ ನ್ಯಾಯ ಸಿಗಲಿ. ಇದು ನನ್ನ ಕೋರಿಕೆ ಎಂದು ಶ್ರೀನಿವಾಸ್ ಮೂರ್ತಿ ಎಚ್.ಎಂ ಬರೆದಿದ್ದಾರೆ.

ಸ್ವಲ್ಪ ಕಾಯಿರಿ ಫ್ರೆಶ್ ಎಲೆಕ್ಷನ್ ಬರುತ್ತದೆ ಎಂದು ಸುನೀಲ್ ಎಂಬವರು ಬರೆದು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *