ಗೋವಾ ಮತದಾರರು ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ: ಡಿ.ಕೆ ಶಿವಕುಮಾರ್

Public TV
1 Min Read
DK SHIVAKUMAR

ಪಣಜಿ: ಗೋವಾ ಮತದಾರರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಗೋವಾದಲ್ಲಿ ಮಾಧ್ಯಮ ಮಿತ್ರರ ಕಳೆದ ಬಾರಿ ಆದ ತಪ್ಪು ಈ ಬಾರಿ ಮರುಕಳಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಮ್ಮ ಎಲ್ಲ ಸದಸ್ಯರು ಪಕ್ಷದ ಪರ ನಿಷ್ಠೆ ತೋರಿದ್ದು, ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ. ಎಲ್ಲರೂ ಒಟ್ಟಾಗಿ ಹೋರಾಡಿದ್ದು, ಪರಿಸ್ಥಿತಿಯನ್ನು ಒಟ್ಟಾಗಿ ನಿಭಾಹಿಸುತ್ತೇವೆ ಎಂದರು.

Congress flag 2 e1573529275338

ಗೋವಾದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ಸಿಎಂ ಅವರ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅನ್ಯ ಪಕ್ಷದ ಹಾಗೂ ಆ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಖಾರವಾಗಿ ನುಡಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಭಾಷಣದ ವೇಳೆ ʼಮೋದಿ, ಮೋದಿʼ ಎಂದು ಕೂಗಿದ ಬಿಜೆಪಿ ಶಾಸಕರು

congress flag b

ಇದೇ ವೇಳೆ ಫಲಿತಾಂಶದ ದಿನ ನೀವೇ ಕೇಂದ್ರ ಬಿಂದು ಆಗಿದ್ದು ಕಳೆದ ಬಾರಿ ಆದ ತಪ್ಪು ಮರುಕಳಿಸದಂತೆ ತಡೆಯಲು ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆಯೇ ಎಂದು ಕೇಳಿದಾಗ, ಇಲ್ಲಿ ಎಲ್ಲರೂ ಪ್ರಮುಖರೇ. ನಮ್ಮ ರಾಜ್ಯದಿಂದ ಹಲವು ನಾಯಕರು ಬಂದಿದ್ದು, ನಾವು ಸಹಾಯ ಮಾಡಲು ಬಂದಿದ್ದೇವೆ ಅಷ್ಟೇ ಎಂದು ಡಿಕೆಶಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *