ಚೆನ್ನೈ: ಅಪರಾಧಿ ಶಶಿಕಲಾ ನಟರಾಜನ್ ಇದೀಗ ಚೆನ್ನೈನಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿನತ್ತ ಹೊರಟಿದ್ದಾರೆ. ಇದಕ್ಕೂ ಮುನ್ನ ಜಯಾ ಸಮಾಧಿ ಸ್ಥಳಕ್ಕೆ ತೆರಳಿದ ಶಶಿಕಲಾ ಅತ್ಯಾಪ್ತೆಗೆ ಹೂಗುಚ್ಛ ಅರ್ಪಿಸಿ ನಮಿಸಿದ್ರು. ಈ ವೇಳೆ ಮೂರು ಬಾರಿ ಶಪಥಗೈದರು.
ಶಪಥ-1: ಪಕ್ಷವನ್ನು ಕಟ್ಟೇ ಕಟ್ಟುತ್ತೇನೆ. ಶಪಥ-2: ಪಕ್ಷ ವಿರೋಧಿಗಳನ್ನು ಬಿಡಲ್ಲ. ಶಪಥ-3: ತಮಿಳರೇ ಆಳಬೇಕು, ಆಳುವಂತೆ ಮಾಡುತ್ತೇನೆ ಎಂದು ಸಮಾಧಿಗೆ ಮೂರು ಬಾರಿ ಕೈಯ್ಯನ್ನು ತಟ್ಟಿ ಶಪಥ ಮಾಡಿದ್ರು. ನಂತರ ಬೆಂಗಳೂರಿನತ್ತ ಶಶಿಕಲಾ ಹೊರಟರು.
ಮಧ್ಯಾಹ್ನದ ನಂತರ ಬೆಂಗಳೂರಿಗೆ ಬಂದು ಪರಪ್ಪನ ಅಗ್ರಹಾರದ ಆವರಣದಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಶಶಿಕಲಾ ನಟರಾಜನ್ ಶರಣಾಗಲಿದ್ದಾರೆ. ಪರಪ್ಪನ ಅಗ್ರಹಾರ ಬಳಿ ಅಣ್ಣಾಡಿಎಂಕೆ ಕಾರ್ಯಕರ್ತರು ಜಮಾಯಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಜೈಲಿನ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿದ್ದಾರೆ.