ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆಯನ್ನು ಸಿಎಂ ಮತ್ತು ಎಲ್ಲಾ ಸಚಿವರು ಬಳಸಿಕೊಳ್ಳಲಿ. ಅವರ ಮಾತುಗಳು ಟೀಕೆ ಅಲ್ಲ, ಅವು ಸಲಹೆಗಳು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಶಿಕ್ಷಣ ಖಾತೆಯನ್ನು ವಿಶ್ವನಾಥ್ ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಸರ್ಕಾರ ನಡೆಸಲು ಅವರಿಂದ ಸಿಎಂಗೆ ಒಳ್ಳೆಯ ಸಲಹೆ, ಮಾರ್ಗದರ್ಶನ ಸಿಗುತ್ತದೆ. ಅವರ ಮಾರ್ಗದರ್ಶನ ಮತ್ತು ಸಲಹೆಯನ್ನು ಸಿಎಂ ಮತ್ತು ಎಲ್ಲಾ ಸಚಿವರು ಬಳಸಿಕೊಳ್ಳಲಿ. ವಿಶ್ವನಾಥ್ ಅವರ ಮಾತುಗಳನ್ನ ಬೇರೆ ಅರ್ಥದಲ್ಲಿ ನೋಡುವುದು ಬೇಡ. ಅವರ ಮಾತುಗಳು ಟೀಕೆ ಅಲ್ಲ, ಅವು ಸಲಹೆಗಳು. ಅದನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿಶ್ವನಾಥ್ ಅವರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಆರೋಗ್ಯದ ದೃಷ್ಟಿಯಿಂದ ಅವರು ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದು ರಾಜೀನಾಮೆ ನೀಡುತ್ತಿದ್ದಾರೆ. ಆದರೆ ನಾವು ನೀವೇ ಇರಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಪ್ರಗತಿ ಪರಿಶೀಲನೆ ನಡೆಯುವ ಸ್ಥಳಕ್ಕೆ ಸಹಾಯ ಕೇಳಿ ಬಂದಿದ್ದ ಎಚ್.ಡಿ.ಕೋಟೆಯ ನಿವಾಸಿಗಿರುವ ಅಂಗವಿಕಲ ಗೋವಿಂದಪ್ಪ ಅವರಿಗೆ ಸಾ.ರಾ ಮಹೇಶ್ ಅವರು ಸಹಾಯ ಮಾಡಿದ್ದಾರೆ. ಜೀವನ ನಡೆಸಲು ಮಳಿಗೆ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಗೋವಿಂದಪ್ಪ ಸಚಿವರ ಬಳಿ ಕೋರಿಕೊಂಡರು. ಹಾಗೆಯೇ ನನ್ನ ಬೈಕ್ನ ಟೈಯರ್ ಗಳು ಹಾಳಾಗಿವೆ, ನನಗೆ ಸಹಾಯ ಮಾಡಿ ಎಂದು ಗೋವಿಂದಪ್ಪ ಕೇಳಿಕೊಂಡಾಗ ಸಚಿವರು ಬೈಕ್ಗೆ ಹೊಸ ಟೈಯರ್ ಹಾಕಿಸಿಕೊಳ್ಳಿ ಎಂದು ಹಣ ನೀಡಿ ಸಹಾಯ ಮಾಡಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]