ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 4 ಪಂದ್ಯಗಳು ಪೂರ್ಣಗೊಂಡಿದ್ದು, ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಯಾವುದೇ ಅವಕಾಶವನ್ನು ಪಡೆಯಲಿಲ್ಲ. ಕೆಎಲ್ ರಾಹುಲ್ ಆರಂಭಿಕರಾಗಿ ಮಾತ್ರವಲ್ಲದೇ ವಿಕೆಟ್ ಹಿಂದೆಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಿಷಬ್ ಪಂತ್ ಸ್ಥಾನಕ್ಕೆ ಮನೀಶ್ ಪಾಂಡೆರನ್ನು ಆಯ್ಕೆ ಮಾಡಲಾಗಿದೆ. ಆದರೆ ರಿಷಬ್ ಪಂತ್ ಕೈಬಿಡುವ ಮುನ್ನ ಆತನೊಂದಿಗೆ ಮಾತನಾಡಿದ್ದೀರಾ ಎಂದು ಸೆಹ್ವಾಗ್ ಕೊಹ್ಲಿಗೆ ಪ್ರಶ್ನೆ ಮಾಡಿದ್ದಾರೆ.
2011-12ರಲ್ಲಿ ಆಸೀಸ್ ಟೂರ್ನಿಯ ವೇಳೆ ನಿಧಾನಗತಿಯ ಫೀಲ್ಡಿಂಗ್ ಮಾಡುತ್ತಾರೆ ಎಂದು ಸೆಹ್ವಾಗ್, ಸಚಿನ್, ಗೌತಮ್ ಗಂಭೀರ್ ಅವರನ್ನು ತಂಡದ ನಾಯಕರಾಗಿದ್ದ ಧೋನಿ ರೋಟೆಶನ್ ಮಾಡಿದ್ದರು. ಆದರೆ ಈ ಬಗ್ಗೆ ಒಮ್ಮೆಯೂ ಧೋನಿ ತಂಡದ ಆಟಗಾರರ ಚರ್ಚೆಯ ಸಂದರ್ಭದಲ್ಲಿ ಧೋನಿ ಪ್ರಸ್ತಾಪ ಮಾಡಿರಲಿಲ್ಲ. ಅಲ್ಲದೇ ನೇರ ಈ ವಿಚಾರವನ್ನು ಮಾಧ್ಯಮ ಎದುರು ಹೇಳಿದ್ದರು. ಮಾಧ್ಯಮಗಳಿಂದ ಅಂದು ನಾವು ಈ ವಿಚಾರವನ್ನು ತಿಳಿದುಕೊಂಡಿದ್ದೇವು ಎಂದು ಸೆಹ್ವಾಗ್ ಹೇಳಿದ್ದಾರೆ.
ಅಂದು ತಂಡದಲ್ಲಿ ಕೇವಲ ರೊಟೇಷನ್ ಬಗ್ಗೆ ಮಾತ್ರ ಚರ್ಚೆ ನಡೆಸಿ ರೋಹಿತ್ ಶರ್ಮಾಗೆ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದರು. ಆದರೆ ನಿಧಾನಗತಿ ಫೀಲ್ಡಿಂಗ್ ಬಗ್ಗೆ ಅಲ್ಲಿಯೇ ತಿಳಿಸಿದ್ದರೆ ಉತ್ತಮವಾಗಿ ಇರುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಹಾಗೂ ನಾಯಕ ಕೊಹ್ಲಿ ನಡುವೆ ಕಮ್ಯುನಿಕೇಷನ್ ಗ್ಯಾಪ್ ಇರುವಂತಿದ್ದು. ಖಂಡಿತ ಇದು ತಪ್ಪಾಗುತ್ತದೆ. ಧೋನಿ ರೀತಿಯಂತೆಯೇ ಕೊಹ್ಲಿ ಕೂಡ ನಡೆದುಕೊಳ್ಳುತ್ತಿದ್ದರಾ ಎಂಬುವುದು ನನಗೆ ತಿಳಿದಿಲ್ಲ. ಆದರೆ ರೋಹಿತ್ ಶರ್ಮಾ ನಾಯಕರಾಗಿದ್ದ ಸಂದರ್ಭದಲ್ಲಿ ಮಾತ್ರ ಆಟಗಾರರೊಂದಿಗೆ ಹೆಚ್ಚಿನ ಮಾತುಕತೆ ನಡೆಸುತ್ತಿದ್ದರು ಎಂದು ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.