ಕಲಬುರಗಿ: ಜಿಲ್ಲೆಯಲ್ಲಿ ಕಾಡು ಹಂದಿಯೊಂದು ರೈತನ ಮೇಲೆ ಭಯಾನಕವಾಗಿ ಅಟ್ಯಾಕ್ ಮಾಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಂಚೋಳಿ ತಾಲೂಕಿನ ಸಿರೋಳಿ ತಾಂಡಾದಲ್ಲಿ ಈ ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ತಾರಾಸಿಂಗ್ ಎಂಬ ರೈತ ಸುಮಾರು 10 ರಿಂದ 15 ನಿಮಿಷ ಕಾಡು ಹಂದಿಯೊಂದಿಗೆ ಸೆಣಿಸಿದ್ದಾರೆ. ರೈತ ಸಹಾಯಕ್ಕಾಗಿ ಅಂಗಲಾಚಿದ್ದರು ಯಾರು ಮುಂದೆ ಬಂದಿರಲಿಲ್ಲ. ಆದರೆ ರೈತನನ್ನು ಅಲ್ಲಿರುವ ಶ್ವಾನಗಳ ಗುಂಪು ರಕ್ಷಣೆ ಮಾಡಿದೆ.
ಈ ದೃಶ್ಯವನ್ನು ಪಕ್ಕದ ಜಮೀನಿನಲ್ಲಿದ್ದ ರೈತರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.