ನಟ ದರ್ಶನ್ ಪ್ರಕರಣದ ಬಗ್ಗೆ ರವಿಚಂದ್ರನ್ (Ravichandran) ಪುತ್ರ ವಿಕ್ರಮ್ (Vikram) ಪ್ರತಿಕ್ರಿಯೆ ನೀಡಿದ್ದಾರೆ. ಕೇಸ್ ಕೋರ್ಟ್ನಲ್ಲಿದೆ, ತೀರ್ಪು ಬರಲಿ ಆಗ ಮಾತನಾಡೋಣ ಎಂದು ಮಾಧ್ಯಮಕ್ಕೆ ನಟ ವಿಕ್ರಮ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬ ನೋಡಿದ್ರೆ ಕರುಳು ಕಿತ್ತು ಬರುತ್ತದೆ: ವಿನೋದ್ ರಾಜ್
ನಾವಿನ್ನೂ ಈಗ ಚಿತ್ರರಂಗಕ್ಕೆ ಕಾಲಿಟ್ಟಿದ್ದೀವಿ. ಯಾರೆಲ್ಲಾ ಮಾತನಾಡಬೇಕು ಅವರೆಲ್ಲಾ ಮಾತಾಡ್ತಿದ್ದಾರೆ. ನಾನು ಅದರ ಬಗ್ಗೆ ಮಾತನಾಡಬಾರದು. ಈ ಪ್ರಕರಣ ಕೋರ್ಟ್ನಲ್ಲಿದೆ. ತೀರ್ಪು ಬರಲಿ ಆ ನಂತರ ಮಾತಾಡೋಣ ಎಂದಿದ್ದಾರೆ ವಿಕ್ರಮ್.
- Advertisement
- Advertisement
ದರ್ಶನ್ ಸರ್ ನಮಗೆ ವೃತ್ತಿಪರವಾಗಿ ಸದಾ ಬೆಂಬಲಿಸಿದ್ದಾರೆ. ನಮ್ಮ ಸಿನಿಮಾದ ಟೀಸರ್ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅವರ ವೈಯಕ್ತಿಕ ಬದುಕಿನ ಬಗ್ಗೆ ನಮಗೆ ಗೊತ್ತಿಲ್ಲ. ಇಂದಿಗೂ ಅವರ ಕುಟುಂಬದ ಜೊತೆ ನಮಗೆ ಉತ್ತಮ ಒಡನಾಟವಿದೆ. ಆದರೆ ಈ ಪ್ರಕರಣ ನಿಜಕ್ಕೂ ಏನು ಆಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದರಿಂದ ನಮ್ಮ ತಂದೆಗೂ ದುಃಖ ಆಗಿದೆ. ಈ ಪ್ರಕರಣದ ಬಗ್ಗೆ ಅಪ್ಪ ಏನೂ ಮಾತಾಡಿಲ್ಲ ಎಂದು ವಿಕ್ರಮ್ ಮಾತನಾಡಿದ್ದಾರೆ.