ಕೇಂದ್ರ ಸಚಿವರೇ ಖಡಕ್ಕಾಗಿರಿ – ಅಂಗಡಿಗೆ ಯತ್ನಾಳ್ ಸಲಹೆ

Public TV
1 Min Read
yathnal

ವಿಜಯಪುರ: ಕೇಂದ್ರ ಸಚಿವರೇ ನೀವು ಖಡಕ್ಕಾಗಿರಿ ಎಂದು ಕೇಂದ್ರ ರಾಜ್ಯ ರೈಲ್ವೇ ಸಚಿವ ಸುರೇಶ್ ಅಂಗಡಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ ನೀಡಿದರು.

ಇಂದು ವಿಜಯಪುರದಲ್ಲಿ ವಿಜಯಪುರ-ಯಶವಂತಪುರ ನೂತನ ರೈಲು ಸೇವೆ ಉದ್ಗಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಜನೋಪಯೋಗಿ ರೈಲು ಸೇವೆ ಮತ್ತು ರೈಲು ನಿಲುಗಡೆಗೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇದು ಕಾರ್ಯಸಾಧುವಲ್ಲ ಎಂದು ನೆಪ ಹೇಳುತ್ತಾರೆ. ಈ ರೀತಿಯ ಅಧಿಕಾರಿಗಳಿಗೆ ಕಿವಿಗೊಡಬೇಡಿ. ಅವರಿಗೆ ಖಡಕ್ಕಾಗಿ ಮಾಡಲೇಬೇಕೆಂದು ಸೂಚಿಸಿ ಎಂದು ಹೇಳಿದರು.

ಇದೇ ವೇಳೆ ವಿಜಯಪುರ-ಯಶವಂತಪುರ ನೂತನ ರೈಲು ವೇಳಾಪಟ್ಟಿಗೂ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ರೈಲು ಬಿಟ್ಟರೆ ಹೇಗೆ? ಇದು ಸರಿಯಿಲ್ಲ ಸಂಜೆ 7 ಗಂಟೆಗೆ ವಿಜಯಪುರದಿಂದ ರೈಲು ಹೊರಡುವಂತಾಗಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *