ವಿಜಯಪುರ: ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ. ಹಣೆಗೆ ಬಂದೂಕು ಹಚ್ಚಿ ಹೊಡೆಯುತ್ತೇನೆಂದು ವಿಜಯಪುರದಲ್ಲಿ ಭೀಮಾತೀರದ ಹಂತಕನ ಬಲಗೈ ಬಂಟ ಬಾಗಪ್ಪ ಹರಿಜನ ಅವಾಜ್ ಹಾಕಿದ್ದಾನೆ.
ಭೀಮಾತೀರದ ಹಂತಕ ಚಂದಪ್ಪ ಹರಿಜನ ಬಲಗೈ ಬಂಟನಾಗಿದ್ದ ಬಾಗಪ್ಪ ಈ ರೀತಿ ಆವಾಜ್ ಹಾಕಿದ್ದಾನೆ. ಚಂದಪ್ಪ ಹರಿಜನ ಸಂಬಂಧಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ. ಚಂದಪ್ಪನ ಸಂಬಂಧಿಕರಿಂದ ತೊಂದರೆಯಾಗುತ್ತಿದೆ ಎಂದು ಬಾಗಪ್ಪ ಆರೋಪಿಸಿದ್ದಾನೆ.
ಯಾರ ಸಹವಾಸ ಬೇಡ ಎಂದು ನಾನಿದ್ದೇನೆ. ನನ್ನ ವಿಚಾರಕ್ಕೆ ಬಂದರೆ 24 ಗಂಟೆಗಳಲ್ಲಿ ಬಂದೂಕು ಹಿಡಿಯುತ್ತೇನೆ. ಪೊಲೀಸ್ ಇಲಾಖೆ ಮತ್ತು ಸಮಾಜಕ್ಕೆ ತೊಂದರೆ ಆಗಬಾರದು ಎಂದು ಉದ್ದೇಶದಿಂದ ಎಲ್ಲ ವಿಚಾರಗಳಿಂದಲೂ ದೂರವಾಗಿದ್ದೇನೆ. ಈ ಬದಲಾವಣೆಯನ್ನು ನನ್ನ ಅಶಕ್ತನೆಂದು ತಿಳಿಯಬೇಡಿ ಎಂದು ಬಾಗಪ್ಪ ವೈರಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾನೆ.