ಬಡ್ಡಿ ದಂಧೆಕೋರರ ಕಿರಿಕ್-ಸಂಭ್ರಮದ ಮನೆಯಲ್ಲಿ ಆವರಿಸ್ತು ಸೂತಕದ ಛಾಯೆ

Public TV
1 Min Read
BIJ STUDENT 1

ವಿಜಯಪುರ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಬಡ್ಡಿ ದಂಧೆಕೋರರ ಕಿರುಕುಳ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಮಲ್ಲಿಕಾರ್ಜುನ್ ಜೇವೂರಕರ್ ಸಾವನ್ನಪ್ಪಿದ ವ್ಯಕ್ತಿ. ದಂಪತಿ ಜೊತೆಯಲ್ಲಿ ನೇಣು ಹಾಕಿಕೊಂಡಿದ್ದರು. ಆದರೆ ಪತ್ಮಿ ಲಕ್ಷ್ಮಿ ಹಗ್ಗ ತುಂಡಾಗಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ. ಮದುವೆ ವಾರ್ಷಿಕೋತ್ಸವಕ್ಕೆ ದಂಪತಿ ಸಿದ್ಧತೆ ನಡೆಸಿಕೊಂಡಿದ್ದರು. ಮನೆ ಬಳಿ ಬಂದ ಬಡ್ಡಿ ದಂಧೆಕೋರರು ಗಲಾಟೆ ಮಾಡಿದ್ದರು. ಇದರಿಂದ ಮನನೊಂದ ದಂಪತಿ ಆತ್ಮಹತ್ಯೆಗೆ ಮುಂದಾಗಿದ್ದರು.

BIJ STUDENT 2

ದಂಪತಿ ನಗರದ ಉಪಲಿ ಬುರ್ಜ್ ಬಳಿ 7 ವರ್ಷಗಳಿಂದ ಊಟದ ಮೆಸ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಮೆಸ್‍ಗೆ ಹೆಚ್ಚಿನ ಬಂಡವಾಳ ಹಾಕಿ ದೊಡ್ಡ ಪ್ರಮಾಣದಲ್ಲಿ ಬೆಳೆಸಲು ನಿರ್ಧರಿಸಿ ಅದಕ್ಕಾಗಿ ಸಾಲ ಮಾಡಿದ್ದರು. ಆದರೆ ಸರಿಯಾದ ಸಮಯಕ್ಕೆ ಸಾಲ ತೀರಿಸಲಾಗದ ಕಾರಣ, ಬಡ್ಡಿ ದಿನದಿಂದ ದಿನಕ್ಕೆ ಬೆಳೆದಿತ್ತು. ಈ ಸಮಯಕ್ಕೆ ಬಡ್ಡಿದಂಧೆಕೋರರ ಕಿರಿಕ್ ಶುರುವಾಗಿತ್ತು.

ಸಾಲ ನೀಡಿದ್ದವರು ಮನೆ ಬಳಿ ಬಂದು ಗಲಾಟೆ ಮಾಡಿದ್ದರು. ಇದರಿಂದ ಮನನೊಂದ ಮಲ್ಲಿಕಾರ್ಜುನ್, ಪತ್ನಿ ಲಕ್ಷ್ಮಿ ಜೊತೆ ನೇಣುಬಿಗಿದುಕೊಂಡಿದ್ದಾರೆ. ಆದರೆ ಲಕ್ಷ್ಮಿ ಅವರ ಹಗ್ಗ ತುಂಡಾದ ಕಾರಣ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಆದರೆ ಪತಿ ಮಲ್ಲಿಕಾರ್ಜುನ್ ಸಾವನ್ನಪ್ಪಿದ್ದಾರೆ.

BIJ STUDENT 3

ಸ್ವಲ್ಪ ಸಮಯ ಕೊಡಿ ಅಂತ ಕೇಳಿಕೊಂಡ್ರೂ ಕೇಳದ ದಂಧೆಕೋರರು, ನಿನ್ನ ಹೆಂಡ್ತಿನ ಕಳುಹಿಸು ಅಂತ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ರಂತೆ. ಬಡ್ಡಿದಂಧೆಕೋರರ ಕಿರುಕುಳವೇ ನನ್ನ ಮಗನ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮೀಟರ್ ಬಡ್ಡಿದಂದೆಕೋರರ ಹಾವಳಿ ಮಿತಿಮೀರಿದೆ. ಇದನ್ನ ತಡೆಯಬೇಕಾಗಿರುವ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇನ್ನಾದರೂ ಇಂತಹ ಘಟನೆ ಮರುಕಳಿಸದಂತೆ ಜಾಗೃತ ವಹಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *