ಬಳ್ಳಾರಿ: ಕುರುಕ್ಷೇತ್ರ ಚಿತ್ರದಲ್ಲಿ ದುಯೋರ್ಧನನಾಗಿ ಅಭಿನಯಿಸಿರುವ ನಟ ದರ್ಶನ್ ಮುಂದೆ ಶ್ರೀಕೃಷ್ಣದೇವರಾಯನ ಅವತಾರ ಎತ್ತಲಿದ್ದಾರೆ.
ನಟ ಸೌರ್ವಭಾಮ ರಾಜಕುಮಾರ್ ಅವರ ಬಳಿಕ ಶ್ರೀಕೃಷ್ಣ ದೇವರಾಯನಾಗಿ ನಟ ದರ್ಶನ್ ಅಭಿನಯಿಸುವುದು ಪಕ್ಕಾ ಆಗಿದೆ. ಹಂಪಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಟ ದರ್ಶನ ಶ್ರೀಕೃಷ್ಣ ದೇವರಾಯ ಪಾತ್ರ ಮಾಡುವ ಮನದಾಸೆ ಹೊರಹಾಕಿದ್ದು, ಇದೇ ವೇಳೆ ನಿರ್ಮಾಪಕ ಮುನಿರತ್ನ ಶ್ರೀಕೃಷ್ಣ ದೇವರಾಯರ ಬಗ್ಗೆ ಚಿತ್ರ ನಿರ್ಮಾಣ ಮಾಡುವೆ ಎಂದು ಖಚಿತ ಪಡಿಸಿದ್ದಾರೆ. ಇದನ್ನು ಓದಿ: ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಿಸಿರುವ ಹಂಪಿಯ ಶಿಲ್ಪಗಳನ್ನ ನೂರು ವರ್ಷವಾದ್ರೂ ನಿರ್ಮಿಸಲು ಆಗಲ್ಲ. ಆ ಸ್ಮಾರಕಗಳನ್ನ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಬೇಕೆಂದು ದರ್ಶನ್ ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ನಿರ್ಮಾಪಕ ಮುನಿರತ್ನ ಶ್ರೀಕೃಷ್ಣ ದೇವರಾಯನ ಬಗ್ಗೆ ಚಿತ್ರ ನಿರ್ಮಾಣ ಮಾಡುವೆ. ಮುತ್ತುರತ್ನಗಳನ್ನ ಮಾರಾಟ ಮಾಡುವ ಕಾಲ. ನ್ಯಾಯ ಅನ್ಯಾಯದ ಕಾಲದ ಬಗ್ಗೆ ರಾಜ್ಯದ ಜನರಿಗಾಗಿ ಚಿತ್ರ ಮಾಡುವೆ. ಶ್ರೀಕೃಷ್ಣ ದೇವರಾಯನಾಗಿ ನಟ ದರ್ಶನ್ ಅಭಿನಯಿಸಲಿದ್ದಾರೆಂದು ಘೋಷಿಸಿದರು.
ಹಂಪಿ ಉತ್ಸಾವ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಶ್ರೀಕೃಷ್ಣ ದೇವರಾಯನ ಬಗ್ಗೆ ಚಿತ್ರ ನಿರ್ಮಾಣ ಮಾಡಿದರೆ, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv