ಬನಶಂಕರಿ ದೇವಿ ಪ್ರಸಾದದೊಂದಿಗೆ ದರ್ಶನ್ ನೋಡಲು ಜೈಲಿಗೆ ಬಂದ ಪತ್ನಿ

Public TV
1 Min Read
vijayalakshmi

ಕೊಲೆ ಪ್ರಕರಣದ (Renukaswamy Murder Case) ಸಂಬಂಧ ಕಳೆದ 45 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ (Darshan) ನೋಡಲು ಬನಶಂಕರಿ ದೇವಿ ಪ್ರಸಾದದೊಂದಿಗೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಆಗಮಿಸಿದ್ದಾರೆ. ಇದನ್ನೂ ಓದಿ:ದುಬಾರಿ ದಂಡ ತೆತ್ತ ಚಿತ್ರತಂಡ- ಇಳಯರಾಜಗೆ 60 ಲಕ್ಷ ನೀಡಿದ ‘ಮಂಜುಮ್ಮೆಲ್ ಬಾಯ್ಸ್’

darshan 1 2

ನಿನ್ನೆ (ಆ.4) ಭೀಮನ ಅಮವಾಸ್ಯೆ ನಿಮಿತ್ತ ಶಕ್ತಿ ದೇವತೆ ಬನಶಂಕರಿ ದೇವಸ್ಥಾನದಲ್ಲಿ (Banashankari Temple) ಸಂಕಲ್ಪ ಪೂಜೆ ಮಾಡಿಸಿದ್ದರು. ಈ ಹಿನ್ನೆಲೆ ದೇವಿ ಪ್ರಸಾದ ಹಿಡಿದು ದಿನಕರ್ ತೂಗುದೀಪ್ ಜೊತೆ ಮತ್ತೆ ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ.

ಅಂದಹಾಗೆ, ಕಳೆದ ವಾರ ದರ್ಶನ್ ಸಂಕಷ್ಟವೆಲ್ಲಾ ನಿವಾರಣೆ ಆಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕೆ ತಾಯಿಗೆ ಚಂಡಿಕಾ ಯಾಗ ಮಾಡಿಸಿದ್ದರು.

Share This Article