Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೇವಲ ಬುದ್ಧಿವಂತಿಕೆ ಪ್ರದರ್ಶನಕ್ಕೆ ಸ್ಪೀಕರ್ ಚೇರ್ ಇಲ್ಲ: ರಮೇಶ್ ಕುಮಾರ್‌ಗೆ ಕಾಗೇರಿ ಟಾಂಗ್

Public TV
Last updated: October 11, 2019 5:27 pm
Public TV
Share
3 Min Read
kageri Ramesh kumar
SHARE

– ಮಾಜಿ-ಹಾಲಿ ಸ್ಪೀಕರ್ ವಾಕ್ ಸಮರ
– ರಮೇಶ್ ಕುಮಾರ್ ಏನ್ ಹೇಳುತ್ತಾರೋ ಅದೇ ಸರ್ವಶ್ರೇಷ್ಠ
– ಸದನದಲ್ಲಿ ಕಿಡಿಕಾರಿದ ಈಶ್ವರಪ್ಪ

ಬೆಂಗಳೂರು: ವಿಧಾನಸಭಾ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಹಾಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ವಾಕ್ ಸಮರವೇ ನಡೆಯಿತು.

ನೆರೆ ಪರಿಹಾರ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುದೀರ್ಘ ಚರ್ಚೆ ನಡೆಸಿದರು. ಇದರಿಂದಾಗಿ ಸ್ಪೀಕರ್ ಕಾಗೇರಿ ಆಗಾಗ ಸಾಕು ಚರ್ಚೆ ನಿಲ್ಲಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ ಅವರು ಮಾತು ಮುಂದುವರಿಸಿದರು.

Siddu

ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಳ್ಳುವ ತಾಯಿ ಹೃದಯದ ನಾಯಕರು ಬೇಕಾಗಿದ್ದಾರೆ. ಆದಷ್ಟು ಬೇಗ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ಸ್ಪೀಕರ್ ಕಾಗೇರಿ ಅವರು ಮತ್ತೆ ಸಾಕು ನಿಮ್ಮ ಮಾತು ನಿಲ್ಲಿಸಿ ಎಂದು ಸೂಚನೆ ನೀಡಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ನೀವು ಈ ರೀತಿ ಮಾತು ನಿಲ್ಲಿಸಿ ಎಂದು ಪದೇ ಪದೇ ಹೇಳುವುದು ಸರಿಯಲ್ಲ. ನಾನು ವಿಪಕ್ಷ ನಾಯಕ ಕೊನೆಗೆ ಬಂದಿದ್ದೇನೆ, ಮಾತನಾಡುತ್ತೇನೆ ಅಂತ ಗುಡುಗಿದರು.

ಸರಿ, ಸರಿ ಎನ್ನುತ್ತಲೇ ಸ್ಪೀಕರ್, ನೀವು ಇಷ್ಟುದ್ದ ಮಾತನಾಡಬಾರದು ಎಂದು ಹೇಳಿದರು. ಸ್ಪೀಕರ್ ಕಾಗೇರಿ ಅವರನಡೆಯಿಂದ ಗರಂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯನವರೇ ಸ್ಪೀಕರ್ ಅವರಿಂದ ಕುಳಿತುಕೊಳ್ಳುವಂತೆ ಆದೇಶ ಬಂದರೇ ಸಾಕು ಕುಳಿತುಬಿಡಿ. ಇದು ಸರಿಯಾದ ವಿಧಾನ ಎಂದು ಕುಟುಕಿದರು.

Ramesh kumar

ಸ್ಪೀಕರ್ ಚೇರ್‍ಗೆ ನಮ್ರತೆ ಇರುತ್ತದೆ. ನೀವು ಈ ರೀತಿ ಕುಳಿತುಕೊಳ್ಳಿ ಅಂತ ಪದೇ ಪದೇ ಹೇಳುವುದು ಸರಿಯಲ್ಲ ಎಂದು ರಮೇಶ್ ಕುಮಾರ್ ಧ್ವನಿ ಏರಿಸಿದರು. ಆಗ ಕಾಗೇರಿ, ಸ್ಪೀಕರ್ ಸ್ಥಾನದಿಂದ ಬಂದ ಸೂಚನೆಯನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿರುಗೇಟು ನೀಡಿದರು. ವಾಕ್ ಸಮರ ಜೋರಾಗುತ್ತಿದ್ದಂತೆ, ನಾನು ಯಾವತ್ತೂ ಯಾವುದೇ ವಿರೋಧ ಪಕ್ಷದ ನಾಯಕರಿಗೂ ಮಾತು ಮುಗಿಸಿ ಎಂದು ಒತ್ತಾಯ ಮಾಡಿಲ್ಲ ಅಂತ ರಮೇಶ್ ಕುಮಾರ್ ಕುಟುಕಿದರು.

ಹೌದ.. ಹೌದು.. ಇಲ್ಲಿ ಕುಳಿತವರು ಯಾವ ಸಂದರ್ಭದಲ್ಲಿ ವಿಪಕ್ಷ ನಾಯಕರನ್ನು ಎಷ್ಟು ಬಾರಿ ಹೇಳಿ ಕೂರಿಸಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ. ಕೇವಲ ಬುದ್ಧಿವಂತಿಕೆ ಪ್ರದರ್ಶನ ಮಾಡಲಿಕ್ಕೆ ಸ್ಪೀಕರ್ ಚೇರ್ ಇಲ್ಲ. ಇಲ್ಲಿ ಬಂದು ಯಾರು ಎಷ್ಟು ಬುದ್ಧಿವಂತಿಕೆ ತೋರಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ ಎಂದು ಕಾಗೇರಿ, ರಮೇಶ್ ಕುಮಾರ್ ಅವರಿಗೆ ಟಾಂಗ್ ಕೊಟ್ಟರು.

kageri

ಈ ಬೆಳವಣಿಗೆಯಿಂದಾಗಿ ಸದನದಲ್ಲಿ ಗಲಾಟೆ ಆರಂಭವಾಯಿತು. ತಕ್ಷಣವೇ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ರಮೇಶ್ ಕುಮಾರ್ ಏನು ಹೇಳುತ್ತಾರೋ ಅದೇ ಸರ್ವಶ್ರೇಷ್ಠ. ಅಧ್ಯಕ್ಷ ಸ್ಥಾನದಲ್ಲಿ ಕುಳಿತಾಗ ಒಂದು ಮಾತು, ಕೆಳಗೆ ಕುಳಿತಾಗ ಮತ್ತೊಂದು ಮಾತು ಎಂದು ಕಿಡಿಕಾರಿದರು. ಈ ಮಧ್ಯೆ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯನವರೇ ನೀವು ಮಾತು ಮುಂದುವರಿಸಿ, ನನಗೆ ಸಮಯ ಮುಖ್ಯ ಎಂದು ಸೂಚನೆ ನೀಡಿದರು.

ಅದು ವಿಪಕ್ಷ ಸ್ಥಾನವೇ ಹೊರತು ಸಿದ್ದರಾಮಯ್ಯ ಅಲ್ಲ. ಈ ರೀತಿ ಸಮಯ ಹಾಗೂ ಆಮೇಲೆ ಮಾತನಾಡಿ ಎನ್ನುವುದು ಸರಿಲ್ಲ ಎಂದು ರಮೇಶ್ ಕುಮಾರ್ ಮತ್ತೆ ಗುಡುಗಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸ್ಪೀಕರ್, ರಮೇಶ್ ಕುಮಾರ್ ಅವರೇ ನೀವು ಅಲ್ಲಿ ಕುಳಿತು ಹೇಳಬೇಡಿ. ನಿಯಮಾವಳಿ ಪುಸ್ತಕ ನನ್ನ ಬಳಿಯೇ ಇದೆ. ಎಲ್ಲವನ್ನೂ ನಿಮಗೆ ಹೇಳಿದ್ದೇನೆ ಅಂತ ಯಾಕೆ ಹೆಗಲು ತಟ್ಟಿಕೊಳ್ಳುತ್ತೀರಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯನವರೇ ನೀವು ಮಾತನಾಡಿ. ನೀವು ಒಬ್ಬರೇ 5 ಗಂಟೆಗಳ ಕಾಲ ಮಾತನಾಡಿದರೆ ಉಳಿದವರಿಗೆ ಅವಕಾಶ ಸಿಗುತ್ತಾ? ಮಾತನಾಡಬೇಕು ಎನ್ನುವವರಿಗೆ ಏನು ಹೇಳಲಿ ಎಂದು ಸ್ಪೀಕರ್ ಅಸಮಾಧಾನ ಹೊರ ಹಾಕಿದರು.

TAGGED:Public TVRamesh Kumarsiddaramaiahspeakervidhan sabha sessionVishweshwar Hegde Kageriಪಬ್ಲಿಕ್ ಟಿವಿಮಾಜಿ ಸ್ಪೀಕರ್ರಮೇಶ್ ಕುಮಾರ್ವಿಶ್ವೇಶ್ವರ್ ಹೆಗಡೆ ಕಾಗೇರಿಸಿದ್ದರಾಮಯ್ಯಸ್ಪೀಕರ್
Share This Article
Facebook Whatsapp Whatsapp Telegram

You Might Also Like

Karnataka BJP rebels meeting V Somanna
Karnataka

ಮನೆಯೊಂದು ಮೂರು ಬಾಗಿಲು – ಶಾ ರಾಜ್ಯ ಭೇಟಿ ಸಂದರ್ಭದಲ್ಲೇ ಬಿಜೆಪಿ ಭಿನ್ನಮತ ತಾರಕಕ್ಕೆ!

Public TV
By Public TV
17 minutes ago
Women tea workers pluck tea leaves
Latest

ಇರಾನ್‌ – ಇಸ್ರೇಲ್‌ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ

Public TV
By Public TV
46 minutes ago
Amit Shah BGS Medical College Adichunchanagiri Mutt 1
Bengaluru City

ಬಿಜಿಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟಿಸಿದ ಅಮಿತ್ ಶಾ – ಶ್ರೀಗಳ ಸೇವೆಗೆ ಶ್ಲಾಘನೆ

Public TV
By Public TV
2 hours ago
Fishermens boat
Latest

ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬೋಟ್ ವಶಕ್ಕೆ – ನೌಕಾದಳದಿಂದ ಆರು ಮೀನುಗಾರರ ಬಂಧನ

Public TV
By Public TV
2 hours ago
Raichuru Temple
Karnataka

ಕೃಷ್ಣಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣ – ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಭಾಗಶಃ ಮುಳುಗಡೆ

Public TV
By Public TV
2 hours ago
basanagouda patil yatnal 1
Districts

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದ್ದು, ಸದ್ಯ ಐಸಿಯುಲ್ಲಿದೆ – ಯತ್ನಾಳ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?