Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

Public TV
Last updated: December 20, 2017 3:50 pm
Public TV
Share
3 Min Read
jayalalitha 1
SHARE

ಬೆಂಗಳೂರು: ರಾಧಾಕೃಷ್ಣ ನಗರ ಉಪಚುನಾವಣೆಗೆ ಮುನ್ನ ಜಯಲಲಿತಾ ಆಸ್ಪತ್ರೆಯಲ್ಲಿರುವ ವಿಡಿಯೋ ಪ್ರಕಟವಾಗಿದ್ದು ತಮಿಳುನಾಡು ರಾಜಕೀಯದಲ್ಲಿ ಈಗ ಬಿರುಗಾಳಿ ಎದ್ದಿದೆ.

ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಜಯಲಲಿತಾ ಮೃತಪಟ್ಟಿದ್ದರು ಎನ್ನುವ ಅಂತ ಕಂತೆಗಳ ಸುದ್ದಿಗೆ ತಿರುಗೇಟು ಎನ್ನುವಂತೆ, ಜೊತೆಗೆ ಅಮ್ಮ ಅಭಿಮಾನಿಗಳನ್ನು ಭಾವನಾತ್ಮಕವಾಗಿ ಸೆಳೆಯಲು ಶಶಿಕಲಾ ಬಣ ಈಗ ವಿಡಿಯೋ ರಿಲೀಸ್ ಮಾಡಿದೆ.

ತಮಿಳುನಾಡು ಚುನಾವಣೆಯಲ್ಲಿ ವಿಡಿಯೋ ಮತ್ತು ಫೋಟೋಗಳು ಸದ್ದುಮಾಡುವುದು ಇದೇ ಮೊದಲಲ್ಲ. ಜಯಲಲಿತಾ ಅವಧಿಯಲ್ಲೂ ಸದ್ದು ಮಾಡಿತ್ತು. ಅಷ್ಟೇ ಅಲ್ಲದೇ ಜಯಲಲಿತಾ ಚುನಾವಣೆ ಗೆಲ್ಲಲು ವಿಡಿಯೋ ಮತ್ತು ಫೋಟೋಗಳು ನೆರವಾಗಿತ್ತು. ಅದರಲ್ಲೂ 1991ರಲ್ಲಿ ಫೋಟೋದಿಂದಾಗಿ ಎದ್ದ ಅನುಕಂಪದ ಅಲೆಯಿಂದಾಗಿ ಜಯ ಜಯಭೇರಿ ಬಾರಿಸಿದ್ದರು.

1982ರಲ್ಲಿ ಜಯಲಲಿತಾ ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು. ಇಂಗ್ಲೀಷ್‍ನಲ್ಲಿ ಉತ್ತಮ ಹಿಡಿತ ಹೊಂದಿದ್ದ ಕಾರಣ ಜಯಲಲಿತಾರನ್ನು ಎಂಜಿ ರಾಮಚಂದ್ರನ್ ರಾಜ್ಯಸಭೆಗೆ ಕಳುಹಿಸಿದ್ದರು. 1984 ರಾಮಚಂದ್ರನ್ ಆರೋಗ್ಯ ಹದೆಗೆಟ್ಟಾಗ ಜಯಲಲಿತಾ ಕಾಂಗ್ರೆಸ್ ಸಹಕಾರವನ್ನು ಪಡೆದು ಪಕ್ಷವನ್ನು ಮುನ್ನಡೆಸಿದ್ದರು. 1987ರ ಆಗಸ್ಟ್ 24 ರಂದು ತಮ್ಮ 70ನೇ ವಯಸ್ಸಿನಲ್ಲಿ ಎಂಜಿ ರಾಮಚಂದ್ರನ್ ವಿಧಿವಶರಾದರು.

ನಿಧನದ ಸುದ್ದಿ ಕೇಳಿ ಜಯಲಲಿತಾ ಎಂಜಿಆರ್ ನಿವಾಸಕ್ಕೆ ಧಾವಿಸಿದ್ದರು. ಆದರೆ ಅಲ್ಲಿ ಅವರಿಗೆ ಪ್ರವೇಶ ಸಿಕ್ಕಿರಲಿಲ್ಲ. ರಾಜಾಜಿಹಾಲ್ ನಲ್ಲಿ ಎಂಜಿಆರ್ ಪಾರ್ಥಿವ ಶರೀರದ ಮುಂದೆ 2 ದಿನ ಮೌನವಾಗಿ ಜಯಲಲಿತಾ ನಿಂತಿದ್ದರು. ಶವಸಂಸ್ಕಾರ ಮೆರವಣಿಗೆ ವಾಹನ ಏರಲು ಜಯ ಮೇಲಕ್ಕೆ ಹತ್ತಿದ್ದಾಗ ಕೆಲ ಶಾಸಕರು ಹಾಗೂ ಎಂಜಿಆರ್ ಪತ್ನಿ ಜಾನಕಿ ಸಂಬಂಧಿಕರು, ಹಿಯಾಳಿಸಿ ವಾಹನದಿಂದ ಕೆಳಕ್ಕೆ ದೂಡಿದರು. ಜಯಲಲಿತಾರನ್ನು ಕೆಳಕ್ಕೆ ದೂಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಅಂದೇ ಬಾರಿ ಸದ್ದು ಮಾಡಿತ್ತು.

ಎಂಜಿಆರ್ ನಿಧನದ ಬಳಿಕ ಪಕ್ಷ ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ಬಣಗುತ್ತದೆ. ಜಾನಕಿ ರಾಮಚಂದ್ರನ್ 1988ರಲ್ಲಿ 96 ಮಂದಿ ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ವಿಧಾನಸಭೆಯಲ್ಲೂ ಬಹುಮತವನ್ನು ಸಾಬೀತು ಪಡಿಸುವಲ್ಲೂ ಯಶಸ್ವಿ ಆಗುತ್ತಾರೆ. ಆದರೆ ಪ್ರಧಾನಿ ರಾಜೀವ್ ಗಾಂಧಿ 356ನೇ ವಿಧಿಯನ್ನು ಬಳಸಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುತ್ತಾರೆ.

1989ರಲ್ಲಿ ಮೊದಲ ಬಾರಿಗೆ ಜಯಲಲಿತಾ ಶಾಸಕಿಯಾಗಿ ಆಯ್ಕೆ ಆಗುತ್ತಾರೆ. ಜಯಲಲಿತಾ ಸಾರಥ್ಯದಲ್ಲಿ ಎಐಎಡಿಎಂಕೆ 27 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಈ ಮೂಲಕ ಜಯಲಲಿತಾ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಆಗುತ್ತಾರೆ. ಈ ವೇಳೆ ಪಕ್ಷಕ್ಕೆ ಎರಡು ಎಲೆಯ ಚಿಹ್ನೆಯನ್ನು ಸೇರಿಸುತ್ತಾರೆ. ಎಂಜಿಆರ್ ಅಂತ್ಯಕ್ರಿಯೆ ವೇಳೆ ಸೆರೆಯಾದ ಫೋಟೋ ಮತ್ತು ವಿಡಿಯೋ ಜಯ ಗೆಲುವಿಗೆ ಸಹಕಾರಿ ಆಯ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

jayalalitha 1989

ಹರಿದ ಸೀರೆ ಫೋಟೋದಿಂದ ಗೆಲುವು!
ಮಾರ್ಚ್, 25 1989ರಂದು ತಮಿಳುನಾಡಿನ ವಿಧಾನಸೌಧದ ಒಳಗಡೆ ಚರ್ಚೆಯ ವೇಳೆ ಆಡಳಿತ ಪಕ್ಷ ಡಿಎಂಕೆ ಮತ್ತು ವಿರೋಧ ಪಕ್ಷದ ಶಾಸಕರ ಮಧ್ಯೆ ಗಲಾಟೆ ನಡೆಯುತ್ತದೆ. ಈ ವೇಳೆ ಜಯಲಲಿತಾ ಅವರನ್ನು ಡಿಎಂಕೆ ಸದಸ್ಯರು ನಿಂದಿಸುತ್ತಾರೆ. ಅವರ ಮೇಲೆ ದಾಳಿ ಮಾಡುತ್ತಾರೆ. ಈ ದಾಳಿಯ ವೇಳೆ ಜಯಲಲಿತಾ ಅವರ ಸೀರೆ ಹರಿದುಹೋಗುತ್ತದೆ. ಹರಿದ ಸೇರೆಯೊಂದಿಗೆ, ಆಳುತ್ತಾ ಸದನದದಿಂದ ಹೊರ ಬರುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಈ ಫೋಟೋ ನೋಡಿದ ಜನತೆ ಜಯಲಲಿತಾ ಪರ ವಾಲುತ್ತಾರೆ. “ಮಹಾಭಾರತದಲ್ಲಿ ತುಂಬಿದ ಸಭೆಯಲ್ಲಿ ದ್ರೌಪದಿಗೆ ಹೇಗೆ ಅಪಮಾನವಾಗುತ್ತದೋ ಅದೇ ರೀತಿಯಾಗಿ ಡಿಎಂಕೆ ನಾಯಕರು ಜಯಲಲಿತಾಗೆ ಅಪಮಾನ ಮಾಡಿದ್ದಾರೆ” ಎಂದು ಜಯ ಪರ ನಾಯಕರು ಪ್ರಚಾರ ಮಾಡುತ್ತಾರೆ. ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಹೊರತು ನಾನು ಸದನವನ್ನು ಪ್ರವೇಶ ಮಾಡುವುದಿಲ್ಲ ಎಂದು ಜಯ ಪ್ರತಿಜ್ಞೆ ಮಾಡುತ್ತಾರೆ. ಈ ಎಲ್ಲ ಘಟನೆಗಳು ನಡೆದ ಬಳಿಕ 1989ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಎಐಡಿಎಂಕೆ ಮೈತ್ರಿಕೂಟ 39 ಸ್ಥಾನಗಳಲ್ಲಿ 38ರಲ್ಲಿ ಗೆಲುವು ಸಾಧಿಸುತ್ತದೆ.

1991ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಯಾ ಪಕ್ಷ 164 ಸ್ಥಾನಗಳನ್ನು ಗೆಲ್ಲುತ್ತದೆ. ಮಿತ್ರ ಪಕ್ಷವಾದ ಕಾಂಗ್ರೆಸ್ 60ರಲ್ಲಿ ಜಯಗಳಿಸುತ್ತದೆ. ಒಟ್ಟು 234 ಕ್ಷೇತ್ರಗಳಲ್ಲಿ ಜಯಾ – ಕಾಂಗ್ರೆಸ್ ಮೈತ್ರಿಕೂಟ 224 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಭರ್ಜರಿ ಬಹುಮತ ಪಡೆದು ಜಯಲಲಿತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.

ಈಗ ಆರ್.ಕೆ ನಗರದ ಉಪಚುನಾವಣೆಗೂ ಮುನ್ನ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಡಿಸೆಂಬರ್ 24ರ ಫಲಿತಾಂಶ ಬಂದಾಗ ತಿಳಿಯಲಿದೆ.

 

jayalalitha hospital

https://www.youtube.com/watch?v=gZTeqiaWTh4&feature=youtu.be

Jayalalithaa Dead Body At Rajaji 01

jayalalitha death 2

jayalalitha death 3

jayalalitha death 4

jayalalitha death 5

jayalalitha death 1

jayalalitha

jayalalitha 1

jayalalitha died official announcement declared heart breaking news to amma followers

TAGGED:congresselectionjayalalithaaPublic TVtamil naduಕಾಂಗ್ರೆಸ್ಚುನಾವಣೆಜಯಲಲಿತಾತಮಿಳುನಾಡುಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema Updates

ranjani raghavan
ಗೆಳೆಯನ ಜೊತೆ ರಂಜನಿ ರಾಘವನ್ ಲಾಂಗ್ ಡ್ರೈವ್
11 minutes ago
hamsalekha
ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ
13 hours ago
Ramya Kamal Hassan 2
ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ
16 hours ago
Kamal Haasan Karave Protest Film Chamber
ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ
17 hours ago

You Might Also Like

Abdul Rahim Murder
Crime

ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ | ಮತ್ತಿಬ್ಬರು ಆರೋಪಿಗಳು ಅರೆಸ್ಟ್‌ – ಹತ್ಯೆಗೆ ಕಾರಣವೇ ಇನ್ನೂ ಸಸ್ಪೆನ್ಸ್!‌

Public TV
By Public TV
48 minutes ago
Punjab Firecracker Factory 2
Crime

ಪಂಜಾಬ್‌ನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಐವರು ಸಾವು, 25 ಮಂದಿಗೆ ಗಾಯ

Public TV
By Public TV
1 hour ago
Bengaluru
Bengaluru City

ಸಲೂನ್‌ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್‌ನಿಂದ ದಾಂಧಲೆ – ಮೂವರು ಅರೆಸ್ಟ್‌

Public TV
By Public TV
1 hour ago
Pakistan Spy 2
Crime

ಬೇಹುಗಾರಿಕೆಗಾಗಿ ಭಾರತೀಯ ಮೊಬೈಲ್‌ ಸಿಮ್‌ ಕಾರ್ಡ್‌ ಪೂರೈಸುತ್ತಿದ್ದ ಪಾಕ್‌ ಸ್ಪೈ ಅರೆಸ್ಟ್‌

Public TV
By Public TV
2 hours ago
KRS Dam
Districts

ನಾಲ್ಕೇ ದಿನಕ್ಕೆ KRSನಲ್ಲಿ 11 ಅಡಿ ನೀರು ಹೆಚ್ಚಳ – ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ!

Public TV
By Public TV
2 hours ago
HS Venkata murty
Bengaluru City

ಕನ್ನಡದ ಖ್ಯಾತ ಕವಿ ಹೆಚ್.ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?