ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

Public TV
3 Min Read
jayalalitha 1

ಬೆಂಗಳೂರು: ರಾಧಾಕೃಷ್ಣ ನಗರ ಉಪಚುನಾವಣೆಗೆ ಮುನ್ನ ಜಯಲಲಿತಾ ಆಸ್ಪತ್ರೆಯಲ್ಲಿರುವ ವಿಡಿಯೋ ಪ್ರಕಟವಾಗಿದ್ದು ತಮಿಳುನಾಡು ರಾಜಕೀಯದಲ್ಲಿ ಈಗ ಬಿರುಗಾಳಿ ಎದ್ದಿದೆ.

ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಜಯಲಲಿತಾ ಮೃತಪಟ್ಟಿದ್ದರು ಎನ್ನುವ ಅಂತ ಕಂತೆಗಳ ಸುದ್ದಿಗೆ ತಿರುಗೇಟು ಎನ್ನುವಂತೆ, ಜೊತೆಗೆ ಅಮ್ಮ ಅಭಿಮಾನಿಗಳನ್ನು ಭಾವನಾತ್ಮಕವಾಗಿ ಸೆಳೆಯಲು ಶಶಿಕಲಾ ಬಣ ಈಗ ವಿಡಿಯೋ ರಿಲೀಸ್ ಮಾಡಿದೆ.

ತಮಿಳುನಾಡು ಚುನಾವಣೆಯಲ್ಲಿ ವಿಡಿಯೋ ಮತ್ತು ಫೋಟೋಗಳು ಸದ್ದುಮಾಡುವುದು ಇದೇ ಮೊದಲಲ್ಲ. ಜಯಲಲಿತಾ ಅವಧಿಯಲ್ಲೂ ಸದ್ದು ಮಾಡಿತ್ತು. ಅಷ್ಟೇ ಅಲ್ಲದೇ ಜಯಲಲಿತಾ ಚುನಾವಣೆ ಗೆಲ್ಲಲು ವಿಡಿಯೋ ಮತ್ತು ಫೋಟೋಗಳು ನೆರವಾಗಿತ್ತು. ಅದರಲ್ಲೂ 1991ರಲ್ಲಿ ಫೋಟೋದಿಂದಾಗಿ ಎದ್ದ ಅನುಕಂಪದ ಅಲೆಯಿಂದಾಗಿ ಜಯ ಜಯಭೇರಿ ಬಾರಿಸಿದ್ದರು.

1982ರಲ್ಲಿ ಜಯಲಲಿತಾ ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು. ಇಂಗ್ಲೀಷ್‍ನಲ್ಲಿ ಉತ್ತಮ ಹಿಡಿತ ಹೊಂದಿದ್ದ ಕಾರಣ ಜಯಲಲಿತಾರನ್ನು ಎಂಜಿ ರಾಮಚಂದ್ರನ್ ರಾಜ್ಯಸಭೆಗೆ ಕಳುಹಿಸಿದ್ದರು. 1984 ರಾಮಚಂದ್ರನ್ ಆರೋಗ್ಯ ಹದೆಗೆಟ್ಟಾಗ ಜಯಲಲಿತಾ ಕಾಂಗ್ರೆಸ್ ಸಹಕಾರವನ್ನು ಪಡೆದು ಪಕ್ಷವನ್ನು ಮುನ್ನಡೆಸಿದ್ದರು. 1987ರ ಆಗಸ್ಟ್ 24 ರಂದು ತಮ್ಮ 70ನೇ ವಯಸ್ಸಿನಲ್ಲಿ ಎಂಜಿ ರಾಮಚಂದ್ರನ್ ವಿಧಿವಶರಾದರು.

ನಿಧನದ ಸುದ್ದಿ ಕೇಳಿ ಜಯಲಲಿತಾ ಎಂಜಿಆರ್ ನಿವಾಸಕ್ಕೆ ಧಾವಿಸಿದ್ದರು. ಆದರೆ ಅಲ್ಲಿ ಅವರಿಗೆ ಪ್ರವೇಶ ಸಿಕ್ಕಿರಲಿಲ್ಲ. ರಾಜಾಜಿಹಾಲ್ ನಲ್ಲಿ ಎಂಜಿಆರ್ ಪಾರ್ಥಿವ ಶರೀರದ ಮುಂದೆ 2 ದಿನ ಮೌನವಾಗಿ ಜಯಲಲಿತಾ ನಿಂತಿದ್ದರು. ಶವಸಂಸ್ಕಾರ ಮೆರವಣಿಗೆ ವಾಹನ ಏರಲು ಜಯ ಮೇಲಕ್ಕೆ ಹತ್ತಿದ್ದಾಗ ಕೆಲ ಶಾಸಕರು ಹಾಗೂ ಎಂಜಿಆರ್ ಪತ್ನಿ ಜಾನಕಿ ಸಂಬಂಧಿಕರು, ಹಿಯಾಳಿಸಿ ವಾಹನದಿಂದ ಕೆಳಕ್ಕೆ ದೂಡಿದರು. ಜಯಲಲಿತಾರನ್ನು ಕೆಳಕ್ಕೆ ದೂಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಅಂದೇ ಬಾರಿ ಸದ್ದು ಮಾಡಿತ್ತು.

ಎಂಜಿಆರ್ ನಿಧನದ ಬಳಿಕ ಪಕ್ಷ ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ಬಣಗುತ್ತದೆ. ಜಾನಕಿ ರಾಮಚಂದ್ರನ್ 1988ರಲ್ಲಿ 96 ಮಂದಿ ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ವಿಧಾನಸಭೆಯಲ್ಲೂ ಬಹುಮತವನ್ನು ಸಾಬೀತು ಪಡಿಸುವಲ್ಲೂ ಯಶಸ್ವಿ ಆಗುತ್ತಾರೆ. ಆದರೆ ಪ್ರಧಾನಿ ರಾಜೀವ್ ಗಾಂಧಿ 356ನೇ ವಿಧಿಯನ್ನು ಬಳಸಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುತ್ತಾರೆ.

1989ರಲ್ಲಿ ಮೊದಲ ಬಾರಿಗೆ ಜಯಲಲಿತಾ ಶಾಸಕಿಯಾಗಿ ಆಯ್ಕೆ ಆಗುತ್ತಾರೆ. ಜಯಲಲಿತಾ ಸಾರಥ್ಯದಲ್ಲಿ ಎಐಎಡಿಎಂಕೆ 27 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಈ ಮೂಲಕ ಜಯಲಲಿತಾ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಆಗುತ್ತಾರೆ. ಈ ವೇಳೆ ಪಕ್ಷಕ್ಕೆ ಎರಡು ಎಲೆಯ ಚಿಹ್ನೆಯನ್ನು ಸೇರಿಸುತ್ತಾರೆ. ಎಂಜಿಆರ್ ಅಂತ್ಯಕ್ರಿಯೆ ವೇಳೆ ಸೆರೆಯಾದ ಫೋಟೋ ಮತ್ತು ವಿಡಿಯೋ ಜಯ ಗೆಲುವಿಗೆ ಸಹಕಾರಿ ಆಯ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

jayalalitha 1989

ಹರಿದ ಸೀರೆ ಫೋಟೋದಿಂದ ಗೆಲುವು!
ಮಾರ್ಚ್, 25 1989ರಂದು ತಮಿಳುನಾಡಿನ ವಿಧಾನಸೌಧದ ಒಳಗಡೆ ಚರ್ಚೆಯ ವೇಳೆ ಆಡಳಿತ ಪಕ್ಷ ಡಿಎಂಕೆ ಮತ್ತು ವಿರೋಧ ಪಕ್ಷದ ಶಾಸಕರ ಮಧ್ಯೆ ಗಲಾಟೆ ನಡೆಯುತ್ತದೆ. ಈ ವೇಳೆ ಜಯಲಲಿತಾ ಅವರನ್ನು ಡಿಎಂಕೆ ಸದಸ್ಯರು ನಿಂದಿಸುತ್ತಾರೆ. ಅವರ ಮೇಲೆ ದಾಳಿ ಮಾಡುತ್ತಾರೆ. ಈ ದಾಳಿಯ ವೇಳೆ ಜಯಲಲಿತಾ ಅವರ ಸೀರೆ ಹರಿದುಹೋಗುತ್ತದೆ. ಹರಿದ ಸೇರೆಯೊಂದಿಗೆ, ಆಳುತ್ತಾ ಸದನದದಿಂದ ಹೊರ ಬರುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಈ ಫೋಟೋ ನೋಡಿದ ಜನತೆ ಜಯಲಲಿತಾ ಪರ ವಾಲುತ್ತಾರೆ. “ಮಹಾಭಾರತದಲ್ಲಿ ತುಂಬಿದ ಸಭೆಯಲ್ಲಿ ದ್ರೌಪದಿಗೆ ಹೇಗೆ ಅಪಮಾನವಾಗುತ್ತದೋ ಅದೇ ರೀತಿಯಾಗಿ ಡಿಎಂಕೆ ನಾಯಕರು ಜಯಲಲಿತಾಗೆ ಅಪಮಾನ ಮಾಡಿದ್ದಾರೆ” ಎಂದು ಜಯ ಪರ ನಾಯಕರು ಪ್ರಚಾರ ಮಾಡುತ್ತಾರೆ. ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಹೊರತು ನಾನು ಸದನವನ್ನು ಪ್ರವೇಶ ಮಾಡುವುದಿಲ್ಲ ಎಂದು ಜಯ ಪ್ರತಿಜ್ಞೆ ಮಾಡುತ್ತಾರೆ. ಈ ಎಲ್ಲ ಘಟನೆಗಳು ನಡೆದ ಬಳಿಕ 1989ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಎಐಡಿಎಂಕೆ ಮೈತ್ರಿಕೂಟ 39 ಸ್ಥಾನಗಳಲ್ಲಿ 38ರಲ್ಲಿ ಗೆಲುವು ಸಾಧಿಸುತ್ತದೆ.

1991ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಯಾ ಪಕ್ಷ 164 ಸ್ಥಾನಗಳನ್ನು ಗೆಲ್ಲುತ್ತದೆ. ಮಿತ್ರ ಪಕ್ಷವಾದ ಕಾಂಗ್ರೆಸ್ 60ರಲ್ಲಿ ಜಯಗಳಿಸುತ್ತದೆ. ಒಟ್ಟು 234 ಕ್ಷೇತ್ರಗಳಲ್ಲಿ ಜಯಾ – ಕಾಂಗ್ರೆಸ್ ಮೈತ್ರಿಕೂಟ 224 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಭರ್ಜರಿ ಬಹುಮತ ಪಡೆದು ಜಯಲಲಿತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.

ಈಗ ಆರ್.ಕೆ ನಗರದ ಉಪಚುನಾವಣೆಗೂ ಮುನ್ನ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಡಿಸೆಂಬರ್ 24ರ ಫಲಿತಾಂಶ ಬಂದಾಗ ತಿಳಿಯಲಿದೆ.

 

jayalalitha hospital

https://www.youtube.com/watch?v=gZTeqiaWTh4&feature=youtu.be

Jayalalithaa Dead Body At Rajaji 01

jayalalitha death 2

jayalalitha death 3

jayalalitha death 4

jayalalitha death 5

jayalalitha death 1

jayalalitha

jayalalitha 1

jayalalitha died official announcement declared heart breaking news to amma followers

Share This Article
Leave a Comment

Leave a Reply

Your email address will not be published. Required fields are marked *