ವಿಡಿಯೋ: ಮಂಡ್ಯದಲ್ಲಿ ವಿದ್ಯುತ್ ಹರಿದು ಕಂಬದಲ್ಲೇ ಒದ್ದಾಡಿದ ಕಾರ್ಮಿಕನ ರಕ್ಷಣೆ

Public TV
1 Min Read
MND POWER 1

ಮಂಡ್ಯ: ವಿದ್ಯುತ್ ಕಂಬ ಸ್ಥಳಾಂತರದ ವೇಳೆ ತಂತಿಯಲ್ಲಿ ವಿದ್ಯುತ್ ಹರಿದು ಒದ್ದಾಡುತ್ತಿದ್ದ ಕಾರ್ಮಿಕನನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ನಾಗಮಂಗಲ ತಾಲೂಕು ಬೆಳ್ಳೂರಿನಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. ನಾಗಮಂಗಲ ತಾಲೂಕಿನ ಅರಸೇಗೌಡನಕೊಪ್ಪಲು ಗ್ರಾಮದ ಕುಮಾರ್ ಅಪಾಯದಿಂದ ಪಾರಾದ ವ್ಯಕ್ತಿ.

ಬೆಳ್ಳೂರಿನ ಸಂತೆ ಬೀದಿಯಲ್ಲಿ ವಿದ್ಯುತ್ ಕಂಬ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿತ್ತು. ಹೀಗಾಗಿ ಕಾರ್ಮಿಕ ಕುಮಾರ್ ವಿದ್ಯುತ್ ಕಂಬದ ಮೇಲೇರಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಂದು ತಂತಿಯಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹರಿದಿದ್ದು, ಪರಿಣಾಮ ಕಾರ್ಮಿಕ ಕುಮಾರ್ ಕಂಬದ ಮೇಲೆಯೇ ಒದ್ದಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ದೊಣ್ಣೆಯಿಂದ ಅವರನ್ನು ತಳ್ಳಿ ರಕ್ಷಣೆ ಮಾಡಿದ್ದಾರೆ.

ಕೂಡಲೇ ಬೆಳ್ಳೂರು ಉಪಶಾಖೆಗೆ ಕರೆ ಮಾಡಿ ಲೈನ್ ಆಫ್ ಮಾಡಿಸಿ, ಕುಮಾರ್ ಅವರನ್ನು ಕಂಬದಿಂದ ಕೆಳಗೆ ಇಳಿಸಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಅವರಿಗೆ ಬಿಜಿ ನಗರದ ಎಐಎಂಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತ್ರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ರವಾನಿಸಲಾಗಿದೆ. ಅಪಾಯದಿಂದ ಪಾರಾಗಿರುವ ಕುಮಾರ್, ಚೇತರಿಸಿಕೊಳ್ಳುತ್ತಿದ್ದಾರೆ. ಆದ್ರೆ, ಈ ಘಟನೆಗೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಆದ್ರಿಂದ ತಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತಾ ಸ್ಥಳೀಯರು ಆಗ್ರಹಿಸ್ತಿದ್ದಾರೆ.

https://www.youtube.com/watch?v=wM5ibO098AI

MND POWER

MND POWER 3

Share This Article
Leave a Comment

Leave a Reply

Your email address will not be published. Required fields are marked *