ಚಾಮರಾಜನಗರ: ಪಾಳು ಬಾವಿಗೆ ಬಿದ್ದು ನರಳಾಡುತ್ತಿದ್ದ ಹಸುವೊಂದನ್ನು ಅಗ್ನಿಶಾಮಕ ದಳ ಸಿಬ್ಬಂದಿಯ ಸಮಯ ಪ್ರಜ್ಞೆ ಹಾಗೂ ಜಾಣತನದಿಂದ ಮೇಲಕ್ಕೆ ಎತ್ತಿದ್ದಾರೆ.
ಹನೂರಿನ ರೈತರಾಗಿರುವ ಪ್ರಭು ಅವರಿಗೆ ಸೇರಿದ ಹಸು ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದಿತ್ತು. ಹಸು ಬಾವಿ ಬಿದ್ದಿದ್ದರಿಂದ ಗಾಬರಿಗೊಂಡು ಕಿರುಚಿಕೊಂಡಿದೆ. ಹಸುವಿನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಪ್ರಭು ಹಾಗೂ ಇತರೆ ರೈತರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಟ್ರ್ಯಾಕ್ಟರ್ ಗೆ ಕಟ್ಟಿದ್ದ ಹಗ್ಗವನ್ನು ಹಸುವಿಗೆ ಕಟ್ಟಿದ್ದಾರೆ. ಮೇಲಕ್ಕೆ ಎತ್ತುವಾಗ ಹಸುವಿನ ದೇಹಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಅಪಾಯವಾಗದೇ ಇರಲು ಹಸುವಿಗೆ ಕಟ್ಟಿದ್ದ ಹಗ್ಗಕ್ಕೆ ಇನ್ನೊಂದು ಕಡೆಯಿಂದ ಮತ್ತೊಂದು ಹಗ್ಗವನ್ನು ಕಟ್ಟಿದ್ದಾರೆ.
ಟ್ರ್ಯಾಕ್ಟರ್ ಹಿಂದಕ್ಕೆ ಹೋಗುತ್ತಿದ್ದಂತೆ ಹಸು ಮೇಲಕ್ಕೆ ಬಂದಿದ್ದು, ಇನ್ನೊಂದು ಹಗ್ಗದಿಂದ ದಂಡೆಗೆ ಎಳೆದು ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
https://www.youtube.com/watch?v=hcQ3oWBVTTg