ಚಿಕ್ಕಮಗಳೂರು: ಮೂರು ಮೊಟ್ಟೆಗಳನ್ನು ತಿಂದ ಮೇಲೆ ಮುಂದಕ್ಕೆ ಹೋಗದೇ ಒದ್ದಾಡುತ್ತಿದ್ದ ನಾಗರ ಹಾವನ್ನು ಉರಗತಜ್ಞರು ಯಶಸ್ವಿಯಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿರುವ ಚಂದ್ರು ಎಂಬವರ ಮನೆಗೆ ಆಹಾರ ಅರಸಿ ನಾಗರಹಾವೊಂದು ಬಂದಿತ್ತು. ಬಂದಿದ್ದ ಹಾವು ಅಡುಗೆಗೆ ತಂದಿಟ್ಟಿದ್ದ ಮೂರು ಕೋಳಿ ಮೊಟ್ಟೆಗಳನ್ನು ಸೇವಿಸಿ ಮುಂದಕ್ಕೆ ಚಲಿಸಲು ಆಗದೇ ಮನೆಯಲ್ಲೇ ಬೀಡುಬಿಟ್ಟಿತ್ತು.
ಇದರಿಂದ ಭಯಗೊಂಡ ಮನೆಯವರು ಕೂಡಲೇ ಸ್ನೇಕ್ ಆರಿಫ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಆರಿಫ್ ಮನೆಯಿಂದ ಹೊರ ತಂದು ಅಂಗಳದಲ್ಲಿ ಆಟವಾಡಿಸುವ ವೇಳೆ ಹಾವು ತಾನು ನುಂಗಿದ್ದ ಮೂರು ಕೋಳಿ ಮೊಟ್ಟೆಗಳನ್ನು ಹೊರ ಹಾಕಿದೆ.
ಈ ದೃಶ್ಯ ನೋಡಿ ಅಲ್ಲೇ ಇದ್ದ ಸ್ಥಳೀಯರು ಅಪರೂಪದ ಘಟನೆ ಕಂಡು ಆಶ್ಚರ್ಯ ಪಟ್ಟಿರುವುದಲ್ಲದೆ, ತಮ್ಮ ಮೊಬೈಲ್ ನಲ್ಲಿ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ. ಹಾವನ್ನು ಸೆರೆ ಹಿಡಿದ ಸ್ನೇಕ್ ಆರಿಫ್ ಸುರಕ್ಷಿತವಾಗಿ ಚಾರ್ಮಾಡಿ ಕಾಡಿಗೆ ಬಿಟ್ಟಿದ್ದಾರೆ.
https://www.youtube.com/watch?v=xeNn7czYHvA