ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸುರಿಯುವ ಮಳೆಯಲ್ಲಿ ರಾತ್ರಿಯಿಡೀ ರೋಗಿಯನ್ನು ಆಸ್ಪತ್ರೆಯವರು ಹೊರಗೆ ಹಾಕಿದ್ದಾರೆ.
ಬೆನ್ನು ಮೂಳೆ ಸ್ವಾಧೀನ ಕಳೆದುಕೊಂಡಿರುವ ಪ್ರಸನ್ನ ಎಂಬ 23 ವರ್ಷದ ಯುವಕನನ್ನ ಆಸ್ಪತ್ರೆಯವರು ಹೊರಗೆ ಹಾಕಿದ್ದಾರೆ. ಹೀಗಾಗಿ ಮಳೆಯಲ್ಲಿಯೇ ಆಸ್ಪತ್ರೆಯ ಹೊರಗಡೆ ರೋಗಿ ಕಾದಿದ್ದಾರೆ.
ಮರದಿಂದ ಕೆಳಗೆ ಬಿದ್ದು ಕೈಕಾಲು ಸ್ವಾಧೀನ ಕಳೆದುಕೊಂಡಿರುವ ಪ್ರಸನ್ನ ರಾಮನಗರದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಆದ್ರೆ ಕಳೆದ ಎರಡು ದಿನದಿಂದ ಆಸ್ಪತ್ರೆಯವರು ಪ್ರಸನ್ನರನ್ನು ಹೊರಗೆ ಹಾಕಿದ್ದು, ಮಳೆ ಬರುತ್ತಿದೆ ಆಸ್ಪತ್ರೆಯೊಳಗೆ ಕರೆದುಕೊಳ್ಳಿ ಎಂದು ಅಂಗಲಾಚಿದ್ರೂ ಆಸ್ಪತ್ರೆ ಸಿಬ್ಬಂದಿ ಕ್ಯಾರೆ ಅಂದಿಲ್ಲ.