ರೈತರ ಬಳಿ ಸುಲಿಗೆಗೆ ಇಳಿದ ವೆಟರ್ನರಿ ಸಹಾಯಕ ವೈದ್ಯ- ಲಂಚ ಕೊಡದಿದ್ರೆ ಇಲ್ಲ ಚಿಕಿತ್ಸೆ

Public TV
1 Min Read
kpl doctor F

ಕೊಪ್ಪಳ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ ಕೆಲವು ಅಧಿಕಾರಿಗಳು ಸರ್ಕಾರಿ ಕೆಲಸ ಎಂದರೆ ಸುಲಿಗೆ ಮಾಡುವುದು ಎಂದು ತಿಳಿದಿದ್ದಾರೆ. ರೈತರ ಹಸುಗಳಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ನೇಮಕವಾದವ ವೈದ್ಯರ ಸಹಾಯಕ ವಿರುದ್ಧ ಹಣ ಸುಲಿಗೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಪಶುಚಿಕಿತ್ಸಾಲಯದ ವೈದ್ಯಕೀಯ ಸಹಾಯಕ ಲೋಕೇಶ್ ಎಂಬವರ ವಿರುದ್ಧ ಲಂಚದ ಆರೋಪ ಕೇಳಿ ಬಂದಿದೆ. ತಾಲೂಕಿನ ಟಣಕನಕಲ್ ಗ್ರಾಮದ ರೈತ ಯಮನೂರಪ್ಪ ನಾಯಕ್ 22 ಹಸುಗಳ ಡೈರಿ ಹೊಂದಿದ್ದಾರೆ. ನನ್ನ ಹಸುಗಳಿಗೆ ಚಿಕಿತ್ಸೆ ನೀಡಬೇಕಾದರೆ ಪತ್ರಿ ಹಸುವಿಗೆ 500 ರೂಪಾಯಿಯಂತೆ ಲಂಚ ಕೇಳಿದ್ದಾನೆ. 8 ಸಾವಿರ ರೂ. ಕೊಡೋದಾಗಿ ಹೇಳಿದ್ರೂ ಒಪ್ಪದ ಲೋಕೇಶ್ 10 ಸಾವಿರ ನೀಡುವಂತೆ ಕೇಳಿದ್ದಾನೆ ಎಂದು ರೈತ ಯಮನೂರಪ್ಪ ಹೇಳುತ್ತಾರೆ.

KPL Doctor 9

ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ಹೇಳಬಾರದು ಅಂತಲೂ ಲೋಕೇಶ್ ಹೇಳಿದ್ದು, ಅಲ್ಲದೆ ಕಮಿಷನ್ ಆಸೆಗೆ ಬಿದ್ದು ವಿನಾಕಾರಣ 10 ಸಾವಿರ ಮೌಲ್ಯದ ಔಷಧಿ ತರಿಸಲಾಗಿದೆ. ಈ ವಿಚಾರ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಲೋಕೇಶ್ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಜ್ ಶೆಟ್ಟರ್ ತಿಳಿಸಿದ್ದಾರೆ.

KPL Doctor 3

KPL Doctor 4

KPL Doctor 5

KPL Doctor 6

KPL Doctor 7

KPL Doctor 8

KPL Doctor 1

KPL Doctor 2

Share This Article
Leave a Comment

Leave a Reply

Your email address will not be published. Required fields are marked *