ದಾವಣಗೆರೆ: ವಿಬಿ-ಜಿ ರಾಮ್-ಜಿ (VB-G RAM G ) ಯೋಜನೆಗೆ ತನ್ನ ಪಾಲಿನ ಹಣ ಕೊಡೋಕಾಗದೇ ಕಾಂಗ್ರೆಸ್ (Congress) ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ಆರೋಪಿಸಿದ್ದಾರೆ.
ಹೊನ್ನಾಳಿಯಲ್ಲಿ ವಿಬಿ-ಜಿ ರಾಮ್-ಜಿ ಯೋಜನೆ ಪರ ನಡೆದ ಜನಜಾಗೃತಿ ಜಾಥದಲ್ಲಿ ಅವರು ಮಾತನಾಡಿದರು. ಈ ವೇಳೆ, ವಿಬಿ-ಜಿ ರಾಮ್-ಜಿ ಬಗ್ಗೆ ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ದೇಶದ ಮೂಲ ನಿರ್ಮಾಣವೇ ವಿಬಿ-ಜಿ ರಾಮ್ -ಜಿ ಮೂಲ ಆಶಯವಾಗಿದೆ. ಆದರೆ ತನ್ನ ಪಾಲಿನ ಹಣ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: VB-G RAM G ಕಾಯ್ದೆ ಕೇಂದ್ರ ಸರ್ಕಾರ ವಾಪಸ್ ಪಡೆಯಲ್ಲ: ಧರ್ಮೇಂದ್ರ ಪ್ರಧಾನ್
ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕಿನಾದ್ಯಂತ ಜನಜಾಗೃತಿ ಜಾಥಾ ನಡೆಯುತ್ತಿದೆ. ತಾಲೂಕಿನ ಪ್ರಮುಖ ಸ್ಥಳಗಳಾದ ಹಿರೇಗೋಣಿಗೆರೆ, ಬೆಲ್ಲಿಮಲ್ಲೂರು, ಕುಂದೂರು, ಬೆಳಗುತ್ತಿ ಗ್ರಾಮ ಸೇರಿದಂತೆ ವಿವಿಧಡೆ ಜಾಥಾ ನಡೆಸಲಾಗುತ್ತಿದೆ. ಇದನ್ನೂ ಓದಿ: G Ram G ಕಾಯ್ದೆ | ಕಾಂಗ್ರೆಸ್ ಹೋರಾಟ ನಿಲ್ಲಲ್ಲ, ಇಲ್ಲಿಗೆ ಬಿಡಲ್ಲ – ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

