ಬೆಂಗಳೂರು: ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾಡ್ರ್ಸ್ನ ಉಪಾಧ್ಯಕ್ಷರಾಗಿ ವಸಂತ ಕವಿತಾ ಆಯ್ಕೆಯಾಗಿದ್ದಾರೆ.
ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಶನ್ ಸ್ಥಾಪಕಿ, ಕಾರ್ಯದರ್ಶಿ ಮತ್ತು ತಿರುಪತಿ ತಿರುಮಲ ದೇವಸ್ಥಾನ ಎಲ್.ಎ.ಸಿ ಬೆಂಗಳೂರು ಕರ್ನಾಟಕ ಹಾಗೂ ಲಾಯನ್ ಕ್ಯಾನ್ಬೆರಾ ಇಂಟರ್ನ್ಯಾಷನಲ್ ಕ್ಲಬ್ನಲ್ಲಿ ವಸಂತ ಕವಿತಾ ಅಧ್ಯಕ್ಷರಾದ್ದರು. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ
ಈಗ ವಸಂತ ಕವಿತಾ ಅವರನ್ನು ಕರ್ನಾಟಕ ರಾಜ್ಯಕ್ಕಾಗಿ ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾಡ್ರ್ಸ್ನ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಕ್ಲಬ್ ಅಧ್ಯಕ್ಷರಾದ ಡಾ.ದಿವಾಕರ್ ಶುಕ್ಲಾ, ಸಂತೋಷ್ ಶುಕ್ಲಾ ಮತ್ತು ಶಿಖಾ ಶರ್ಮಾ ಪತ್ರ ನೀಡಿ ಗೌರವಿಸಿದರು. ಇದನ್ನೂ ಓದಿ: ಸಾಲದ ಕಂತನ್ನು ಪಾವತಿ ಮಾಡದ್ದಕ್ಕೆ ಅಣ್ಣನನ್ನೆ ಕೊಂದ ಪಾಪಿ ತಮ್ಮ
ಸಚಿವ ರಾಮ್ ದಾಸ್ ಅಠವಾಲೆ, ಬಾಲಿವುಡ್ ಗೀತರಚನೆಕಾರ ಸಮೀರ್ ಅಂಜಾಮ್ ಮತ್ತು ಹಾಡುಗಾರರಾದ ಉದಿತ್ ನಾರಾಯಣ್ ಸೇರಿದಂತೆ ನಟಿ ಜಯಪ್ರದಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.