ಹೈದರಾಬಾದ್: ಬಹುತೇಕ ಬಾಲಿವುಡ್ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಉದ್ಯಮದಲ್ಲಿ ತಮಗಾದ ಕರಾಳ ಅನುಭವಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದೀಗ ತಮಿಳು ಮತ್ತು ತೆಲಗು ನಟಿ ವಾಣಿ ಭಜನ್ ಆರಂಭದಲ್ಲಿ ತಾವು ಎದುರಿಸಿದ್ದ ದಿನಗಳನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕೆಲವರು ಅಡ್ಜಸ್ಟ್ ಬಗ್ಗೆ ಮಾತನಾಡುತ್ತಿದ್ದರು. ಆದರೆ ಯಾರು ನನ್ನ ಜೊತೆ ಈ ಕುರಿತು ನೇರವಾಗಿ ಮಾತನಾಡಿಲ್ಲ. ಮ್ಯಾನೇಜರ್ ಮತ್ತು ನಿರ್ದೇಶಕರ ಮೂಲಕ ಮಾತುಗಳನ್ನಾಡಿದ್ದಾರೆ. ಬಹುತೇಕರು ಮ್ಯಾನೇಜರ್ ಮೂಲಕ ನನ್ನನ್ನು ಸಂಪರ್ಕಿಸುವ ಪ್ರಯತ್ನ ಸಹ ನಡೆಸಿದ್ದರು. ಫೋನ್ ಕರೆಗಳ ಬಗ್ಗೆ ನಾನು ಧ್ಯಾನ ನೀಡಲಿಲ್ಲ ಎಂದು ಹೇಳಿದ್ದಾರೆ.
ಈ ರೀತಿಯ ಕೆಟ್ಟ ಅನುಭವಗಳಿಂದಾಗಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಕಿರುತೆರೆಯಲ್ಲಿ ನನಗೆ ಸ್ಥಾನವಿದ್ದರಿಂದ ದೊಡ್ಡ ನಟಿಯಾಗಬೇಕೆಂಬ ಆಸೆ ನನಗಿರಲಿಲ್ಲ. ಇಂತಹ ಅಡ್ಜಸ್ಟ್ ಗಳಿಂದ ದೊಡ್ಡ ನಟಿಯಾಗಲು ಸಾಧ್ಯ. ಆದ್ರೆ ನಾನು ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಇನ್ನು ದೊಡ್ಡ ಸ್ಟಾರ್ ನಟಿಯರೆಲ್ಲ ಇದೇ ರೀತಿಯಲ್ಲಿ ಉನ್ನತ ಸ್ಥಾನ ತಲುಪಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಇಂತಹ ಜನರ ಜೊತೆ ಸಂಘರ್ಷ ನಡೆಸಿ, ಸತತ ಪರಿಶ್ರಮದಿಂದಾಗಿ ಟಾಪ್ ಸ್ಥಾನಲ್ಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದರು.
‘ಓ ಮೈ ಕಡವುಲೆ’ ತಮಿಳು ಸಿನಿಮಾದಲ್ಲಿ ವಾಣಿ ಭಜನ್ ಕೆಲಸ ಮಾಡಿದ್ದಾರೆ. ‘ದೇವಕಮಲ್’ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿರುವ ವಾಣಿ, ಸದ್ಯ ಫ್ಯಾಶನ್ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ.