ಚಾಮರಾಜನಗರ: ಡಿ.ಕೆ.ಶಿವಕುಮಾರ್ ಅವರೊಂದಿಗೆ ಊಟ, ತಿಂಡಿಗೆ ಹೋಗುವುದು ತಪ್ಪಾ? ಡಿಕೆಶಿ ಜೊತೆ ಯಾರೂ ಹೋಗುವ ಹಾಗೇ ಇಲ್ವಾ? ಎಂದು ಸಚಿವ ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತಿದ್ದಾರೆ ಎಂಬ ವದಂತಿ ಬಗ್ಗೆ ಚಾಮರಾಜನಗರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಮೈನರ್ ವಿಚಾರ ಬಿಟ್ಟುಬಿಡಿ. ಚುನಾವಣೆಗೆ ಇನ್ನೂ 15-16 ತಿಂಗಳು ಇದೆ. ಈ ಅವಧಿಯಲ್ಲಿ ನಾವೇನು ಮಾಡಬೇಕು, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಹತ್ತಿರ ಏನು ಒತ್ತಡ ತರಬೇಕು. ಈ ಬಗ್ಗೆ ನನಗೆ ಸಲಹೆ ಕೊಡಿ ಮನವಿ ಮಾಡಿದರು. ಇದನ್ನೂ ಓದಿ: ಬಂಡೀಪುರದಲ್ಲಿ ಹುಲಿ ಗಣತಿ ಆರಂಭ: ಲೆಕ್ಕ ಹೇಗೆ ಹಾಕುತ್ತಾರೆ? ಇಲ್ಲಿದೆ ಪೂರ್ಣ ಮಾಹಿತಿ
ರಾಜಕೀಯ ಬೆಳವಣಿಗೆ ಬಗ್ಗೆ ಬೆಂಗಳೂರಿನವರು ಏನು ಮಾಡಿಕೊಳ್ಳುತ್ತಾರೆ. ಬೆಂಗಳೂರು ಕಾಸ್ಮೋ ಪಾಲಿಟಿನ್ ಸಿಟಿ. ಯಾರೂ ಎಲ್ಲಿಗೆ ಹೋಗುತ್ತಾರೆ. ಎಲ್ಲಿಗೆ ಬರುತ್ತಾರೆ ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲ. ಯಾವುದೋ ರೆಸಾರ್ಟ್ ಡಿಕೆಶಿಗೆ ಮಾತ್ರ ಇರುತ್ತಾ? ಜೆಡಿಎಸ್, ಬಿಜೆಪಿಗೆ ಮಾತ್ರ ಇರುತ್ತಾ? ಅದು ಎಲ್ಲರಿಗೂ ರೆಸಾರ್ಟ್. ಅದು ಇರುವುದು ಕೆಲವರು ಆರಾಮವಾಗಿ ಇರುವುದಕ್ಕೆ ನಮ್ಮಂತಹವರು ಇರುವುದು ಬೀದಿ ಸುತ್ತುವುದಕ್ಕೆ ಎಂದು ಹೇಳಿದರು.
ಬಿಜೆಪಿಯ ಕೆಲ ಶಾಸಕರು, ಸಚಿವರು ಕಾಂಗ್ರೆಸ್ಗೆ ಹೋಗುತ್ತಾರೆ ಎಂಬ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ, ಯತ್ನಾಳ್ ಅವರು ಗೌಡ್ರು. ವಿಜಯಪುರದ ನಾಯಕರು ಅವರು ಏನು ಹೇಳಿದ್ದಾರೆಂದು ಖಂಡಿತವಾಗಿ ನನಗೆ ಗೊತ್ತಿಲ್ಲ. ನಾನು ಅವರು ಒಂದು ಸಾವಿರ ಕಿಲೋಮೀಟರ್ ದೂರದಲ್ಲಿದ್ದೇವೆ. ಅವರ ಜೊತೆ ಮಾತನಾಡಲು ಫೋನ್ ಮಾಡಿದ್ದೆ. ಆದರೆ ಅವರು ನನ್ನ ಸ್ವೀಕರಿಸಲಿಲ್ಲ ಎಂದರು. ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಆನೆ ವಿದ್ಯುತ್ ಶಾಕಿಗೆ ಬಲಿ